ಮಂಗಳೂರು/ಉಡುಪಿ : ಕರಾವಳಿಯಲ್ಲಿ ಆಹಾರ ಪರೀಕ್ಷಾ ಪ್ರಯೋಗಾಲಯಗಳೇ ಇಲ್ಲ , ದ.ಕ.ದಲ್ಲಿ ಆಹಾರ ಸುರಕ್ಷತೆ ತಪಾಸಣೆಗೆ ಒಬ್ಬರೇ ಅಧಿಕಾರಿ – Vishwanews24

Featured, ಉಡುಪಿ, ದಕ್ಷಿಣ ಕನ್ನಡ

ಮಂಗಳೂರು/ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಆಹಾರ ಪರೀಕ್ಷಾ ಪ್ರಯೋಗಾಲಯಗಳೇ ಇಲ್ಲ ..

ದ.ಕ.ದಲ್ಲಿ ಆಹಾರ ಸುರಕ್ಷತೆ ತಪಾಸಣೆಗೆ  ಒಬ್ಬರೇ ಅಧಿಕಾರಿ..

ರಾಜ್ಯದಲ್ಲಿ ಕೇವಲ ನಾಲ್ಕು ಪ್ರಯೋಗಾಲಯ..

ಲ್ಯಾಬ್‌ ಸೆಂಟರ್‌ ವರದಿಗೆ ಕಾಯಬೇಕು ಒಂದು ವಾರ..ಸಾರ್ವಜನಿಕರ ಅಸಮಾಧಾನ

ಮಂಗಳೂರು/ಉಡುಪಿ:  ರಾಜ್ಯದಲ್ಲಿ ಆಹಾರೋತ್ಪಾದನೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಅಗ್ರಸ್ಥಾನದಲ್ಲಿದೆ. ಕರಾವಳಿಯ ಖಾದ್ಯ, ಆಹಾರಕ್ಕೆ ಫಿದಾ ಆಗದವರೇ ಇಲ್ಲ. ಆದರೆ ಇಷ್ಟೆಲ್ಲ ವೈಶಿಷ್ಟ್ಯತೆ ಇರುವ ಕರಾವಳಿ ಜಿಲ್ಲೆಯಲ್ಲಿ ಒಂದೇ ಒಂದು ಆಹಾರ ಮತ್ತು ನೀರು ವಿಶ್ಲೇಷಣೆ ಪ್ರಯೋಗಾಲಯವೇ ಇಲ್ಲ.

ಮಂಗಳೂರಿನ ಶಕ್ತಿನಗರದ ಖಾಸಗಿ ನರ್ಸಿಂಗ್ ಕಾಲೇಜಿನ 140ಕ್ಕೂ ಅಧಿಕ ವಿದ್ಯಾರ್ಥಿಗಳು ವಿಷಾಹಾರ ಸೇವನೆಯಿಂದ ಸೋಮವಾರ ನಗರದ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಅವರು ಸೇವಿಸುವ ಆಹಾರದ ಮಾದರಿಯನ್ನು ಬೆಂಗಳೂರಿನ ಆಹಾರ ಮತ್ತು ನೀರಿನ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಧಿಕಾರಿಗಳ ಮೂಲಗಳ ಪ್ರಕಾರ, ವರದಿ ಬರಲು ಕನಿಷ್ಠ ಒಂದು ವಾರ ಬೇಕಾಗಬಹುದು. ನಗರದಲ್ಲೇ ಇಂತಹ ಪ್ರಯೋಗಾಲಯಗಳಿದ್ದಿದ್ದರೆ ಕ್ಷಿಪ್ರ ವರದಿ ಕೈ ಸೇರುವುದು ಸಾಧ್ಯವಾಗುತ್ತಿತ್ತು ಎಂಬುದು ಸಾರ್ವಜನಿಕರ ಅಸಮಾಧಾನ.

