ಬ್ರಹ್ಮಾವರ: ಸೀತಾನದಿಯಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆ – Vishwanews24
ಬ್ರಹ್ಮಾವರ: ಸೀತಾನದಿಯಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆ – Vishwanews24
ಉಡುಪಿ: ಬ್ರಹ್ಮಾವರ ತಾಲೂಕು, ಪೆಜಮಂಗೂರು ಗ್ರಾಮದ, ಗುಂಡಾಲು ಕಿಂಡಿ ಅಣೆಕಟ್ಟಿನ ಬಳಿ, ಸೀತಾನದಿಯಲ್ಲಿ ನವಜಾತ ಗಂಡು ಶಿಶುವೊಂದರ ಮೃತ ದೇಹ ಬ್ರಹ್ಮಾವರ ತಾಲೂಕು, ಪೆಜಮಂಗೂರು ಗ್ರಾಮದ, ಗುಂಡಾಲು ಕಿಂಡಿ ಅಣೆಕಟ್ಟಿನ ಬಳಿ, ಸೀತಾನದಿಯಲ್ಲಿ ಪತ್ತೆಯಾದ ಘಟನೆ ಸೋಮವಾರ ಸಂಭವಿಸಿದೆ
ಗುಂಡಾಲು ಕಿಂಡಿ ಅಣೆಕಟ್ಟಿನ ಬಳಿ, ಸೀತಾನದಿಯಲ್ಲಿ ನವಜಾತ ಗಂಡು ಮಗು ಒಂದರ ದೇಹ ನೀರಿನಲ್ಲಿ ತೇಲುತ್ತಿರುವುದುನ್ನು ಕಂಡು ಕೊಕ್ಕೃಣೆ ಗ್ರಾಪಂ ಸದಸ್ಯರಾದ ಪ್ರಜ್ವತ್ ಕೆ.ಎಸ್ ಬ್ರಹ್ಮಾವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಅದರಂತೆ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ಪರಿಶೀಲಿಸಿದಾಗ ಆ ಮಗುವು ಗಂಡು ಶಿಶು ಆಗಿದ್ದು, ಮುಖ ಹಾಗೂ ತಲೆಯ ಭಾಗ ಜಲಚರಗಳು ತಿಂದು ಕೊಳೆತ ಸ್ಥಿತಿಯಲ್ಲಿ ಇರುತ್ತದೆ. ಅಲ್ಲದೇ ಮಗುವಿನ ಹೊಕ್ಕುಳ ಬಳ್ಳಿ ಕೂಡ ಮೃತ ದೇಹದೊಂದಿಗೆ ಇರುವುದು ಕಂಡುಬಂದಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಭಾರೀ ಮಳೆ ಸಾಧ್ಯತೆ ಕರ್ನಾಟಕದ 13 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ – Vishwanews24
