” ಅನಾರೋಗ್ಯ ಪೀಡಿತ , ಅಸಹಾಯಕ ಮಹಿಳೆಯ ರಕ್ಷಣೆ, ಜಿಲ್ಲಾಸ್ಪತ್ರೆಗೆ ದಾಖಲು “

Featured, ಉಡುಪಿ

ಉಡುಪಿ: – ಸುಮಾರು 45 ವರ್ಷದ ಮಹಿಳೆಯು ಕಳೆದ ಒಂದು ವಾರದಿಂದ ಸರಿಯಾದ ಆಹಾರವಿಲ್ಲದೆ , ಅನಾರೋಗ್ಯದಿಂದ ಅಸಹಾಯಕರಾಗಿ ಉಡುಪಿಯ ಬಸ್ ಸ್ಟಾಂಡ್ ನಲ್ಲಿ ಬಿದ್ದಿಕೊಂಡಿರುವುದು ಸಮಾಜ ಸೇವಕ ವಿಶು ಶೆಟ್ಟಿಯವರ ಗಮನಕ್ಕೆ ಬಂದಿರುತ್ತದೆ. ಸ್ಪಂದಿಸಿದ ವಿಶುಶೆಟ್ಟಿಯವರು ಆ ಕೂಡಲೆ ಮಹಿಳೆಯನ್ನು ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕೆ ಮಾಹಿತಿ ನೀಡಿರುತ್ತಾರೆ.

ಮಹಿಳೆಯ ಎರಡು ಕಾಲುಗಳು ಗಾಯಗೊಂಡಿದ್ದು, ನಡೆದಾಡಲು ಕಷ್ಟವಾಗಿದೆ. ಮಹಿಳೆಯು ತನ್ನ ಹೆಸರು ದೆವಮ್ಮ , ಗಂಡ – ಹಾಲಸ್ಸಿ , ಊರು – ಮುದೋಳಿ ಹಾರ್ದಳ್ಳಿ ಶಿವಮೊಗ್ಗ ಎಂದು ತಿಳಿಸಿರುತ್ತಾರೆ. ಆದ್ದರಿಂದ ಸಂಬಂಧಿಕರು ಅಥವಾ ವಾರಸುದಾರರು ಯಾರಾದರು ಇದ್ದಲ್ಲಿ ಉಡುಪಿಯ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಬೇಕೆಂದು ವಿಶುಶೆಟ್ಟಿಯವರು ವಿನಂತಿಸಿಕೊಂಡಿದ್ದಾರೆ…