ಭಾರತ ನಗರ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರೀಶ್ ನಾಯಕ್ ಪರ ಬಿಲ್ಲವ ಮುಖಂಡ ರಾಜಶೇಖರ ಕೋಟ್ಯಾನ್ ಮತಯಾಚನೆ.vishwanews24

Featured, ಉಡುಪಿ

ಭಾರತ ನಗರ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರೀಶ್ ನಾಯಕ್ ಪರ ಬಿಲ್ಲವ ಮುಖಂಡ ರಾಜಶೇಖರ ಕೋಟ್ಯಾನ್ ಮತಯಾಚನೆ.vishwanews24

ಕಾಪು:  ಪುರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾರತ ನಗರ ವಾರ್ಡಿನಲ್ಲಿ ತೀವ್ರ ಪೈಪೋಟಿ ಆರಂಭವಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರಚಾರ ಜೋರಾಗಿ ನಡೆಯುತ್ತಿದೆ ಈ ನಡುವೆ ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ಮತ್ತು ಕಾಂಗ್ರೆಸ್ ಮುಖಂಡ ರಾಜಶೇಖರ ಕೋಟ್ಯಾನ್ ಇವರು ಕಾಂಗ್ರೆಸ್ ಅಭ್ಯರ್ಥಿ ಹರೀಶ್ ನಾಯಕ್ ಅವರ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
ಈ ಸಂದರ್ಭ ಮಾಧ್ಯಮದ ಜತೆ ಮಾತನಾಡಿದ ಅವರು ಈ ಬಾರಿ ಭಾರತ ನಗರ ವಾರ್ಡಿನಲ್ಲಿ ಹರೀಶ್ ನಾಯಕ್ ಅವರಿಗೆ ಜನ ಅಪೂರ್ವ ಬೆಂಬಲ ನೀಡುತ್ತಿದ್ದಾರೆ .ಇದು ಗೆಲುವಿನ ಸೂಚನೆ ಎಂಬುದು ನನ್ನ ಭಾವನೆ ಹರೀಶ್ ನಾಯಕ್ ಅವರನ್ನು ತುಂಬಾ ಸಮಯದಿಂದ ಗಮನಿಸಿದ್ದೇನೆ ಸಮಾಜಸೇವೆಯಲ್ಲಿ ಪ್ರತಿಫಲ ಅಪೇಕ್ಷೆ ಇಲ್ಲದೆ ಸೇವೆಯನ್ನು ಮಾಡುತ್ತಿದ್ದಾರೆ ಹಾಗಾಗಿ ಈ ಬಾರಿ ಹರೀಶ್ ನಾಯಕ್ ಗೆದ್ದು ಬಂದರೆ ಈ ಭಾಗದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂಬ ನಂಬಿಕೆ ಇದೆ ಅವರಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನವೀನ್ ಚಂದ್ರ ಶೆಟ್ಟಿ ಪಡುಬಿದ್ರಿ, ದಿನೇಶ್ ಕೋಟ್ಯಾನ್ ,  ಅಬ್ದುಲ್ ಅಜೀಜ್ ಶಾರದಾ ಪೂಜಾರ್ತಿ ಮೊದಲಾದವರು ಉಪಸ್ಥಿತರಿದ್ದರು.

Leave a Reply