ಸುಗ್ಗಿ ಮಾರಿಪೂಜೆ ಹಿನ್ನಲೆ ಮೂರನೇ ಮಾರಿಗುಡಿಯ ಪತ್ರಿಕಾ ಪ್ರಕಟನೆ -Vishwanews24

Featured, ಉಡುಪಿ

ಕಾಪು: ಕಾಪು ಶ್ರೀ ಮೂರನೇ ಮಾರಿಯಮ್ಮ ದೇವಳದಲ್ಲಿ ಜರಗಬೇಕಾಗಿರುವ ತಾ: 24.03.2020 ಮತ್ತು 25.03.2020 ರ ಕಾಲಾವಧಿ ಸುಗ್ಗಿ ಮಾರಿಪೂಜೆಯನ್ನು ಕೋವಿಡ್ 19 ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸರಕಾರದ ಮತ್ತು ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ದೇವಳದ ಸಮಿತಿ, ಅರ್ಚಕರು ಮತ್ತು ಸಿಬ್ಬಂದಿ ವರ್ಗ ಮಾತ್ರ ಭಾಗವಹಿಸಿ ಮಾರಿಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವರೇ ತೀರ್ಮಾನಿಸಲಾಗಿದೆ. ಅಲ್ಲದೇ ಜನಸಂದಣಿ ಸೇರಿದಲ್ಲಿ ಈ ಮೂಲಕ ಸೋಂಕು ಹರಡುವ ಸಾದ್ಯತೆ ಹೆಚ್ಚು ಇರುವ ಕಾರಣದಿಂದ ದೇವಳದ ಮಾರಿಪೂಜಾ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ . ಆ ದಿನದಂದು ಕುರಿ, ಕೋಳಿ, ಇತರ ಹರಕೆ ಸೇವೆ ಇರುವುದಿಲ್ಲ. ಭಕ್ತಾಭಿಮಾನಿಗಳು ಸಹಕರಿಸಬೇಕಾಗಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ಮೋಹನ್ ಎಂ ಬಂಗೇರಾ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.