ಶಿರ್ವ : ಕುತ್ಯಾರು ಕೇಂಜ ಪರಿಸರದಲ್ಲಿ ಚಿರತೆ ಸಹಿತ ವಿಪರೀತ ಕಾಡುಪ್ರಾಣಿಗಳ ಹಾವಳಿ – Vishwanews24
ಶಿರ್ವ : ಕುತ್ಯಾರು ಕೇಂಜ ಪರಿಸರದಲ್ಲಿ ಚಿರತೆ ಸಹಿತ ವಿಪರೀತ ಕಾಡುಪ್ರಾಣಿಗಳ ಹಾವಳಿ
ಶಿರ್ವ: ಕುತ್ಯಾರು ಗ್ರಾ.ಪಂ. ವ್ಯಾಪ್ತಿಯ ಕುತ್ಯಾರು ಕೇಂಜ ಪರಿಸರದಲ್ಲಿ ಚಿರತೆ ಸಹಿತ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದ್ದು, ರಸ್ತೆಯಲ್ಲಿ ನಡೆದಾಡುವ ಗ್ರಾಮಸ್ಥರು, ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ.
ಪರಿಸರದ ಕಾಡಿನಲ್ಲಿ ಮೂರ್ನಾಲ್ಕು ಚಿರತೆಗಳಿದ್ದು ರಾತ್ರಿ ವೇಳೆ ತಿರುಗಾಡುತ್ತಿವೆ. ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಭಯಭೀತರಾಗಿದ್ದು,ವಾಹನ ಸವಾರರೋರ್ವರಿಗೆ ರಾತ್ರಿ ರಸ್ತೆಯಲ್ಲಿ ಅಡ್ಡಾಡುವ ಚಿರತೆ ಕಂಡುಬಂದಿದ್ದು, ಮೊಬೈಲ್ನಲ್ಲಿ ಕ್ಲಿಕ್ಕಿಸಿದ್ದಾರೆ.ಪರಿಸರದ ನಾಗರಿಕರ ಸಾಕು ಪ್ರಾಣಿಗಳು ಕೂಡಾ ಕಾಣೆಯಾಗುತ್ತಿದ್ದು ನಾಗರಿಕರನ್ನು ಭಯಭೀತರನ್ನಾಗಿಸಿದೆ.
ಬೆಂಗಳೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ; ಇಬ್ಬರಿಗೆ ಗಾಯ – Vishwanews24
ಅಧಿಕಾರಿಗಳು ಕೂಡಲೇ ಸ್ಪಂದಿಸಿ:
ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಪರಿಸರಕ್ಕೆ ಭೇಟಿ ನೀಡಿ,ಚಿರತೆ ಹಾವಳಿಗೆ ಬೋನು ಇರಿಸಿ ಹಾಗೂ ಜಿಂಕೆ ಮತ್ತಿತರ ಕಾಡುಪ್ರಾಣಿಗಳ ಹಾವಳಿಗೆ ಸೂಕ್ತ ಕ್ರಮ ಕೈಗೊಂಡು ನಾಗರಿಕರು ನಿರ್ಭೀತಿಯಿಂದ ನಡೆದುಕೊಂಡು ಹೋಗಲು ಅನುವು ಮಾಡಿಕೊಡಬೇಕಾಗಿದೆ. – ಕುತ್ಯಾರು ಕೇಂಜ ಶ್ರೀಧರ ತಂತ್ರಿ ,ಆಗಮ ಪಂಡಿತರು
ಬನ್ನೇರುಘಟ್ಟದ ಬಿಜೆಪಿ ಮುಖಂಡ ಜಯರಾಮ್ ಕಾಂಗ್ರೆಸ್ ಸೇರ್ಪಡೆ – Vishwanews24
