ಸೊರಕೆಯವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ: ರಾಜ್ ಬಬ್ಬರ್

Featured, ಉಡುಪಿ

ಕಾಪು: ಕಾಂಗ್ರೆಸ್ ಶಾಸಕರಲ್ಲಿ ರಾಜ್ಯದ ಲ್ಲಯೇ ಕಾಪು ಕ್ಷೇತ್ರ ವನ್ನು ಮಾದರಿ ಕ್ಷೇತ್ರ ವನ್ನಾಗಿ ಮಾಡಿದ ಅಭಿವೃದ್ಧಿ ಯ ಹರಿಕಾರ ಸೊರಕೆಯವರನ್ನು ಪ್ರಚಂಡ ಬಹುಮತವನ್ನು ಗೆಲ್ಲಿಸಿ ಅಂತ ಉತ್ತರಪ್ರದೇಶದ ಲೋಕ ಸಭಾ ಸದಸ್ಯ ಖ್ಯಾತ ಬಾಲಿವುಡ್ ನಟ ರಾಜ್ ಬಬ್ಬರ್ ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪರ ಹಿರಿಯಡ್ಕ ಬಸ್ ಸ್ಟಾಂಡ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಚಾರ ಭಾಷಣದಲ್ಲಿ ಅವರು ಮಾತನಾಡಿದರು.

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಮಾತನಾಡಿ ಧರ್ಮದಲ್ಲಿ ರಾಜಕೀಯ ಮಾಡಬೇಡಿ. ರಾಜಕೀಯದಲ್ಲಿ ಧರ್ಮ ಇರಬೇಕು ಅನ್ನೊದು ನನ್ನ ಧ್ಯೇಯ. ಶಾಸಕ ಮಂತ್ರಿ ಎನ್ನುವುದಕ್ಕಿಂತ ಹೆಚ್ಚಾಗಿ ಜನಸೇವಕನಾಗಿ ಕೆಲಸ ಮಾಡಿದೀನಿ.ಈಗ ವಿನಯ್ ಕುಮಾರ್ ಸೊರಕೆ ಚುನಾವಣೆ ನಿಂತಿದೀನಿ ಅನ್ನೊದಕ್ಕಿಂತ ಹೆಚ್ಚಾಗಿ ನೀವೇ ಚುನಾವಣೆಗೆ ನಿಂತಿದ್ದೀರಿ ಅನ್ನೊ ರೀತಿಯಲ್ಲಿ ನನ್ನನ್ನು ಬೆಂಬಲಿಸಿ ಅತೀ ಹೆಚ್ಚು ಮತಗಳಿಂದ ಗೆಲ್ಲಿಸಿ ಅಂತ ಕಾರ್ಯಕರ್ತರಲ್ಲಿ ವಿನಂತಿ ಮಾಡಿಕೊಂಡ್ರು.

 

ಕಾಂಗ್ರೆಸ್ ಮುಖಂಡರಾದ ಯು. ಆರ್ ಸಭಾಪತಿ, ಎಂ.ಎ. ಗಫೂರ್, ಸುಧೀರ್ ಹೆಗ್ಡೆ, ಹರೀಶ್ ಕಿಣಿ, ಮಾಲತಿ ಆಚಾರ್ಯ, ಲಕ್ಷ್ಮೀನಾರಾಯಣ ಪ್ರಭು, ಚಂದ್ರಿಕಾ ಕೇಳ್ಕರ್, ವಿಲ್ಸನ್ ರೊಡ್ರಿಗಸ್,, ರಾಬರ್ಟ್, ವಿನೋದ್ ಶೆಟ್ಟಿ, ಇಸ್ಮಾಯಿಲ್ ಅತ್ರಾಡಿ, ಸುರೇಶ್ ನಾಯಕ್, ಶಾಂತಾರಾಮ‌ಸೂಡ, ಶ್ರೀಪಾದ ರೈ, ಗಿರೀಶ್ ಉದ್ಯಾವರ, ಶ್ರೀಧರ ಶೆಟ್ಟಿ, ಪ್ರವೀಣ್ ಹೆಗ್ಡೆ, ಪಂಜು ಪೂಜಾರಿ, ಸುಗಂಧಿ ಶೇಖರ್, ರವೀಂದ್ರ ಪೂಜಾರಿ, ವಿನ್ಸೆಂಟ್ ಮೊದಲಾದವರು ಉಪಸ್ಥಿತರಿದ್ದರು.