ರೂರಲ್ ಎಜುಕೇಶನ್ ಸೊಸೈಟಿ ಪಟ್ಲ ಅಧ್ಯಕ್ಷರಾಗಿ ಪೆರ್ಣಂಕಿಲ ಶ್ರೀಶ ನಾಯಕ್ – vishwanews24
ರೂರಲ್ ಎಜುಕೇಶನ್ ಸೊಸೈಟಿ (ರಿ) ಪಟ್ಲ ಅಧ್ಯಕ್ಷರಾಗಿ ಪೆರ್ಣಂಕಿಲ ಶ್ರೀಶ ನಾಯಕ್
ರೂರಲ್ ಎಜುಕೇಶನ್ ಸೊಸೈಟಿ, ಪಟ್ಲ ಇದರ ವಾರ್ಷಿಕ ಮಹಾ ಸಭೆಯು ಅಧ್ಯಕ್ಷರಾದ ಶ್ರೀಯುತ ಡಾ. ನಾರಾಯಣ ಶೆಣೈ ಕೆ. ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಗತಸಭೆಗಳ ವರದಿಗಳನ್ನು ಮತ್ತು ಆಯ-ವ್ಯಯ ತಖ್ತೆಗಳನ್ನು ಓದಿ ಅನುಮೋದಿಸಿದ ಬಳಿಕ 2026-28ನೇ ಸಾಲಿಗೆ ೯ ಜನರನ್ನು ಒಳಗೊಂಡ ನೂತನ ಆಡಳಿತ ಮಂಡಳಿಯನ್ನು ಆರಿಸಲಾಯಿತು.
ರೂರಲ್ ಎಜುಕೇಶನ್ ಸೊಸೈಟಿ, ಪಟ್ಲ ಇದರ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶ್ರೀ ಪೆರ್ಣಂಕಿಲ ಶ್ರೀಶ ನಾಯಕ್ ಇವರು ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಡಾ. ಗೋಪಿನಾಥ ನಾಯಕ್, ದರ್ಮೆಟ್ಟು ಪಳ್ಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀ ಜಯರಾಜ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾಗಿ ಶ್ರೀಮತಿ ಅರ್ಚನಾ ನಾಯಕ್, ಕೋಶಾಧಿಕಾರಿಗಳಾಗಿ ಡಾ. ನಾರಾಯಣ ಶೆಣೈ ಕೆ. ಸದಸ್ಯರುಗಳಾಗಿ ಡಾ.ನಿರಂಜನ ಪ್ರಭು, ಶ್ರೀಮತಿ ಮಲ್ಲಿಕಾ ಶೆಟ್ಟಿ, ನಿತ್ಯಾನಂದ ನಾಯಕ್ ನರಸಿಂಗೆ, ಉಮೇಶ್ ನಾಯಕ್ ಪೆರ್ಣಂಕಿಲ ಆಯ್ಕೆಯಾದರು. ವಿಶೇ಼ಷ ಸಲಹೆಗಾರರಾಗಿ ಶ್ರೀ ಗುಜ್ಜಾಡಿ ಪ್ರಭಾಕರ ನಾಯಕ್ ( ಖ್ಯಾತ ಲೆಕ್ಕಪರಿಷೋಧಕರು ) ಆಯ್ಕೆಯಾಗಿರುತ್ತಾರೆ.
ಉಜ್ವಲ ಯೋಜನೆಯ ಫಲಾನುಭವಿಗಳ ವಾರ್ಷಿಕ ಸಿಲಿಂಡರ್ ಸಂಖ್ಯೆ 9 ರಿಂದ 4ಕ್ಕೆ ಇಳಿಕೆ – vishwanews24
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪ್ರಾರಂಭಿಸಲ್ಪಟ್ಟ ಶಿಕ್ಷಣ ಸಂಸ್ಥೆ ಸಾಕಷ್ಟು ಮಜಲುಗಳನ್ನು ದಾಟಿಕೊಂಡು ಈ ಬಾರಿ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಅಧಿಕಾರ ಹಸ್ತಾಂತರದ ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಶ್ರೀಶ ನಾಯಕ್ ಮಾತನಾಡುತ್ತಾ ಈ ಸಂಸ್ಥೆಯಡಿ ಕಾರ್ಯಾಚರಿಸುತ್ತಿರುವ ಯು. ಎಸ್. ನಾಯಕ್ ಪ್ರೌಢಶಾಲೆ, ಪಟ್ಲ, ಲೋಕಮಾನ್ಯ ತಿಲಕ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಟ್ಲ, ವಿಶ್ವಂಭರ ಶಿಶು ಮಂದಿರ ಪಟ್ಲ ಇವುಗಳ ವ್ಯವಸ್ಥಾಪನೆ ಮತ್ತು ಅಭಿವೃದ್ಧಿಯಲ್ಲಿ ಸರ್ವ ಶಿಕ್ಷಣಾಭಿಮಾನಿಗಳ ಮತ್ತು ಹಳೆ ವಿದ್ಯಾರ್ಥಿಗಳ ಸಹಕಾರವನ್ನು ಯಾಚಿಸಿದರು. ಕಾರ್ಯದರ್ಶಿ ಜಯರಾಜ ಶೆಟ್ಟಿಯವರು ವಂದನಾರ್ಪಣೆಗೈದರು.
