ಮಧ್ಯಂತರ‌ ಚುನಾವಣೆ‌ಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಯಾರಾಗಿರಬೇಕು : ಎಚ್.ಡಿ. ದೇವೇಗೌಡ -Vishwanews24

Featured, ರಾಜ್ಯ ನ್ಯೂಸ್

ತುಮಕೂರು: ಸೋಲನ್ನ ಸ್ಪೂರ್ತಿ ಎಂದು ಸ್ವೀಕಾರ ಮಾಡಬೇಕು. ಒಂದು ಸೋಲಿಗೆ ಅಂಜಬಾರದು. ಸೋತರೂ ಮತಕೊಟ್ಟ‌ 6.9 ಲಕ್ಷ ಜನರಿಗೆ ನನ್ನ ನಮಸ್ಕಾರ. ನಾನು 15 ಚುನಾವಣೆಗೆ ನಿಂತಿದ್ದಿನಿ. ಸೋಲು ಗೆಲುವು ಸಾಮಾನ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ತುಮಕೂರಿನಲ್ಲಿ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ದೈವೇಚ್ಛೆ ಏನೋ ನಡೀತದೆ. ಮಧ್ಯಂತರ‌ ಚುನಾವಣೆ‌ ಬರೋದು ಗ್ಯಾರಂಟಿ. ಅದಕ್ಕೆ ನೀವೆಲ್ಲಾ ತಯಾರಾಗಬೇಕು ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತ ರಿಗೆ‌  ಜೆಡಿಎಸ್ ವರಿಷ್ಠ ದೇವೇಗೌಡರು ಕರೆ ನೀಡಿದರು. ಬಡವರ ಕಷ್ಟಕ್ಕೆ ಸ್ಪಂಧಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಹೇಳುತ್ತೆನೆ. ಅವರು ಈ ರಾಜ್ಯದ 6.5 ಕೋಟಿ ಜನರ ಮುಖ್ಯಮಂತ್ರಿ ನಮ್ಮಲ್ಲಿ ರಾಜಕೀಯ‌ ಭಿನ್ನಾಭಿಪ್ರಾಯ ಇರಬಹುದು. ಆದರೆ, ಬಡವರಿಗೆ ಮೋಸ‌ ಮಾಡಬಾರದು ಎಂದರು.

ಮಾಧ್ಯಮಗಳಿಂದ ಪ್ರಧಾನಿ ನರೇಂದ್ರ ಅವರು ರಾಷ್ಟ್ರಪಿತ ಆಗಿದ್ದಾರೆ. ವಿಶ್ವದಲ್ಲಿ ಗಾಂಧಿಜಿಗೆ ಮಾತ್ರ ರಾಷ್ಟ್ರಪಿತ ಅಂತಿದ್ರು. ಯಾರಿಗೂ ಆ ಪದವನ್ನು ಬಳಕೆ ಮಾಡುವ ಅಧಿಕಾರ ಇಲ್ಲ ಕಾಂಗ್ರೆಸ್ ಗೂ ಇಲ್ಲ ನನಗೂ ಇಲ್ಲ ಎಂದು ಹೇಳಿದರು. ಪಕ್ಷದ ಕಾರ್ಯಕರ್ತರೇ ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿ ಮುಂದೆ ನಿಮ್ಮದೆ ಸರ್ಕಾರ‌ ಬರುತ್ತೆ ಸಿಎಂ ಯಡಿಯೂರಪ್ಪ ನವರು ಅಕ್ಟೋಬರ್​​  10,11,12 ಮೂರು ದಿನ ಮಾತ್ರ ಅಧಿವೇಶನ ಇಟ್ಟುಕೊಂಡಿದ್ದಾರೆ. ಇದು ದುರಂತದ‌ ವಿಚಾರ. ಮೂರು ದಿನಕ್ಕೆ 9 ತಿಂಗಳ ಬಜೆಟ್ ಅನುಮೋದನೆ ಮಾಡಬೇಕು ಎಂದರು.