ಪೊಲಿಪುಗುಡ್ಡೆ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ರತ್ನಾಕರ ಶೆಟ್ಟಿಗೆ ಫಿದಾ ಆದ ಮತದಾರರು- ಸ್ವಯಂಪ್ರೇರಿತರಾಗಿ ಫೀಲ್ಡ್ಗೆ ಇಳಿದ ಯುವಕರು: vishwanews24

Featured, ಉಡುಪಿ

ಪೊಲಿಪುಗುಡ್ಡೆ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ರತ್ನಾಕರ ಶೆಟ್ಟಿಗೆ ಫಿದಾ ಆದ ಮತದಾರರು- ಸ್ವಯಂಪ್ರೇರಿತರಾಗಿ ಫೀಲ್ಡ್ಗೆ ಇಳಿದ ಯುವಕರು

ಕಾಪು: ಪುರಸಭಾ ಚುನಾವಣೆಯ ರಂಗು ದಿನಕ್ಕೊಂದು ವಾರ್ಡಿನಲ್ಲಿ ಬದಲಾಗುತ್ತಿದೆ ಅಭ್ಯರ್ಥಿಗಳ ಪರ ವಿರೋಧ ಚರ್ಚೆ ನಡೆಯುತ್ತಿರುವಾಗಲೆ ಪೊಲಿಪುಗುಡ್ಡೆಯ ವಾರ್ಡಿನಲ್ಲಿ ಮಾತ್ರ ಹೊಸ ಟ್ರೆಂಡ್ ಎದ್ದಿದೆ.
ಮತದಾರರೇ ಕಾರ್ಯಕರ್ತರಾಗಿ ಸ್ವಯಂಪ್ರೇರಿತವಾಗಿ ರತ್ನಾಕರ ಶೆಟ್ಟಿಯ ಪರ ಮತಯಾಚನೆಗೆ ಇಳಿದಿರುವ ಘಟನೆ ವರದಿಯಾಗಿದೆ.ಇಡೀ ವಾರ್ಡಿನಲ್ಲಿ ಯುವಕರು ದಂಡುದAಡಾಗಿ ಫೀಲ್ಡ್ಗೆ ಇಳಿದು ಮತಯಾಚನೆ ಮಾಡುತ್ತಿರುವುದು ಹೊಸ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಂತಾಗಿದೆ.


ಜಾತಿಮತ ಅಂತರದ ಭೇದವಿಲ್ಲದ ” ನಮ್ಮ ರತ್ತಣ್ನ” ಎಂದು ವಾಟ್ಸಪ್‌ನಲ್ಲಿ ಸ್ಟೇಟಸ್ ಮಾಡಿಕೊಂಡು ಪ್ರಚಾರ ಶುರುವಾಗಿದೆ.ಎಲ್ಲಾ ವರ್ಗದ ಜನರನ್ನು ಅತ್ಯಂತ ಪ್ರೀತಿಯಿಂದ ಮಾತಾಡಿಸಿ ನಗುಮುಖದ ಸರಳ ಜೀವಿ ಅನಿಸಿಕೊಂಡಿರುವ ರತ್ನಾಕರ ಶೆಟ್ಟಿ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ರಂಗದಲ್ಲಿಯೂ ಕೂಡ ಸೈ ಅನಿಸಿಕೊಂಡವರು, ಕಾರ್ಯಕರ್ತರ ನಾಡಿಮಿಡಿತ ಅರಿದಿರುವ ಇವರು ಯಾವುದೇ ಸಮಯದಲ್ಲೂ ತುರ್ತಾಗಿ ಮತದಾರನ ಮನೆಬಾಗಿಲಿಗೆ ಸೇವೆ ನೀಡುವ ಗುಣ ಎಲ್ಲಾರೂ ಮೆಚ್ಚುವಂತದ್ದು.ಯಾವುದೇ ವ್ಯಕ್ತಿಯನ್ನು ನಿಂದಿಸದೆ ಜನಸೇವೆ ಜನಾರ್ಧನನ ಸೇವೆ ಎಂದು ಅನಿಸಿಕೊಂಡಿರುವ ರತ್ನಾಕರ ಶೆಟ್ಟಿ ಪುರಸಭೆಗೆ ಈ ಸಲದ ಮಟ್ಟಿಗೆ ಪೊಲಿಪು ಗುಡ್ಡೆಯಿಂದ ಅತ್ಯಂತ ಅನಿವಾರ್ಯವಾಗಿದೆ ಮತ್ತು ಅಗತ್ಯವೂ ಆಗಿದೆ ಎಂಬುದು ಮತದಾರರ ಆಶಯ.