ಭಾರೀ ಮಳೆ ಹಿನ್ನಲೆ : ಉಡುಪಿ ದ. ಕ ಜಿಲ್ಲೆಯಲ್ಲಿ ನಾಳೆ ಪಿಯುಸಿವರೆಗೆ ಶಾಲೆ ರಜೆ ಘೋಷಣೆ – vishwanews24
ಭಾರೀ ಮಳೆ ಹಿನ್ನಲೆ : ಉಡುಪಿ ದ. ಕ ಜಿಲ್ಲೆಯಲ್ಲಿ ನಾಳೆ ಪಿಯುಸಿವರೆಗೆ ಶಾಲೆ ರಜೆ ಘೋಷಣೆ
ಮಂಗಳೂರು/ಉಡುಪಿ : ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನಲೆ ಎರಡೂ ಜಿಲ್ಲೆಗಳಲ್ಲಿ ನಾಳೆ ಅಗಸ್ಟ್ 1 ರಂದು ಪಿಯುಸಿವರೆಗೆ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಈಗಾಗಲೇ ಹಲವು ತಗ್ಗು ಪ್ರದೇಶಗಳು ನೀರು ತುಂಬಿ ಪ್ರವಾಹ ಪರಿಸ್ಥಿತಿ ಬಂದಿದೆ. ಈ ಹಿನ್ನಲೆ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಾಳೆ ಅಗಸ್ಟ್ 1 ರಂದು ಎಲ್ಲಾಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
