ಬಿರುಗಾಳಿಯಿಂದ ಅಪಾಯಕ್ಕೆ ಸಿಲುಕಿದ್ದ 24 ಮೀನುಗಾರರ ಮಂಗಳೂರು ಕೋಸ್ಟ್ ಗಾರ್ಡ್ ನೌಕೆಯ ಮೂಲಕ ರಕ್ಷಣೆ -Vishwanews24
ಬಿರುಗಾಳಿಯಿಂದ ಅಪಾಯಕ್ಕೆ ಸಿಲುಕಿದ್ದ 24 ಮೀನುಗಾರರ ಮಂಗಳೂರು ಕೋಸ್ಟ್ ಗಾರ್ಡ್ ನೌಕೆಯ ಮೂಲಕ ರಕ್ಷಣೆ -Vishwanews24
ಕಾರವಾರ: ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಬಿರುಗಾಳಿಯಿಂದ ಅಪಾಯಕ್ಕೆ ಸಿಲುಕಿದ್ದ 24 ಮೀನುಗಾರರನ್ನು ಮಂಗಳೂರು ಕೋಸ್ಟ್ ಗಾರ್ಡ್ ನೌಕೆಯ ಮೂಲಕ ರಕ್ಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ಹೊನ್ನಾವರ ತೀರದಿಂದ ಸುಮಾರು 15 ಕಿಮೀ ಆಳ ಸಮುದ್ರದಲ್ಲಿ ನೇತ್ರಾಣಿ ನಡುಗಡ್ಡೆ ಸಮೀಪ ಕಮರುಲ್ ಬಾಹರ್ ಎಂಬ ಮೀನುಗಾರಿಕೆ ಬೋಟ್ ಗುರುವಾರದಿಂದ ಅಪಾಯಕ್ಕೆ ಸಿಕ್ಕಿಹಾಕಿಕೊಂಡಿತ್ತು.
ಉತ್ತರ ಕನ್ನಡ ಎಸ್ ಪಿ ಶಿವ ಪ್ರಕಾಶ ದೇವರಾಜು ಜಾಲತಾಣಗಳ ಮೂಲಕ ಕೋಸ್ಟ್ ಗಾರ್ಡ್ ಗೆ ಧನ್ಯವಾದ ತಿಳಿಸಿದ್ದಾರೆ.
ಗುರುವಾರದಿಂದ ಉತ್ತರ ಕನ್ನಡ ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಕಾರವಾರದಲ್ಲಿ ಶುಕ್ರವಾರ 60 ಮಿಮೀಗೂ ಅಧಿಕ ಮಳೆಯಾಗಿದೆ. ಸೆ.12 ರವರೆಗೂ ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
