Featured

ಅಂಚೆ ಕಛೇರಿ ಗ್ರಾಹಕ ಸೇವೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನ -Vishwanews24

ಅಂಚೆ ಕಛೇರಿ ಗ್ರಾಹಕ ಸೇವೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನ -Vishwanews24

ಬೆಂಗಳೂರು: ಅಂಚೆ ಕಛೇರಿಗಳ ಮೂಲಕ ಗ್ರಾಹಕ ಸೇವೆಗಳನ್ನು ಪ್ರಾರಂಭಿಸಿದ ಎರಡು ತಿಂಗಳಲ್ಲಿ, ಕರ್ನಾಟಕವು ವಹಿವಾಟು ಮತ್ತು ಆದಾಯ ಸಂಗ್ರಹಣೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿಶೇಷ ಉದ್ದೇಶದ ವಾಹನವಾದ ನಾಗರಿಕ ಸೇವಾ ಕೇಂದ್ರ(ಸಿಎಸ್‌ಸಿ) ಸಾಮಾನ್ಯ ಸೇವಾ ಕೇಂದ್ರದೊಂದಿಗಿನ ಒಪ್ಪಂದದ ಆಧಾರದ ಮೇಲೆ ಕಳೆದ ವರ್ಷ ಡಿಸೆಂಬರ್ 15 ರಿಂದ ರಾಜ್ಯದ ಒಟ್ಟು 1,701 ಅಂಚೆ ಕಚೇರಿಗಳ ಪೈಕಿ 851 ರಲ್ಲಿ ಶುರು ಮಾಡಲಾಯಿತು.

ಆರ್ಥಿಕ ಪರಿಸ್ಥಿತಿ ಹದಗೆಡಲು ಮೋದಿ ಸರ್ಕಾರದ ತಪ್ಪು ನಿರ್ವಹಣೆಯೇ ಕಾರಣ : ಕಾಂಗ್ರೆಸ್ ವಾಗ್ದಾಳಿ -Vishwanews24

ಈ ಸಿಎಸ್‌ಸಿಗಳ ಮೂಲಕ ನಾಗರಿಕರು ವ್ಯಾಪಾರಿಯಿಂದ ಗ್ರಾಹಕ ಸೇವೆ (ಬಿ 2 ಸಿ) ಮತ್ತು ಸರ್ಕಾರದಿಂದ ನಾಗರಿಕ ಸೇವೆಗಳನ್ನು (ಜಿ 2 ಸಿ) ಪಡೆಯಬಹುದು. ಬಿ 2 ಸಿ ಸೇವೆಗಳಲ್ಲಿ ಮೊಬೈಲ್ ರೀಚಾರ್ಜ್, ನೀರು, ಅನಿಲ ಮತ್ತು ವಿದ್ಯುತ್ ಬಿಲ್‌ಗಳ ಪಾವತಿ, ವಿಮಾ ನವೀಕರಣ, ಇಎಂಐ ಪಾವತಿ, ವಿಮಾನ, ರೈಲು ಮತ್ತು ಬಸ್ ಇತ್ಯಾದಿ ಸೇರಿವೆ. ಜಿ2ಸಿ ಸೇವೆಯಲ್ಲಿ ಪ್ಯಾನ್ ಕಾರ್ಡ್, ಇ-ಸ್ಟ್ಯಾಂಪಿಂಗ್ ಸೇವೆಗಳು ಮತ್ತು ಜೀವನ್ ಪ್ರಮಾಣ್ ಪತ್ರ (ಡಿಜಿಟಲ್ ಲೈಫ್ ಸರ್ಟಿಫಿಕೇಟ್), ಇತ್ಯಾದಿ ಸೇವೆ ಸಿಗುತ್ತವೆ.

ಮಂಗಳೂರು : ಬಿಜೆಪಿ ಸರ್ಕಾರಗಳು ದಿನಕ್ಕೊಂದು ಕಾನೂನು ಜಾರಿಗೊಳಿಸುವ ಮೂಲಕ ಜನರ ಬವಣೆ ಹೆಚ್ಚಿಸುತ್ತಿವೆ : ಡಿ.ಕೆ. ಶಿ -Vishwanews24

