ರಾಜ್ಯ ಬಜೆಟ್ : ರಾಮನಗರದಲ್ಲಿ ರಾಮಮಂದಿರವನ್ನು ನಾವೇ ನಿರ್ಮಾಣ ಮಾಡುತ್ತೇವೆ : HDK – Vishwanews24
ರಾಜ್ಯ ಬಜೆಟ್ : ರಾಮನಗರದಲ್ಲಿ ರಾಮಮಂದಿರವನ್ನು ನಾವೇ ನಿರ್ಮಾಣ ಮಾಡುತ್ತೇವೆ : HDK
ಬೆಂಗಳೂರು :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಎರಡನೇ ಬಜೆಟ್ ಮಂಡಿಸಿದ್ದು, ಬಜೆಟ್ನಲ್ಲಿ ರಾಮನಗರದಲ್ಲಿ ನಿರ್ಮಾಣ ಘೋಷಣೆ ವಿಚಾರವಾಗಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ರಾಮಮಂದಿರವನ್ನು ನಾವೇ ನಿರ್ಮಾಣ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ
ರಾಮನಗರದ ಜಿಲ್ಲೆಯ ಚೆನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮಾತನಾಡಿ, ಕಳೆದ 3 ವರ್ಷಗಳಲ್ಲಿ ರಾಮಂಂದಿರ ನಿರ್ಮಿಸಿದ್ದರೆ ಮೆಚ್ಚತ್ತಿದ್ದೆ ಚುನಾವಣೆ 2 ತಿಂಗಳು ಇರಬೇಕಾದರೆ ಈಗ ಘೋಷಿಸಿದ್ದಾರೆ.
ರಾಜ್ಯ ಬಜೆಟ್ : ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್ : ಸಿದ್ದರಾಮಯ್ಯ – Vishwanews24
ರಾಮಮಂದಿರ ಘೋಷಣೆ ಅದು ಬಜೆಟ್ ಬುಕ್ನಲ್ಲೇ ಇರುತ್ತದೆ. ಮಂದಿನ ಚುನಾವಣೆಯಲ್ಲಿ ಯಾವ ಸರ್ಕಾರ ಬರುತ್ತೆ ಗೊತ್ತಿದೆ. ಅವರು ಘೋ಼ಷಣೆ ಮಾಡಿದ್ರೂ ನಾನೇ ನಿರ್ಮಾಣ ಮಾಡಬೇಕು. ರಾಮಂಂದಿರ ನಿರ್ಮಾಣ ಮಾಡಿದ್ರೆ ಬಿಜೆಪಿ ಅಧಿಕಾರಕ್ಕೆ ಬರುತ್ತಾ? ಮಂಡ್ಯದಲ್ಲಿ ಡೈನಾಮೆಟ್ ಇಟ್ಟು ಛಿದ್ರ ಮಾಡ್ತೀನಿ ಅಂದ್ರೆ ಆಗುತ್ತಾ? ಇದ್ಯಾವುದು ವಾಸ್ತವಾಂಶಕ್ಕೆ ಬರುವುದಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
