ರಾಜ್ಯ ಸರ್ಕಾರದ ವಿರುದ್ಧ ಘರಮ್ ಆದ ಮೈಸೂರು ರಾಜ..ಓದಿ ಈ ವರದಿ

Featured, ರಾಜ್ಯ ನ್ಯೂಸ್

ಯಾವುದೋ ದೇಶಗಳಿಂದ ದಂಡೆತ್ತಿ ಬಂದಿರುವವರ ಜಯಂತಿಯನ್ನು ಆಚರಿಸುವ ನಮ್ಮ ಸರಕಾರಗಳು ನಮ್ಮ ನಾಡಿಗಾಗಿ, ನಮ್ಮ ಜನರಿಗಾಗಿ ಅಮೂಲ್ಯ ಸಾಧನೆಗಳನ್ನು ಮಾಡಿರತಕ್ಕಂತಹ ಮಹನೀಯರನ್ನು ಮರೆತು ಬಿಡುತ್ತವೆ. ನಮ್ಮ ರಾಜ್ಯ ಸರಕಾರ ಈ ಹಿಂದೆ ಹಲವಾರು ಬಾರಿ ಇಂತಹ ಪ್ರಮಾದವನ್ನು ನಡೆಸಿದ್ದು ಈ ಬಾರಿ ಮೈಸೂರಿನ ಮಹಾರಾಜರಾಗಿದ್ದಂತಹ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮಜಯಂತಿಯ ಆಚರಣೆ ಮಾಡದೇ ಅವರನ್ನು ಮರೆತು ಬಿಟ್ಟಿದೆ. ಈ ಕಾರಣಕ್ಕಾಗಿ ರಾಜ್ಯ ಸರಕಾರದ ವಿರುದ್ಧ ಯದುವೀರ್ ಒಡೆಯರ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

1919 ಜುಲೈ 18 ರಂದು ಜನಿಸಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮಜಯಂತಿಯಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯದುವೀರ್ ಒಡೆಯರ್ ಅವರು ” ತಮ್ಮ ತಾತನ 99 ನೇ ಜನ್ಮದಿನವನ್ನು ಆಚರಿಸಲು ಸರಕಾರ ಮರೆತಿದ್ದು, ಮುಂದಿನ ವರ್ಷ ಶತಮಾನೋತ್ಸವವನ್ನಾದರೂ ಆಚರಿಸಲು ಇದುವೇ ಸಂದೇಶ” ಎಂದು ಜಯಚಾಮರಾಜೇಂದ್ರ ಒಡೆಯರ್ ರನ್ನು ಮರೆತ ರಾಜ್ಯ ಸರಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಇದೇ ಸಂದರ್ಭ ಯದುವೀರ್ ಒಡೆಯರ್ ಅವರು ಮೈಸೂರು ಸಂಸ್ಥಾನಕ್ಕೆ ಒಡೆಯರ್ ರು ನೀಡಿರುವ ಕೊಡುಗೆಗಳ ಮಾಹಿತಿಯನ್ನು ಹೊತ್ತಂತಹ, ರಾಜವಂಶಸ್ತರ ಅಮೂಲ್ಯ ಆಲ್ಬಮ್ ಬಳಸಿ ಸಚಿತ್ರ ವರದಿಯುಳ್ಳಂತಹ ರಾಜವಂಶಸ್ಥರ ಖಾಸಗಿ ಮುಖವಾಣಿ ಗಂಡಬೇರಂಡದ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಹತ್ತು ವರ್ಷಗಳ ಕಾಲ ಮೈಸೂರು ಸಂಸ್ಥಾನವನ್ನು ಆಳ್ವಿಕೆ ನಡೆಸಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಒಡೆಯರ್ ಮೈಸೂರು ಸಂಸ್ಥಾನದ 25 ನೆಯ ಹಾಗೂ ಕೊನೆಯ ಮಹಾರಾಜ ಆಗಿದ್ದವರು. ಕರ್ನಾಟಕ ರಾಜ್ಯ ರಚನೆ ಬಳಿಕ ಇವರು ರಾಜ್ಯಪಾಲರಾಗಿಯೂ ಕಾರುಯನಿರ್ವಹಿಸಿದ್ದರು. ತತ್ತ್ವಜ್ಞಾನಿ. ಸಂಗೀತಜ್ಞ, ರಾಜನೀತಿಜ್ಞ, ಉದಾರ ದಾನಿಯಾಗಿದ್ದ ಇವರು ನಮ್ಮ ನಾಡಿಗೆ ನೀಡಿದ್ದ ಕೊಡುಗೆ ಅಪಾರ. ಕೇಂದ್ರೀಯ ಆಹಾರ ಸಂಶೋಧನಾಲಯ, ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಮುಂತಾದವುಗಳಿಗಾಗಿ ಇವರು ನಿವೇಶನ ಮತ್ತು ಕಟ್ಟಡಗಳನ್ನು ಉದಾರವಾಗಿ ದಾನ ನೀಡಿದ್ದರು. ಇದಲ್ಲದೇ ತಮ್ಮ ಇನ್ನಿತರ ಕಟ್ಟಡ, ನಿವೇಶನಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ದಾನ ಮಾಡಿ ಕೊಡುಗೈ ದಾನಿಯಾಗಿದ್ದರು. ಜಯಚಾಮರಾಜೇಂದ್ರ ಒಡೆಯರ್ ಅವರ ಕಾಲದಲ್ಲಿಯೇ ಮೈಸೂರು ದಸರಾ ಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಹತ್ವ ಬಂದಿತ್ತು. ಇಂತಹ ಮಹಾನ್ ವ್ಯಕ್ತಿಯನ್ನು ನಮ್ಮನ್ನಾಳುತ್ತಿರುವ ಸರಕಾರಗಳು ಮರೆಯುತ್ತಿರುವುದು ನಮ್ಮ ದೌರ್ಭಾಗ್ಯವೇ ಸರಿ.

ಜಾಹಿರಾತು: vyshali Bar& Family Restaurant kaup: 

prop: NAYESH P SHETTY: 9620427036