ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದ ಯಡಿಯೂರಪ್ಪ – vishwanews24
ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದ ಯಡಿಯೂರಪ್ಪ
ಮಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಕ್ಕೆ ಭೇಟಿ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಶ್ರೀಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಕುಂದಾಪುರ: ಟ್ರಕ್ನ ಕೆಳಗೆ ಸಿಲುಕಿದ ಸ್ಕೂಟರ್ ; ಅದೃಷ್ಟವಶಾತ್ ತಾಯಿ, ಮಗಳು ಪ್ರಾಣಾಪಾಯದಿಂದ ಪಾರು – vishwanews24
ಧರ್ಮಸ್ಥಳದ ಬಳಿಕ ಬಿ.ಎಸ್.ಯಡಿಯೂರಪ್ಪ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ್ದಾರೆ. ಈ ವೇಳೆ ಮಾತನಾಡಿದ ಯಡಿಯೂರಪ್ಪ, ಹಲವು ವರ್ಷಗಳ ಬಳಿಕ ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದೇನೆ. ಹೆಗ್ಗಡೆ ಅವರ ಆಶಿರ್ವಾದ ಕೂಡ ದೊರೆತಿದೆ. ನಮ್ಮ ಭಾಗದಲ್ಲಿ ಒಂದು ರೀತಿಯಲ್ಲಿ ಬರಗಾಲವಿದೆ. ಹಾಗಾಗಿ ಸಕಾಲದಲ್ಲಿ ಮಳೆ-ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಬರುವ ದಿನಗಳು ಒಳ್ಳೆಯ ದಿನಗಳಾಗುತ್ತೆ ಎಂಬ ಭಾವನೆ ನನಗಿದೆ ಎಂದು ಹೇಳಿದರು.
ಕುಂದಾಪುರ: ಟ್ರಕ್ನ ಕೆಳಗೆ ಸಿಲುಕಿದ ಸ್ಕೂಟರ್ ; ಅದೃಷ್ಟವಶಾತ್ ತಾಯಿ, ಮಗಳು ಪ್ರಾಣಾಪಾಯದಿಂದ ಪಾರು – vishwanews24
