ಬಿಜೆಪಿ ಶೀಘ್ರದಲ್ಲಿಯೇ ಸಾರ್ವಕರ್ ಅವರನ್ನು ರಾಷ್ಟ್ರಪಿತ ಎಂದು ಘೋಷಿಸಲಿದೆ : ಅಸಾದುದ್ದೀನ್ ಒವೈಸಿ – Vishwanews24
ಬಿಜೆಪಿ ಶೀಘ್ರದಲ್ಲಿಯೇ ಸಾರ್ವಕರ್ ಅವರನ್ನು ರಾಷ್ಟ್ರಪಿತ ಎಂದು ಘೋಷಿಸಲಿದೆ : ಅಸಾದುದ್ದೀನ್ ಒವೈಸಿ – Vishwanews24
ಹೈದರಾಬಾದ್ : ಮಹಾತ್ಮ ಗಾಂಧಿ ಕೋರಿಕೆ ಮೇರೆಗೆ ಸಾರ್ವಕರ್ ಅವರು ಬಿಡುಗಡೆಗಾಗಿ ಕ್ಷಮಾಪಣೆ ನೀಡುವಂತೆ ಬ್ರಿಟಿಷರಿಗೆ ಪತ್ರ ಬರೆದಿದ್ದರು ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಬಿಜೆಪಿ ಶೀಘ್ರದಲ್ಲಿಯೇ ವಿನಾಯಕ್ ದಾಮೋದರ್ ಸಾರ್ವಕರ್ ಅವರನ್ನು ರಾಷ್ಟ್ರಪಿತ ಎಂದು ಘೋಷಿಸಲಿದೆ ಎಂದು ಆರೋಪಿಸಿರುವುದಾಗಿ ವರದಿ ತಿಳಿಸಿದೆ.
ಎಎನ್ ಐ ಜೊತೆ ಮಾತನಾಡಿರುವ ಒವೈಸಿ, ಭಾರತೀಯ ಜನತಾ ಪಕ್ಷ ತಿರುಚಿದ ಇತಿಹಾಸವನ್ನು ಪ್ರಸ್ತುತಪಡಿಸುತ್ತಿದೆ. ಒಂದು ವೇಳೆ ಇದು ಮುಂದುವರಿದರೆ, ಅವರು ಮಹಾತ್ಮ ಗಾಂಧಿ ಹೆಸರನ್ನು ಕಿತ್ತೆಸೆದು ಸಾವರ್ಕರ್ ಅವರನ್ನು ರಾಷ್ಟ್ರಪಿತ ಎಂದು ಘೋಷಿಸುತ್ತಾರೆ. ಮಹಾತ್ಮ ಗಾಂಧಿ ಹತ್ಯೆಯಲ್ಲಿ ಆರೋಪಿ ಎನ್ನಲಾಗಿದ್ದ ಸಾವರ್ಕರ್ ಅವರನ್ನು ಜಸ್ಟೀಸ್ ಜೀವನ್ ಲಾಲ್ ಕಪೂರ್ ಸಮಿತಿ ತನಿಖೆಗೊಳಪಡಿಸಿತ್ತು ಎಂದು ಒವೈಸಿ ದೂರಿದ್ದಾರೆ.
ಮಹಾತ್ಮ ಗಾಂಧಿ ಅವರ ಕೋರಿಕೆ ಮೇರೆಗೆ ಸಾವರ್ಕರ್ ಅವರು ಕ್ಷಮಾಪಣೆ ನೀಡುವಂತೆ ಬ್ರಿಟಿಷರಿಗೆ ಪತ್ರ ಬರೆದಿದ್ದರು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದರು.
ಡಿಕೆಶಿ ವಿರುದ್ಧ ನಾನು ಹೇಳಿಕೆ ನೀಡಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ : ಉಗ್ರಪ್ಪ – Vishwanews24
