ಮಂಗಳೂರು: ರೆಸ್ಟೊರೆಂಟ್ನಲ್ಲಿ ಯುವತಿ ಮತ್ತು ಆಕೆಯ ಸ್ನೇಹಿತರ ಮೇಲೆ ಮಾಜಿ ಪ್ರಿಯಕರನಿಂದ ದಾಳಿ -Vishwanews24
ಮಂಗಳೂರು: ರೆಸ್ಟೊರೆಂಟ್ನಲ್ಲಿ ಯುವತಿ ಮತ್ತು ಆಕೆಯ ಸ್ನೇಹಿತರ ಮೇಲೆ ಮಾಜಿ ಪ್ರಿಯಕರನಿಂದ ದಾಳಿ -Vishwanews24
ಮಂಗಳೂರು: ಮಾಜಿ ಪ್ರಿಯಕರನೊಬ್ಬ ಯುವತಿಯ ಮೇಲೆ ದಾಳಿ ಮಾಡಿದ ಘಟನೆ ಮಂಗಳೂರಿನ ಕುಮಾರ್ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನಡೆದಿದೆ.
ಚೂರಿ ಇಟ್ಟುಕೊಂಡು ಗುಂಪಿನ ಜೊತೆ ಬಂದು ಕೆಲ ಯುವಕ-ಯುವತಿಯರ ಜೊತೆ ಹೊಟೇಲ್ ನಲ್ಲಿದ್ದ ಯುವತಿ ಮೇಲೆ ಮಾಜಿ ಪ್ರಿಯಕರ ತ್ರಿಶೂಲ್ ಎಂಬಾತನ ತಂಡ ಅಟ್ಯಾಕ್ ಮಾಡಿದೆ.
ಇನ್ನು ಯುವತಿಯು ತನ್ನ ಮೂವರು ಗೆಳೆಯರೊಂದಿಗೆ ಕುಳಿತಿದ್ದಾಗ ಏಕಾಏಕಿ ನುಗ್ಗಿದ ನಾಲ್ವರು ಯುವಕರು ದಾಳಿ ನಡೆಸಿದ್ದು, ಹೋಟೆಲ್ನಲ್ಲಿ ಸಿಕ್ಕ ವಸ್ತುಗಳಿಂದ ಹೊಡೆದಾಟ ನಡೆಸಿದ್ದು, ಈ ವೇಳೆ ಓರ್ವ ಯುವಕನಿಗೆ ಚೂರಿಯಿಂದ ಇರಿಯಲಾಗಿದೆ. ಯುವತಿಯೊಂದಿಗೆ ಇದ್ದ ಯುವಕ ಚೂರಿ ಇರಿತದಿಂದ ಗಾಯಗೊಂಡಿದ್ದಾನೆ.
ಈ ಘಟನೆ ಜ.30ರಂದು ಮಧ್ಯಾಹ್ನ ಕದ್ರಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ನಡೆದಿದ್ದು, ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡಿದೆ.
ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Union Budget 2021 : ಗೃಹ ಸಾಲಗಳ ಮೇಲಿನ ತೆರಿಗೆ ಒಂದು ವರ್ಷ ವಿಸ್ತರಣೆ -Vishwanews24
