ಹೆಜಮಾಡಿ: ಟೋಲ್ ಗೇಟಿನಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯತಿ: ನವಯುಗ ಕಂಪನಿಗೆ ಮನವಿ -Vishwanews24
ಹೆಜಮಾಡಿ: ಟೋಲ್ ಗೇಟಿನಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯತಿ: ನವಯುಗ ಕಂಪನಿಗೆ ಮನವಿ -Vishwanews24
ಹೆಜಮಾಡಿ : ಪಡುಬಿದ್ರಿ ಸಮೀಪದ ಹೆಜಮಾಡಿ ಟೋಲ್ ಗೇಟಿನಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯತಿ ನೀಡುವಂತೆ ಹೆಜಮಾಡಿ ಗ್ರಾಮ ಪಂಚಾಯತ್ ವತಿಯಿಂದ ನವಯುಗ ಕಂಪನಿಗೆ ಮನವಿ ಸಲ್ಲಿಸಲಾಯಿತು.
ಹೆಜಮಾಡಿ ಗ್ರಾಮದಿಂದ ಕೇವಲ ಅರ್ಧ ಕಿಲೋ ಮೀಟರ್ ದೂರದಲ್ಲಿ ಮೂಲ್ಕಿ ಗ್ರಾಮ ಇದೆ. ಮೂಲ್ಕಿಯಲ್ಲಿ ವ್ಯಾಪಾರ ವಹಿವಾಟು ಮಾಡುವವರಿಗೆ ಟೋಲ್ ಗೇಟಿನಿಂದ ಅತ್ಯಂತ ತೊಂದರೆ ಉಂಟಾಗುತ್ತಿದೆ. ಹೆಜಮಾಡಿ ಪರಿಸರದ ವಾಹನಗಳಿಗೆ ಟೋಲ್ ಗೇಟಿನ ಸಿಬ್ಬಂದಿ ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ.
ಇದನ್ನೂ ಓದಿ :ಉಡುಪಿ: ಅನರ್ಹರ ಪಡಿತರ ಚೀಟಿ ಹಿಂದಿರುಗಿಸಲು ಏ. 15 ಕೊನೆಯ ದಿನ : ಜಿಲ್ಲಾಧಿಕಾರಿ ಜಿ. ಜಗದೀಶ್ -Vishwanews24
ಶಾಲಾ ಬಸ್ಸ್ಗಳಿಗೂ ಟೋಲ್ ವಿನಾಯಿತಿ ಇಲ್ಲದ್ದರಿಂದ ಪಾಲಕರು ಹೆಚ್ಚಿನ ಹಣವನ್ನು ಶಾಲೆಗೆ ಭರಿಸಬೇಕಾಗಿದೆ. ಟೋಲ್ನಲ್ಲಿ ವಿನಾಯತಿ ನೀಡುವಂತೆ ಈಗಾಗಲೇ ಟೋಲ್ ಗೇಟಿನ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಅವರು ಸ್ಪಂದಿಸುತ್ತಿಲ್ಲ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ ಮಾಧ್ಯಮಕ್ಕೆ ತಿಳಿಸಿದ್ದಾರೆ ಹೇಳಿಕೊಂಡಿದ್ದಾರೆ.
ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪವಿತ್ರ ಗಿರೀಶ್, ಹೆಜಮಾಡಿ ಗ್ರಾಮ ಪಂಚಾಯತ್ನ ಎಲ್ಲಾ ಸದಸ್ಯರು ಟೋಲ್ ಗೇಟಿಗೆ ತೆರಳಿ ಅಲ್ಲಿಯ ಅಧಿಕಾರಿ ಶಿವಪ್ರ್ರಸಾದ್ ರೈಯವರಿಗೆ ಮನವಿ ಸಲ್ಲಿಸಿದರು. ಶಿವಪ್ರ್ರಸಾದ್ ರೈಯವರು ಮನವಿಗೆ ಸ್ಪಂಧಿಸಿ, ಮೇಲಾಧಿಕಾರಿಯವರಿಗೆ ಈ ಬಗ್ಗೆ ತಿಳಿಹೇಳಿ ಶೀಘ್ರವಾಗಿ ಸ್ಪಂಧಿಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ :ಉಡುಪಿ :ಕನ್ನಡ ಬಳಕೆ ಕಡ್ಡಾಯ : ಜಿಲ್ಲಾಧಿಕಾರಿ ಜಿ.ಜಗದೀಶ್ -Vishwanews24
