ಶಿರ್ವ ಸಹಕಾರಿ ವ್ಯವಸಾಯಿಕ ಸಂಘ ನೂತನ ಹವಾನಿಯಂತ್ರಿತ ಪ್ರಧಾನ ಕಚೇರಿ ಉದ್ಘಾಟನೆ : vishwanews24

Featured, ಉಡುಪಿ

ಶಿರ್ವ ಸಹಕಾರಿ ವ್ಯವಸಾಯಿಕ ಸಂಘ ನೂತನ ಹವಾನಿಯಂತ್ರಿತ ಪ್ರಧಾನ ಕಚೇರಿ ಉದ್ಘಾಟನೆ : vishwanews24

ಹತ್ತು ಲಕ್ಷ ರೂಪಾಯಿ ಸಹಾಯಧನ‌ ಘೋಷಣೆ ಮಾಡಿದ ಡಾ.ಎಂ.ಎನ್.ಆರ್

ಉಡುಪಿ\ಶಿರ್ವ: ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ನೂತನ ಹವಾನಿಯಂತ್ರಿತ ಪ್ರಧಾನ ಕಛೇರಿ ಹಾಗೂ ಗೋಧಾಮು ಕಟ್ಟಡ, ಪಡಿತರ ಮತ್ತು ರಸಗೊಬ್ಬರ ವಿತರಣೆ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಶನಿವಾರ ನೆರವೇರಿತು.

ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ಪ್ರಧಾನ ಕಛೇರಿ ಉದ್ಘಾಟಿಸಿದರು.

ಈ ಸಂದರ್ಭ ಅವರು ಮಾತನಾಡಿ ” ಶಿಸ್ತಿನ ಕಾರ್ಯಕ್ರಮ-ನಮ್ಮ ಕಾರ್ಯಕ್ರಮ ನನಗೆ ಆಗುತ್ತಿರುವ ಎಲ್ಲಾ ಸನ್ಮಾನ‌ಕಾರ್ಯಕ್ರಮ-ಇವೆಲ್ಲವೂ ಕೂಡ ವ್ಯಕ್ತಿಗೆ ಆಗವ ಗೌರವ ಅಲ್ಲ ಅದು ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಸಲ್ಲಬೇಕು ಇವತ್ತು ಮಹಿಳೆಯರು ಸ್ವಾವಲಂಬನೆಯ ಜೀವನ ನಡೆಸಲು ನವೋದಯ ಸ್ವಸಹಾಯ ಸಂಘ ಕಾರಣವಾಗಿದೆ.

ಆಟವಾಡುವಾಗ ಕಾಲು ಜಾರಿ ನಾಲೆಗೆ ಬಿದ್ದು ಬಾಲಕಿ ನೀರುಪಾಲು – Vishwanews24

ಸಹಕಾರಿ ಕ್ಷೇತ್ರ ಅತ್ಯಂತ ಪವಿತ್ರ ಕ್ಷೇತ್ರ ಎಂಬ ಮಾತನ್ನು ದಿಟವಾಗಿಸಿದ ಜಿಲ್ಲೆ ಅವಿಭಜಿತ ದಕ- ಹಾಗೂ ಉಡುಪಿ ಜಿಲ್ಲೆ ಎಂದು ಹೇಳಲು ಹೆಮ್ಮೆಯಾಗುತ್ತದೆ.ಇವತ್ತು ರಾಷ್ಟ್ರ ಮಟ್ಟದಲ್ಲಿ ನಮ್ಮ ಜಿಲ್ಲೆಯ ಸಹಕಾರಿ ವ್ಯವಸ್ಥೆ ಪ್ರಥಮ ಸ್ಥಾನಗಿಟ್ಟಿಸಿಕೊಂಡಿದೆ ಅದಕ್ಕೆ ಮೂಲ ಕಾರಣ ನಮ್ಮ ಜಿಲ್ಲೆಯ ಸಹಕಾರಿಗಳು ಎಂದರು.ಇದೇ ಸಂಧರ್ಭದಲ್ಲಿ ಈ ಸಹಕಾರಿ ಸಂಘಕ್ಕೆ ಹತ್ತು ಲಕ್ಷ ರೂಪಾಯಿಯ ಸಹಾಯ ಧನ ನೀಡಲಾಗುವುದು ಮತ್ತು ಗಾಣದ ವ್ಯವಸ್ಥೆಗೆ ಸಹಕಾರ ಮಾಡುವುದಾಗಿದೆ ಘೋಷಿಸಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿ” ಸಹಕಾರಿ ರಂಗದಲ್ಲಿ ಯಾವುದೇ ಜಾತಿ ಧರ್ಮ ಮತ ಅಡ್ಡಿಯಾಗುವುದಿಲ್ಲ ಅಂತಹ ಸಂಘಟನೆ ಕೂಡಲಸಂಗಮವಾಗುವುದು,ಜನಸಾಮಾನ್ಯರ ಕಟ್ಟಕಡೆಯ ವ್ಯಕ್ತಿಗೆ ಸಹಕಾರಿ ವ್ಯವಸ್ಥೆ ಮುಟ್ಟಿಸುವ ಕೆಲಸ ಈ ಸಂಸ್ಥೆಯಿಂದ ಮುಂದುವರಿಯಲಿ ಎಂದು ಆಶೀಸಿದರು.

ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ತ್ಯಾರು ಪ್ರಸದ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು.

ಶಾಸಕ ಯಶಪಾಲ್ ಸುವರ್ಣ ಕಾನ್ಫರೆನ್ಸ್ ಕಾಲ್ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಗ್ರಾಹಕರ ಭದ್ರತಾ ಕೋಶ, ಉಡುಪಿ ಜಿಲ್ಲೆ ಸಹಕಾರ ಭಾರತಿ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ರಸಗೊಬ್ಬರ ಗೋಧಾಮು ಮತ್ತು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ಎಂ ಎಸ್ ಸಿ ಗೋದಾಮು ಉದ್ಘಾಟಿಸಿದರು.

ದ.ಕ.ಜಿ.ಕೇಂದ್ರ ಸ.ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ರಾಜೇಶ್ ರಾವ್ ಪಾಂಗಾಳ, ನಾಬಾರ್ಡ್ ನ ಡಿಡಿಎಂ ಸಂಗೀತ ಎಸ್ ಕರ್ತ, ಮಂಗಳೂರು ಮತ್ತು ಉಡುಪಿ ಸಹಕಾರ ಸಂಘಗಳ ಉಪ ನಿಬಂಧಕ ಎಚ್. ಎನ್. ರಮೇಶ್ ಹಾಗೂ ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್ ವಿ , ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಟ್ಟಡ ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಬಂದ್‌ಗೆ ಕರೆ – Vishwanews24

ಸಂಘದ ಉಪಾಧ್ಯಕ್ಷೆ ವಾರಿಜಾ ಆರ್ ಕಲ್ಮಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ಮತ್ತು ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

ಬೆಳಿಗ್ಗೆ ಕಚೇರಿ ಕಟ್ಟಡ ಉದ್ಘಾಟನೆ ನಡೆದು 10 ಗಂಟೆಗೆ ಪ್ರಧಾನ ಕಚೇರಿಯಿಂದ ಶಿರ್ವ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದವರೆಗೆ ಶೋಭ ಯಾತ್ರೆ ನಡೆಯಿತು.

Leave a Reply