ಲೋಕ ಕಲ್ಯಾಣಾರ್ಥಕವಾಗಿ ಶ್ರೀ ಕ್ಷೇತ್ರ ಮೂಡುಸಗ್ರಿಯಲ್ಲಿ ಮಹಾಚಂಡಿಕಯಾಗ .

Featured, ಉಡುಪಿ

ಲೋಕ ಕಲ್ಯಾಣಾರ್ಥಕವಾಗಿ ಶ್ರೀ ಕ್ಷೇತ್ರ ಮೂಡುಸಗ್ರಿಯಲ್ಲಿ ಮಹಾಚಂಡಿಕಯಾಗ .

ಉಡುಪಿ: ಪಂಚ ಮಹಾ ಶಕ್ತಿಗಳ ಪುಣ್ಯ ಕ್ಷೇತ್ರವಾದ ಶ್ರೀ ಕ್ಷೇತ್ರ ಮೂಡುಸಗ್ರಿಯಲ್ಲಿ ಧರ್ಮಧರ್ಶಿ ಭಾಸ್ಕರ ಪೂಜಾರಿ ಗುಂಡಿಬೈಲ್ ಇವರ ಮಾರ್ಗದರ್ಶನದಲ್ಲಿ ಮಹಾಚಂಡಿಕಯಾಗ ನಡೆಯಿತು.

ಕೋಡಿಮಠದ ಶ್ರೀಗಳು ಕೊರೋನಾ ಮಹಾಮಾರಿಯ ನಿವಾರಣೆಗಾಗಿ ಶ್ರೀ ಕ್ಷೇತ್ರದಲ್ಲಿ ನೆಲೆಯಾದ ತ್ರಿಪುರಾಂಭಿಕೆಗೆ ಚಂಡಿಕಯಾಗ ಮಾಡಿಸಬೇಕೆಂಬ ನುಡಿಯಂತೆ ಆದಿತ್ಯವಾರ ಕೇವಲ ಕ್ಷೇತ್ರದ ಧರ್ಮದರ್ಶಿ ಮತ್ತು ಕಮಿಟಿ ಸದಸ್ಯರ ಸಮ್ಮುಖದಲ್ಲಿ ಲಾಕ್-ಡೌನ್ ಉಲ್ಲಂಘಿಸದೆ ಸೇವೆ ನಡೆಸಲಾಯಿತು.

ಈ ಸಂದರ್ಭ ಧರ್ಮದರ್ಶಿಗಳಾದ ಭಾಸ್ಕರ ಗುಂಡಿಬೈಲ್ ಮಾತಾಡಿ ” ಕಳೆದ ದಿನಗಳ ಹಿಂದೆ ಕ್ಷೇತ್ರದ ಜೀರ್ಣೋದ್ಧಾರದ ವಿಚಾರವಾಗಿ ಶ್ರೀ ಕೋಡಿ ಮಠದ ಶ್ರೀಗಳನ್ನು ಸಂಪರ್ಕಿಸಿದಾಗ ಕ್ಷೇತ್ರದಲ್ಲಿ ನೆಲೆಯಾದ ತ್ರಿಪುರಾಂಭಿಕೆಗೆ ತಾರೀಖು 12 ರಂದು ಚಂಡಿಕಯಾಗ ನಡೆಸಬೇಕು ಆ ಸಮಯದಲ್ಲಿ ಕ್ಷೇತ್ರಕ್ಕೆ ಸಂಬಂಧ ಪಟ್ಟ ಜಾಗದಲ್ಲಿ ಕೊರೋನಾ ರೋಗದ ಅಟ್ಟಹಾಸ ಕಡಿಮೆಯಾಗಿರುತ್ತದೆ ಎಂದು ಅವರು ಹೇಳಿದ ನುಡಿಯ ಪ್ರಕಾರ ಒಂದು ತಿಂಗಳ ಹಿಂದೆ ದಿನ ನಿಗದಿ‌ ಪಡಿಸಿದ್ದೇವು.ಈ ಬಗ್ಗೆ‌ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದೇವು, ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣ ಇಲ್ಲ ಮತ್ತು ಇದ್ದ ಮೂವರು ಗುಣಮುಖರಾಗಿದ್ದಾರೆ ಇದೆಲ್ಲವೂ ತಾಯಿ ತ್ರಿಪುರಾಂಭಿಕೆಯ ಶಕ್ತಿ ಎಂದರು.”