ಹಿಜಾಬ್-ಕೇಸರಿ ವಿವಾದ :ಇನ್ಮುಂದೆ ರೈತ ಮಕ್ಕಳಿಗೆ ಹಸಿರು ಟವಲ್ ಧರಿಸಿ ಅಂತ ಹೇಳಬೇಕೇ ? ಎಚ್ಡಿಕೆ – Vishwanews24
ಹಿಜಾಬ್-ಕೇಸರಿ ವಿವಾದ :ಇನ್ಮುಂದೆ ರೈತ ಮಕ್ಕಳಿಗೆ ಹಸಿರು ಟವಲ್ ಧರಿಸಿ ಅಂತ ಹೇಳಬೇಕೇ ? ಎಚ್ಡಿಕೆ – Vishwanews24
ಕೇಸರಿ ಶಾಲು-ಹಿಜಾಬು ಇದೆಲ್ಲವನ್ನೂ ಬಿಟ್ಟು ಬಿಡಬೇಕು. ಇದರಿಂದ ಏನು ಪ್ರಯೋಜನ ಆಗೋದಿಲ್ಲ..
ಬೆಂಗಳೂರು:ರೈತರ ಮಕ್ಕಳಿಗೆ ನೀವೂ ಇನ್ಮುಂದೆ ಹಸಿರು ಶಾಲು ಧರಿಸಿಕೊಂಡು ಕಾಲೇಜಿಗೆ ಹೋಗಿ ಅಂತಲೇ ಕೆರೆ ಕೊಡಬೇಕಾಗುತ್ತದೆ. ಹೀಗಂತ ಮಾಜಿ ಸಿಎಂ ಎಚ್.ಡಿ.ಕುಮಾರ್ ಸ್ವಾಮಿ ಹೇಳಿದ್ದಾರೆ.
ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಪ್ರತಿಕ್ರಿಯೇ ನೀಡಿದ ಕುಮಾರಸ್ವಾಮಿ ಅವ್ರು, ಕೇಸರಿ ಶಾಲು-ಹಿಜಾಬು ಇದೆಲ್ಲವನ್ನೂ ಬಿಟ್ಟು ಬಿಡಬೇಕು. ಇದರಿಂದ ಏನು ಪ್ರಯೋಜನ ಆಗೋದಿಲ್ಲ. ಮಾಡೋಕೆ ಸಾಕಷ್ಟು ಕೆಲಸಗಳು ಇವೆ. ಅದರ ಬಗ್ಗೆ ಗಮನ ಹರಿಸೋದು ಉತ್ತಮ.
ಹೀಗೆ ಆದರೆ ನಮ್ಮ ರೈತ ಮಕ್ಕಳಿಗೆ ಹಸಿರು ಟವಲ್ ಹಾಕಿಕೊಂಡು ಶಾಲೆ-ಕಾಲೇಜಿಗೆ ಹೋಗಿ ಅಂತಲೇ ಹೇಳಬಾಗುತ್ತದೆ. ಇದೆಲ್ಲ ಸರಿ ಅಲ್ಲ. ಇದನ್ನೆಲ್ಲ ಬಿಟ್ಟು ಬಿಡಿ ಅಂತಲೇ ಮಾಜಿ ಸಿಎಂ ಎಚ್ಡಿ ಕುಮಾರ್ಸ್ವಾಮಿ ಹೇಳಿದ್ದಾರೆ.
