ಮಮತಾ ಬ್ಯಾನರ್ಜಿ ಭದ್ರ ಕೋಟೆಗೆ ನುಗ್ಗಲಿರುವ ಚಾಣಕ್ಯ …
ನವದೆಹಲಿ : ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರವಾಗಿ ಸಂಸತ್ತಿನ ಉಭಯ ಸದನಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ತೀವ್ರವಾದ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕೆಂಡಾಮಂಡಲರಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮುಂಬರುವ ಆಗಸ್ಟ್ 11 ರಂದು ಕೋಲ್ಕೊತಾಕ್ಕೆ ಭೇಟಿ ನೀಡಿ ಬ್ರಹತ್ ಪ್ರತಿಭಟನಾ ರ್ಯಾಲಿ ನಡೆಸುದಾಗಿ ಪ್ರತಿಜ್ಞೆ ಮಾಡಿದ್ದಾರೆ.ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಮಿತ್ ಷಾ ಅವರು ಆಗಸ್ಟ್ 11 ರಂದು ನಡೆಸುವ ಪ್ರತಿಭಟನಾ ರ್ಯಾಲಿಗೆ ಪಶ್ಚಿಮ ಬಂಗಾಳ ಸರಕಾರ ಅನುಮತಿ ನೀಡಲು ನಿರಾಕರಿಸಿದರೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ,ಪೋಲೀಸರು ತನ್ನನ್ನು ಬಂಧಿಸಿದರೂ ಸರಿಯೇ ನಾನು ಕೋಲ್ಕತ್ತಾಗೆ ತೆರಳುವುದು ಶತ ಸಿದ್ದ ಎಂದು ಅಮಿತ್ ಷಾ ಗುಡುಗಿದ್ದಾರೆ