ಕರ್ನಾಟಕ ಸರ್ಕಲ್‌ನ ಬಿಸಿನೆಸ್ ಡೆವಲಪ್‌ಮೆಂಟ್‌ನ ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ (ಎಪಿಎಂಜಿ) ವಿ ತಾರಾ, ‘ನಾವು ಸಿಎಸ್‌ಸಿಗಳ ಮೂಲಕ ಇಲ್ಲಿಯವರೆಗೆ ಸುಮಾರು 20,000 ವಹಿವಾಟುಗಳನ್ನು ನಡೆಸಿದ್ದೇವೆ. ನಮ್ಮ ಆದಾಯ ಸಂಗ್ರಹವು ಇಲ್ಲಿಯವರೆಗೆ 61,36,986 ರೂ.ಆಗಿದೆ. ನಾವು ಎರಡನೇ ಸ್ಥಾನದಲ್ಲಿದ್ದೇವೆ. ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿನ ನಾಗರಿಕರಿಗೆ ಜಿ 2 ಸಿ ಮತ್ತು ಬಿ 2 ಸಿ ಸೇವೆಗಳನ್ನು ಒದಗಿಸುವ ಮೂಲಕ, ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ಡಿಜಿಟಲ್‌ನಲ್ಲಿ ಎಲ್ಲರನ್ನೂ ಒಳಗೊಂಡ ಸಮಾಜವನ್ನು ರಚಿಸಲಾಗುತ್ತಿದೆ’ ಎಂದು ಹೇಳಿದರು.

ಮಾರ್ಚ್ 2021 ರ ವೇಳೆಗೆ ರಾಜ್ಯದ ಉಳಿದ 850 ಅಂಚೆ ಕಚೇರಿಗಳು ಈ ಸೇವೆಗಳನ್ನು ನೀಡಲಿವೆ ಎಂದು ಬೆಂಗಳೂರಿನ ಅಂಚೆ ಸೇವೆಗಳ ನಿರ್ದೇಶಕ ಕೆ. ರವೀಂದ್ರನ್ ಹೇಳಿದ್ದಾರೆ.

ಈ ಬಾರಿ ಉತ್ತಮ ಬಜೆಟ್ ; ರಾಜ್ಯದ ಜನರು ಸಂಕಷ್ಟಗಳಿಂದ ದೂರವಾಗಿ ಉತ್ತಮ ಜೀವನ ನಡೆಸಬೇಕು ಎನ್ನುವುದು ನನ್ನ ಇಚ್ಛೆ : ಸಿಎಂ BSY -Vishwanews24

Vishwa News 24

Recent Posts

ವಿಟ್ಲ:  ಕಾರು ಮತ್ತು ದ್ವಿಚಕ್ರ ವಾಹನ ಭೀಕರ ಅಪಘಾತ; ಸವಾರ ಮೃತ್ಯು – vishwanews24

ವಿಟ್ಲ:  ಕಾರು ಮತ್ತು ದ್ವಿಚಕ್ರ ವಾಹನ ಭೀಕರ ಅಪಘಾತ; ಸವಾರ ಮೃತ್ಯು ವಿಟ್ಲ: ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಸಂಭವಿಸಿದ…

15 hours ago

ಉಡುಪಿ: ಸೆ. 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ; ಸೆ.5ರಂದು ವಿಟ್ಲಪಿಂಡಿ ಉತ್ಸವ – vishwanews24

ಉಡುಪಿ: ಸೆ. 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ; ಸೆ.5ರಂದು ವಿಟ್ಲಪಿಂಡಿ ಉತ್ಸವ ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಶಿರೂರು ಮಠದ…

15 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ : ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್ – vishwanews24

ರೇಣುಕಾಸ್ವಾಮಿ ಕೊಲೆ ಪ್ರಕರಣ : ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್ ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ…

15 hours ago

ಜವಾಬ್ದಾರಿಗಳನ್ನು ಹೊಸ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ : ನಿತಿನ್ ಗಡ್ಕರಿ – vishwanews24

ಜವಾಬ್ದಾರಿಗಳನ್ನು ಹೊಸ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ : ನಿತಿನ್ ಗಡ್ಕರಿ ಮುಂಬೈ: ಈ ಹಿಂದೆ ಮಾಡುತ್ತಿದ್ದಷ್ಟು ಕೆಲಸವನ್ನು ಇನ್ನು…

16 hours ago

ಹಬ್ಬಗಳ ಹಿನ್ನೆಲೆ : ದಕ್ಷಿಣ ಕನ್ನಡ ಪೊಲೀಸರ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ – vishwanews24

ಹಬ್ಬಗಳ ಹಿನ್ನೆಲೆ : ದಕ್ಷಿಣ ಕನ್ನಡ ಪೊಲೀಸರ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ರಾತ್ರಿ 11:30 ಗಂಟೆಯ ನಂತರ ಮೆರವಣಿಗೆ ,…

16 hours ago

ಸೆ. 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ – vishwanews24

ಸೆ. 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಗಳೂರು : ರಾಜ್ಯ ಸರ್ಕಾರದ…

16 hours ago