ಮಣಿಪಾಲ : ವಿವಾಹಿತ ಮಹಿಳೆ ನೇಣು ಬಿಗಿದು ಆತ್ಮಹತ್ಯೆ – vishwanews24

Featured, ಉಡುಪಿ

ಮಣಿಪಾಲ : ವಿವಾಹಿತ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

ಮಣಿಪಾಲ : ಗಂಡನ ಕಾಯಿಲೆಗೆ ಮಾಡಿದ ಸಾಲವನ್ನು ತೀರಿಸಲಾಗದ ಹಾಗೂ ಅಡವಿಟ್ಟ ಚಿನ್ನವನ್ನು ಬಿಡಿಸಿಕೊಳ್ಳಲು ಆಗದ ಚಿಂತೆಯಿಂದ ಯುವತಿಯೊಬ್ಬರು ರವಿವಾರ ಸಂಜೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಳ್ಳಿ ಗ್ರಾಮದ ಅನಂತನಗರ ಮಂಚಿಕುಮೇರಿಯಿಂದ ವರದಿಯಗಿದೆ.

ವಿಮಲಾ ಎಂಬವರ ಪುತ್ರಿ ಶ್ರುತಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಐದು ವರ್ಷಗಳ ಹಿಂದೆ ವಿವಾಹವಾದ ಶ್ರುತಿ, ಎರಡು ವರ್ಷಗಳ ಹಿಂದೆ ಗಂಡನ ಕಾಯಿಲೆಯ ಚಿಕಿತ್ಸೆಗೆ ಮಾಡಿಕೊಂಡ ಸಾಲ ಹಾಗೂ ಬ್ಯಾಂಕಿನಲ್ಲಿ ಅಡವಿರಿಸಿದ ಚಿನ್ನಾಭರಣ ಗಳನ್ನು ಬಿಡಿಸಿಕೊಳ್ಳಲಾಗದ ಚಿಂತೆಯಲ್ಲಿ ನಿನ್ನೆ ಸಂಜೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು : ನ.8 ರಂದು ದಂಡ ತೀರ್ಥ ಪದವಿ ಪೂರ್ವ ಕಾಲೇಜಿನ ರಜತಾ ಮಹೋತ್ಸವ ಸಮಾರಂಭ – vishwanews24

Leave a Reply