ಶಾಲಾ ಮಕ್ಕಳ ಶ್ರೇಯಾಭಿವೃಧ್ದಿಗಾಗಿ ಪಣತೊಟ್ಟ ವಡ್ಡರ್ಸೆ ಸರಕಾರಿ ಪ್ರೌಢ ಶಾಲೆಯ ಹಳೇ ವಿದ್ಯಾರ್ಥಿ ಸಂಘ ಮತ್ತು ಅಧ್ಯಾಪಕ ವೃಂದ.

Featured, ಉಡುಪಿ

ಕುಂದಾಪುರ: ಹೌದು ಇವತ್ತಿನ ದಿನದಲ್ಲಿ ಶಾಲೆ ಮುಗಿದ ನಂತರ ಅತ್ತ ಕಡೆ ತಲೆ ಹಾಕಿಯೂ ಮಲಗದ ಸ್ಥಿತಿಯಿರುವಾಗ ಆ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಯುವಕರ ತಂಡವೊಂದು ತಾವು ಕಲಿತ ಶಾಲೆಯ ಇಂದಿನ ಮಕ್ಕಳ ಪೋಷಿಸುವ ಉದ್ದೇಶದಿಂದ “ಅಕ್ಷರ ದೇಗುಲದ ಅಭಿವೃದ್ಧಿ-ಯಕ್ಷಗಾನ ವೈಭವದ ಕಲಾಸಿದ್ಧಿ” ಎಂಬ ಶಿರ್ಷಿಕೆಯಡಿಯಲ್ಲಿ ದೂರದ ಊರಿನಿಂದ ವಿದ್ಯಾರ್ಜನೆಗೆ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನಿವಾರ್ಯವಾದ ಶಾಲಾ ವಾಹನ , ಪ್ರಯೋಗಾಲಯ, ಇಂಗ್ಲಿಷ್ ಸ್ಪೀಕಿಂಗ್ ತರಬೇತಿಯ ಶೈಕ್ಷಣಿಕ ಪ್ರಗತಿಯ ಮಹಾನ್ ಉದ್ದೇಶದಿಂದ ಕಲಾಧರ ಯಕ್ಷರಂಗ ಬಳಗ ಜಲವಳ್ಳಿ(ರಿ) ಹೊನ್ನಾವರ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ “ಯಕ್ಷೋಪಾಸನೆ” ಎಂಬ ಯಕ್ಷಗಾನ ಬಯಲಾಟ ಆಡಿಸಿ ಆದರಿಂದ ಬಂದ ಹಣದಿಂದ ಶಾಲಾಭೀವೃದ್ಧಿಗೊಳಿಸುವ ಈ ಯುವಕರ ಕಾರ್ಯ ಶ್ಲಾಘನೀಯವಾಗಿದೆ. ದಿನಾಂಕ 30 ನೇ ಎಪ್ರಿಲ್ ಸೋಮವಾರ ಸರಕಾರಿ ಪ್ರೌಢಶಾಲೆಯ ಅವರಣದಲ್ಲಿಯೇ ಈ ಕಾರ್ಯಕ್ರಮ ಆಯೋಜನೆಗೊಂಡಿರುವುದು ವೈಶಿಷ್ಟ್ಯತೆಗೆ ಕಾರಣವಾಗಿದೆ.