ಹೆಜಮಾಡಿ: ಅಪ್ಪಳಿಸಿದ ಬೃಹತ್ ಅಲೆ ; ಸಮುದ್ರದಲ್ಲಿ ಮುಳುಗಿ ಮೀನುಗಾರ ಮೃತ್ಯು -Vishwanews24

Featured, ಉಡುಪಿ

ಹೆಜಮಾಡಿ: ಅಪ್ಪಳಿಸಿದ ಸಮುದ್ರದಲೆ; ಮುಳುಗಿ ಮೀನುಗಾರ ಮೃತ್ಯು -Vishwanews24

ಪಡುಬಿದ್ರಿ: ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಹೆಜಮಾಡಿ ಅಳಿವೆ ಬಾಗಿಲಿನಲ್ಲಿ ನಡೆದಿದೆ.

ಹೆಜಮಾಡಿ ಕೋಡಿ ಮಾನಂಪಾಡಿಯ ಜಯಂತ ಶ್ರೀಯಾನ್ (45) ಮೃತಪಟ್ಟವರಾಗಿದ್ದು, ಇವರು ಇಂದು ಮುಂಜಾವ ಅಳಿವೆ ಬಾಗಿಲು( ನದಿ ಕಡಲು ಸೇರುವ ಸಂಗಮ ಸ್ಥಳ) ಸಮೀಪ ಮೀನುಗಾರಿಕೆಯಲ್ಲಿ ನಿರತರಾಗಿದ್ದರು. ಈ ವೇಳೆ ಏಕಾಏಕಿ ಮೇಲೆದ್ದ ಬೃಹತ್ ಅಲೆ ಮೀನುಗಾರನಿಗೆ ಅಪ್ಪಳಿಸಿದೆ. ಅಲೆಯ ಘಾತಕ ಪ್ರಹಾರದಿಂದಾಗಿ ಮೀನುಗಾರ ದೋಣಿಯಿಂದ ನೀರಿಗೆ ಬಿದ್ದಿದ್ದು, ಈಜಲೂ ಸಾಧ್ಯವಾಗದೆ ದಾರುಣವಾಗಿ ಮೃತಪಟ್ಟಿದ್ದಾರೆ.

ಜಯಂತ್ ಅವರಿಗೆ ಪತ್ನಿ ಹಾಗೂ 4 ಮಕ್ಕಳಿದ್ದಾರೆ. ಸ್ಥಳಕ್ಕೆ ಪಡುಬಿದ್ರಿ ಎಸ್ ಐ ದಿಲೀಪ್, ಹೆಜಮಾಡಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ, ಸದಸ್ಯ ಶರಣ್ ಕುಮಾರ್ ಮಟ್ಟು ಮತ್ತಿತರರು ಭೇಟಿ ನೀಡಿದರು. ಮೃತದೇಹವನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ.