ಹಿಂದೂ ಧರ್ಮಕ್ಕೆ ವಿರುದ್ದವಾಗಿ ಜ.1ರಂದು ಹೊಸ ವರ್ಷಾಚರಣೆ ಮಾಡಿದರೆ ಧರಣಿ ನಡೆಸಲಾಗುವುದು : ಪ್ರಮೋದ್ ಮುತಾಲಿಕ್ – Vishwanews24
ಹಿಂದೂ ಧರ್ಮಕ್ಕೆ ವಿರುದ್ದವಾಗಿ ಜ.1ರಂದು ಹೊಸ ವರ್ಷಾಚರಣೆ ಮಾಡಿದರೆ ಧರಣಿ ನಡೆಸಲಾಗುವುದು : ಪ್ರಮೋದ್ ಮುತಾಲಿಕ್ – Vishwanews24
ಹುಬ್ಬಳ್ಳಿ: “ಹಿಂದೂ ಧರ್ಮಕ್ಕೆ ವಿರುದ್ದವಾಗಿ ರಾಜ್ಯದ ಧರ್ಮಸ್ಥಳ, ಆರ್ಟ್ ಆಫ್ ಲಿವಿಂಗ್ ಹಾಗೂ ಇಸ್ಕಾನ್ನಲ್ಲಿ ಜ.1ರಂದು ಹೊಸ ವರ್ಷಾಚರಣೆ ಮಾಡಿದರೆ ಧರಣಿ ನಡೆಸಲಾಗುವುದು” ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದ್ಧಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಯುಗಾದಿಯಂದು ಹಿಂದೂಗಳಿಗೆ ಹೊಸ ವರ್ಷ ಆರಂಭವಾಗುತ್ತದೆ. ಹಾಗಾಗಿ ಕ್ರೈಸ್ತರ ಹೊಸ ವರ್ಷಾಚರಣೆ ಮಾಡಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಆರ್ಟ್ ಆಫ್ ಲಿವಿಂಗ್ನ ರವಿಶಂಕರ ಗುರೂಜಿ ಹಾಗೂ ಇಸ್ಕಾನ್ ಮಧುದಾಸ ಪಂಡಿತ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ” ಎಂದಿದ್ದಾರೆ.
“ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಕ್ರೈಸ್ತರ ಹೊಸ ವರ್ಷವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸ್ವಾಗತ ಫಲಕ ಅಳವಡಿಕೆ ಸೇರಿದಂತೆ ದೀಪಾಲಂಕಾರ ಹಾಗೂ ಪೂಜೆಯೊಂದಿಗೆ ಸಿಹಿ ವಿತರಿಸಲಾಗುತ್ತದೆ. ಇದರಿಂದ ಹಿಂದೂ ಧರ್ಮಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ” ಎಂದು ಹೇಳಿದ್ದಾರೆ.
