ವಿಧಾನಸಭಾ ಚುನಾವಣೆಯ ಪಕ್ಕಾ ಭವಿಷ್ಯ ನುಡಿದಿದ್ದ ಗುರೂಜಿ ಸಾಯಿ ಈಶ್ವರ್, ಲೋಕಸಭಾ ಚುನಾವಣಾ ಭವಿಷ್ಯ ಇನ್ನೂ ನಿಗೂಢ…!- vishwanews24

Featured, ಉಡುಪಿ

ವಿಧಾನಸಭಾ ಚುನಾವಣೆಯ ಪಕ್ಕಾ ಭವಿಷ್ಯ ನುಡಿದಿದ್ದ ಗುರೂಜಿ ಸಾಯಿ ಈಶ್ವರ್, ಲೋಕಸಭಾ ಚುನಾವಣಾ ಭವಿಷ್ಯ ಇನ್ನೂ ನಿಗೂಢ…!

ಉಡುಪಿ:ವಿಶ್ವದ ನಂಬರ್ ೧ ಪೆಂಡುಲಮ್ ಶಾಸ್ತ್ರಜ್ಞ ಗುರೂಜಿ ಸಾಯಿ ಈಶ್ವರ್ ಕಳೆದ ವಿಧಾನಸಭಾ ಚುನಾವಣೆಯ ಪಕ್ಕಾ ರಾಜಕೀಯ ಭವಿಷ್ಯ ನುಡಿದಿದ್ದು ರಾಜ್ಯದಲ್ಲಿ ಯಾವ ಸರ್ಕಾರ ಆಡಳಿತ ಮಾಡುತ್ತೆ ಮತ್ತು ಯಾವ ಯಾವ ಕ್ಷೇತ್ರ ಯಾರ ಪಾಳಯದ ವಶವಾಗುತ್ತೆಂಬುದನ್ನ ನಿಖರವಾಗಿ ಹೇಳಿಕೆ ನೀಡಿದ್ದ ಗುರೂಜಿ ಈ ಭಾರಿಯ ಲೋಕಸಭಾ ಚುನಾವಣೆಯ ಭವಿಷ್ಯ ಇನ್ನೂ ನಿಗೂಢವಾಗಿದೆ.

ಈಗಾಗಲೇ ಹಲಾವಾರು ಕ್ಷೇತ್ರದ ಲೋಕಸಭಾ ಅಭ್ಯರ್ಥಿಗಳು ಗುರೂಜಿಯ ಸಂಪರ್ಕದಲ್ಲಿದ್ದು ಆರ್ಶಿವಾದ ಪಡೆದುಕೊಂಡು ಹೋಗಿದ್ದಾರೆ ಹಾಗೂ ಇನ್ನು ಕೆಲವರು ನಾಮಪತ್ರ ಸಲ್ಲಿಸುವ ಸಮಯ ಹಾಗೂ ದಿನ ನಿಗದಿ ಪಡಿಸಿಕೊಂಡು ಹೋಗಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ತಿಳಿದ ಮಾಹಿತಿ.

ಹಲವಾರು ಭಾರಿ ವಿವಿಧ ರಾಷ್ಟ್ರೀಯ ಹಾಗೂ ರಾಜ್ಯದ ವಿಚಾರದಲ್ಲಿ ನಿಖರ ಮಾಹಿತಿ ಮತ್ತು ಭವಿಷ್ಯ ನುಡಿದಿದ್ದ ಗುರೂಜಿ ಸಾಯಿ ಈಶ್ವರ್ ಅವರನ್ನು ಕಳೆದ ತಿಂಗಳ ಹಿಂದೆ ಈ ರಾಜ್ಯದ ಪ್ರಬಲ ರಾಜಕೀಯ ಮುಖಂಡರೊಬ್ಬರು ಭೇಟಿ ಮಾಡಿದಾಗ ಬಿಜೆಪಿಯಲ್ಲಿ ಯುವನಾಯಕನಿಗೆ ಅನೀರಿಕ್ಷಿತ ಸೀಟ್ ಸಿಗಲಿದೆ ಎಂದು ಸ್ಪಷ್ಟವಾಗಿ ನುಡಿದಿದ್ದರು ಅದು ಈಗ ಸತ್ಯವಾಗಿದೆ.

ಗುರೂಜಿ ಆರಾಧಿಸಿಕೊಂಡು ಬಂದಿರುವ ಸಾಯಿಬಾಬಾ ಹಾಗೂ ಮುಖ್ಯಪ್ರಾಣನ ಮಂದಿರದಲ್ಲಿ ಕಳವು ಆದ ಸಂಧರ್ಭದಲ್ಲಿ ಕಳವು ಮಾಡಿದ ವ್ಯಕ್ತಿ ಹಾಗೂ ಸೊತ್ತು ಸಿಗದೆ ಹೋದಲ್ಲಿ ಪೂಜೆ ನಿಲ್ಲಿಸುವುದಾಗಿ ಬೇಡಿಕೆ ಇಟ್ಟ ಸಮಯದಲ್ಲಿ ೨೪ ಗಂಟೆಯ ಒಳಗೆ ಸೊತ್ತು ಸಮೇತ ವ್ಯಕ್ತಿ ಮಂದಿರಕ್ಕೆ ಬಂದು ಶರಣಾಗಿದ್ದ ಸುದ್ದಿ ಇಡೀ ಭಕ್ತಸಮುದಾಯದಲ್ಲಿ ಸಂಚಲನ ಮೂಡಿಸಿದನ್ನ ಇಲ್ಲಿ ನೆನಪಿಸಬಹುದುದಾಗಿದೆ.

ಒಟ್ಟಾರೆಯಾಗಿ ನಂಬಿಕೆ ಮತ್ತು ಅಪನಂಬಿಕೆಯ ನಡಯವೆಯೂ ಕಲಿಯುಗದಲ್ಲಿ ಇಂತಹ ಘಟನೆಗಳು ಉದ್ಬವಿಸುತ್ತಿರುವುದು ವಿಶೇಷ ಹಾಗೂ ಅವಿಸ್ಮರಣೀಯ.