ಸುರತ್ಕಲ್: ನೂತನ ಕುಮಾರಿ ಅವರಿಗೆ ಉದ್ಯೋಗದ ಆದೇಶ ಪುನರ್ ಹೊರಡಿಸಬೇಕು : ಭರತ್ ಶೆಟ್ಟಿ – Vishwanews24
ಸುರತ್ಕಲ್: ನೂತನ ಕುಮಾರಿ ಅವರಿಗೆ ಉದ್ಯೋಗದ ಆದೇಶ ಪುನರ್ ಹೊರಡಿಸಬೇಕು : ಭರತ್ ಶೆಟ್ಟಿ
ಸುರತ್ಕಲ್: ರಾಜ್ಯದಲ್ಲಿ ದ್ವೇಷ ರಾಜಕಾರಣಕ್ಕೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರ ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾಗಿರುವ ಪ್ರವೀಣ ನೆಟ್ಟಾರು ಅವರ ಪತ್ನಿಗೆ ಮಾನವೀಯ ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೀಡಿರುವ ಕೆಲಸವನ್ನ ಕೂಡ ಕಸಿದುಕೊಂಡಿದ್ದು ಖಂಡನೀಯ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣ ಮುಖ್ಯಮಂತ್ರಿಗಳು ಮಾನವೀಯ ನೆಲೆಯಲ್ಲಿ ನೂತನ ಕುಮಾರಿ ಅವರಿಗೆ ಉದ್ಯೋಗದ ಆದೇಶ ಪುನರ್ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಆಡಳಿತಕ್ಕೆ ಬಂದ ಕೂಡಲೇ ಬಿಜೆಪಿ ಕಾರ್ಯಕರ್ತರು ಹಿಂದುತ್ವಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ಅವರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು ಹಲವಾರು ಕಡೆ ಹಲ್ಲೆ ನಡೆದ ಪ್ರಕರಣ ನಡೆದಿದೆ.
ಪ್ರವೀಣ್ ನೆಟ್ಟಾರು ಪತ್ನಿಯನ್ನು ಕೆಲಸದಿಂದ ಬಿಡುಗಡೆ ಮಾಡಿರುವುದು ಸರಿಯಲ್ಲ : ಸರಕಾರಕ್ಕೆ ನಳಿನ್ – Vishwanews24
ಮಾಜಿ ಸಚಿವರಾದ ಡಾ. ಅಶ್ವತ್ಥ ನಾರಾಯಣ್ ಅವರ ಮೇಲೆಯೂ ಕೂಡ ದುರುದ್ದೇಶಪೂರಿತವಾಗಿ ಕೇಸು ದಾಖಲಿಸಿದೆ.
ಒಂದಡೆ ಆಶ್ವಾಸನೆ ನೀಡಿದ ಗ್ಯಾರಂಟಿಗಳನ್ನು ಜನರಿಗೆ ಕೊಡಲು ಒದ್ದಾಡುತ್ತಿರುವ ಸರ್ಕಾರ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಸಲುವಾಗಿ ಬಿಜೆಪಿಯ ವಿರುದ್ಧ ಹಗೆಯನ್ನ ತೀರಿಸಿಕೊಳ್ಳುವ ಕೆಲಸ ಮಾಡುತ್ತಿದೆ ಆಕ್ರೋಶ ವ್ಯಕ್ತಪಡಿಸಿರುವ ಅವರು ಆರ್ ಎಸ್ ಎಸ್, ಬಜರಂಗದಳ ಸಹಿತ ಹಿಂದೂ ಪರ ಕೆಲಸ ಮಾಡುವ ಸಂಘಟನೆಗಳನ್ನು ಗುರಿಯಾಗಿಸಿ ಯಾವುದೇ ಕ್ರಮ ಕೈಗೊಂಡರೂ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಉಂಟಾದರೆ ರಾಜ್ಯ ಸರಕಾರದ ಹೊಣೆಗೇಡಿತನದ ನಿರ್ಧಾರ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಕಾರ್ಕಳ: ಜೋಕಾಲಿ ಆಟವಾಡುತ್ತಿದ್ದಾಗ ಕುತ್ತಿಗೆಗೆ ಸೀರೆ ಸುತ್ತಿಕೊಂಡು ಬಾಲಕಿ ಮೃತ್ಯು – Vishwanews24
