ಹರೀಶ್ ಪೂಂಜಾಗೆ ಕೊರೋನಾ ಸೋಂಕು : ಶೀಘ್ರ ಗುಣಮುಖರಾಗಲಿ ಎಂದು ಕಾರ್ಯಕರ್ತ ಅಭಿಮಾನಿ ಗಳು ಮತ್ತು ಊರವರಿಂದ ಸರ್ವ ಸೇವಾ ಪೂಜೆ -Vishwanews24
ಬೆಳ್ತಂಗಡಿ: ಮೂರು ದಿನಗಳ ಹಿಂದೆ ತಾಲೂಕಿನ ಶಾಸಕ ಹರೀಶ್ ಪೂಂಜಾಗೆ ಕೊರೋನಾ ಸೋಂಕು ಇರುವುದು ದೃಢವಾಗಿತ್ತು. ಈ ಹಿನ್ನಲೆಯಲ್ಲಿ ಹರೀಶ್ ಪೂಂಜಾರವರು ಶೀಘ್ರ ಗುಣಮುಖರಾಗಲಿ ಎಂದು ತಾಲೂಕಿನ ಪದ್ಮುಂಜ ಸಮೀಪದ ಕುರಾಯ ಸದಾಶಿವ ದೇವಸ್ಥಾನ ದಲ್ಲಿ ಕಾರ್ಯಕರ್ತ ಅಭಿಮಾನಿ ಗಳು ಮತ್ತು ಊರವರು ಸೇರಿ ಸರ್ವ ಸೇವಾ ಪೂಜೆ ಯನ್ನು ನೆರೆವೇರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಕಂಡಿಗ, ಹಾಗೂ ಪ್ರಮುಖರಾದ ಅಶೋಕ್ ಭಟ್,ಧರ್ಣಪ್ಪ ಗೌಡ,ಬಾಬು ಗೌಡ, ಕುಶಾಲಪ್ಪ ಗೌಡ, ರಾಮಣ್ಣ ಗೌಡ ಹಾಗೂ ಊರವರು ಉಪಸ್ಥಿತರಿದ್ದರು.

