ಅತ್ತೂರು: ಇಲ್ಲಿನ ಪರ್ಪಲೆಗಿರಿಯಲ್ಲಿ ಆರಾಧಿಸಿಕೊಂಡು ಬಂದಿರುವ ಶ್ರೀ ಕಲ್ಕುಡ-ಕಲ್ಲುರ್ಟಿ- ತೂಕತ್ತರಿ ಸಪರಿವಾರ ದೈವಗಳ ಸನ್ನಿಧಾನದ ಜೀರ್ಣೋದ್ಧಾರದ ಅಂಗವಾಗಿ ಫೆಬ್ರವರಿ 14ರಂದು ಕಲ್ಕುಡ-ಕಲ್ಲುರ್ಟಿ- ತೂಕತ್ತರಿ ದೈವಗಳ ನೇಮೋತ್ಸವ, ಅಷ್ಟೋತ್ತರ ಶತನಾರಿಕೇಳ ಮಹಾಗಣಪತಿ ಯಾಗ, ಸಂಜೀವಿನಿ ಮಹಾಮೃತ್ಯುಂಜಯ ಯಾಗ ಹಾಗೂ ರುದ್ರ ಹೋಮ ನಡೆಯಲಿದೆ.
ಅಂದು ಬಿಳಿಗ್ಗೆ 8ರಿಂದ ಮಹಾಗಣಪತಿ ಯಾಗ, ಮಹಾಮೃತ್ಯುಂಜಯ ಯಾಗ ಹಾಗೂ ರುದ್ರ ಹೋಮ ನೆರವೇರಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ಗಂಟೆಗೆ ಕಲ್ಕುಡ-ಕಲ್ಲುರ್ಟಿ-ತೂಕತ್ತರಿ ದೈವಗಳ ನೇಮೋತ್ಸವ ಜರುಗಲಿದೆ ಎಂದು ಹಿಂದು ಜಾಗರಣ ವೇದಿಕೆ ಕಾರ್ಕಳ ತಾಲೂಕು ಹಾಗೂ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಪರ್ಪಲೆಗಿರಿ ಅತ್ತೂರು ಕಾರ್ಕಳ ಇಲ್ಲಿ ಫೆಬ್ರವರಿ 14 ರಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳ ಸಮಯ ಸೂಚಿ
ಪ್ರಾತಃಕಾಲ 7:30 : ಮಹಾ ಮೃತ್ಯುಂಜಯ ಹೋಮ ಶತ ನಾರಿಕೇಳ ಹೋಮ ಮತ್ತು ರುದ್ರ ಹೋಮಕ್ಕೆ ಸಂಕಲ್ಪ
8.00: ದೈವಗಳ ಪ್ರತಿಷ್ಠಾ ವಿಧಿ ಆರಂಭ
9.00 : ಪ್ರಧಾನ ಸಾನಿಧ್ಯ ಸಂಕಲ್ಪಿತ ಪ್ರಾಕೃತಿಕ ಜಲ ಶಿಲೆಗಳ ಮತ್ತು ಆಯುಧಗಳ ಭವ್ಯ ಶೋಭಾಯಾತ್ರೆ
10:30 ಶ್ರೀ ಕಲ್ಕುಡ ಕಲ್ಲುರ್ಟಿ ತೂಕತ್ತೇರಿ ದೈವಗಳ ಪ್ರತಿಷ್ಠೆ
11.30 ರುದ್ರಹೋಮ ಶತ ನಾರಿಕೇಳ ಹೋಮ ಮತ್ತು ಮಹಾ ಮೃತ್ಯುಂಜಯ ಯಾಗದ ಪೂರ್ಣಾಹುತಿ
12 30: ಪಲ್ಲಪೂಜೆ ಅನ್ನಸಂತರ್ಪಣೆ ಆರಂಭ
6.30 : ದೈವಗಳ ಭಂಡಾರ ಹಿಡಿಯುವುದು
7.30: ಮಹರ್ಷಿ ಆನಂದ ಗುರೂಜಿ ಅವರಿಂದ ಆಶೀರ್ವಚನ
9.00: ದೈವಗಳ ನೇಮೋತ್ಸವ ಆರಂಭ
ಕಾರ್ಕಳ : ಸೌಕೂರು ಮೇಳದ ಭಾಗವತ ಡಾ. ರವಿ ಸೂರಾಲು ಅವರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ -Vishwanews24
ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ…
ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ ಹಾಸನ: ಡೆತ್ ನೋಟ್ ಬರೆದಿಟ್ಟು 21 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೋರ್ವ…
ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘ ಸಭೆ ೨೦೨೩-೨೦೨೪ ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ…
ಆನ್ಲೈನ್ನಲ್ಲಿ ಮಾರಾಟ ಮಾಡೋ ತರಕಾರಿಗೆ ಕೆಮಿಕಲ್ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ.. ಪರಿಶೀಲನೆ ಮಾಡ್ತಿದ್ದೇವೆ, ಮುಂದಿನ ದಿನಗಳಲ್ಲಿ ಕ್ರಮ…
ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ ಕಾಸರಗೋಡು :…
ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ: ಡಿ.ಕೆ. ಶಿ ಸ್ಪಷ್ಟನೆ…