ಉಡುಪಿ : ಯಕ್ಷಗಾನ ಸಮ್ಮೇಳನಕ್ಕೆ ಆಗಮಿಸುವ ಸರ್ವರಿಗೂ ಮೂಲಸೌಕರ್ಯ ಕೊರತೆಯಾಗದಂತೆ ಕ್ರಮ ವಹಿಸಿ :ಸಚಿವ ಸುನೀಲ್ ಕುಮಾರ್ – Vishwanews24

ಆಹಾರ ಸುರಕ್ಷತೆ ನಿಯಮಗಳ ಪ್ರಕಾರ, ಯಾವುದೇ ಆಹಾರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಅಥವಾ ಯಾವುದೇ ಆಹಾರ, ಹೊಟೇಲ್ ಅಥವಾ ಅಡುಗೆ ಉದ್ಯಮವನ್ನು ಪ್ರಾರಂಭಿಸುವ ಮೊದಲು, ಅವರು ಆಹಾರ ಸುರಕ್ಷತಾ ವಿಭಾಗದಿಂದ ಪ್ರಮಾಣಪತ್ರವನ್ನು ಪಡೆಯಬೇಕು. ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯ ಅಥವಾ ಎನ್‌ಎಎಬಿಗಾಗಿ ರಾಷ್ಟ್ರೀಯ ಮಾನ್ಯತೆ ಮಂಡಳಿಯಿಂದ ಗುರುತಿಸಲ್ಪಟ್ಟ ಆಹಾರ ಮತ್ತು ನೀರಿನ ಪರೀಕ್ಷಾ ಪ್ರಯೋಗಾಲಯ ಇದಕ್ಕೆ ಅಗತ್ಯವಿದೆ.

ಟರ್ಕಿ ಭೂಕಂಪ : ಅವಶೇಷಗಳಡಿ 17 ಗಂಟೆ ಕಾಲ ಆಸರೆ ನೀಡಿ ತಮ್ಮನನ್ನು ರಕ್ಷಿಸಿದ 7 ವರ್ಷದ ಪುಟ್ಟ ಬಾಲಕಿಯ ಫೋಟೋ ವೈರಲ್ – Vishwanews24

ರಾಜ್ಯದಲ್ಲಿ ನಾಲ್ಕು ಪ್ರಯೋಗಾಲಯ
ಕರ್ನಾಟಕದಲ್ಲಿ ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಲ್ಲಿ ಕೇವಲ ನಾಲ್ಕು ಆಹಾರ ಮತ್ತು ನೀರಿನ ಮಾದರಿ ಪರೀಕ್ಷಾ ಪ್ರಯೋಗಾಲಯಗಳಿವೆ. ಪ್ರತಿ ಜಿಲ್ಲೆಗೆ ಒಂದೊಂದು ಪ್ರಯೋಗಾಲಯ ಆರಂಭಿಸುವ ಪ್ರಸ್ತಾವನೆ ಇದ್ದರೂ ಅದಕ್ಕೆ ಮಹತ್ವ ನೀಡಿಲ್ಲ.

ರಾಯಚೂರು  : ಅಮರೇಶ್ವರ ಜಾತ್ರೆಯಲ್ಲಿ ಅನ್ಯ ಧರ್ಮಿಯ ವ್ಯಾಪಾರಿಗಳಿಗೆ ನಿರ್ಬಂಧ – Vishwanews24

ದ.ಕ.ದಲ್ಲಿ ಒಬ್ಬರೇ ಅಧಿಕಾರಿ
ಜತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಹಾರ ಸುರಕ್ಷತೆ ತಪಾಸಣೆಗೆ ಒಬ್ಬರೇ ಅಧಿಕಾರಿ ಇದ್ದಾರೆ. ಆಹಾರ ಉದ್ಯಮ ಮತ್ತು ಘಟಕಗಳಿಗೆ ಅನುಮತಿ ನೀಡುವುದರ ಜೊತೆಗೆ, ಪ್ರತಿ ಜವಾಬ್ದಾರಿಯನ್ನು ಅವರು ಹೊರಬೇಕು. ತಾಲೂಕು ಮಟ್ಟದಲ್ಲಿ ಈ ಜವಾಬ್ದಾರಿಯನ್ನು ಟಿಎಚ್‌ಒಗಳು ನೋಡಿಕೊಳ್ಳಬೇಕು.

Leave a Reply