ಮಣಿಪಾಲ ಪ್ರತಿಷ್ಠಿತ ರಾಜಾಪುರ ಸರಸ್ವತ ಸಂಘದ ಅಧ್ಯಕ್ಷಗಿರಿ ಚುನಾವಣೆಯಲ್ಲಿ ಜಯಶಾಲಿಯಾದ ಪೆರ್ಣಂಕಿಲ ಶ್ರೀಶಾ ನಾಯಕ್ :121 ಮತಗಳ ಅಂತರದ ಗೆಲುವು
ಮಣಿಪಾಲ ಪ್ರತಿಷ್ಠಿತ ರಾಜಾಪುರ ಸರಸ್ವತ ಸಂಘದ ಅಧ್ಯಕ್ಷಗಿರಿ ಚುನಾವಣೆಯಲ್ಲಿ ಜಯಶಾಲಿಯಾದ ಪೆರ್ಣಂಕಿಲ ಶ್ರೀಶಾ ನಾಯಕ್ :121 ಮತಗಳ ಅಂತರದ ಗೆಲುವು
ಉಡುಪಿ: ಪ್ರತಿಷ್ಠಿತ ರಾಜಾಪುರ ಸಾರಸ್ವತ ಸಂಘ ಮಣಿಪಾಲ ಇದರ ಮುಂದಿನ ಅವಧಿಗೆ ಆಡಳಿತ ಮಂಡಳಿಯ ಆಯ್ಕೆಯ ಪ್ರಕ್ರಿಯೆಯು ಇಂದು ಜರಗಿದ ಮಹಾಸಭೆಯಲ್ಲಿ ನಡೆಯಿತು.
ಕಾರ್ಯದರ್ಶಿಯಾಗಿ ಶ್ರೀ ನಿತ್ಯಾನಂದ ನಾಯಕ್ ನರಸಿಂಗೆ, ಜೊತೆ ಕಾರ್ಯದರ್ಶಿಯಾಗಿ ರಂಜಿತ್ ಕೆ ಎಸ್ ಪುನಾರು, ಕೋಶಾಧಿಕಾರಿಯಾಗಿ ಶ್ರೀ ಜಯರಾಮ ಪ್ರಭು ಉಡುಪಿ,ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಸಂಘದ ಅಧ್ಯಕ್ಷ ಸ್ಥಾನಕ್ಕೆ ಶ್ರೀಯುತ ಪೆರ್ಣಂಕಿಲ ಶ್ರೀಶ ನಾಯಕ್ ಹಾಗೂ ಶ್ರೀ ರಮಾನಂದ ನಾಯಕ್ ಇವರ ಮಧ್ಯೆ ನಡೆದ ಚುನಾವಣೆಯಲ್ಲಿ ಪೆರ್ಣಂಕಿಲ ಶ್ರೀಶ ನಾಯಕ್ ಅವರು ವಿಜಯಿಯಾಗಿರುತ್ತಾರೆ
ಉಪಾಧ್ಯಕ್ಷ ಸ್ಥಾನಕ್ಕೆಚೇತನ್ ನಾಯಕ್ ಕಾರ್ಕಳ ಹಾಗೂ ರಮೇಶ್ ಶೆಂಬೇಕರ್ ಪರ್ಕಳ ಇವರ ಮಧ್ಯೆ ನಡೆದ ಚುನಾವಣೆಯಲ್ಲಿ ಚೇತನ್ ನಾಯಕ್ ಕಾರ್ಕಳ ಅವರು ವಿಜಯಿಯಾಗಿರುತ್ತಾರೆ.
ಮತಗಳ ವಿವರ:
ಅಧ್ಯಕ್ಷ ಸ್ಥಾನಕ್ಕೆ
ಪೆರ್ಣಂಕಿಲ ಶ್ರೀಶ ನಾಯಕ್ – 161
ರಮಾನಂದ ನಾಯಕ್ ಬನ್ನಂಜೆ – 40
ಉಪಾಧ್ಯಕ್ಷ ಸ್ಥಾನಕ್ಕೆ
ಚೇತನ್ ನಾಯಕ್ ಕಾರ್ಕಳ – 138
ರಮೇಶ್ ಶೆಂಬೇಕರ್ ಪರ್ಕಳ – 62

