ಅವಕಾಶ ಕೊಡಿ ಉಗ್ರರನ್ನು ಗುಂಡಿಟ್ಟು ಕೊಲ್ಲುವೆ ; ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದಿರಿ – Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ : ಪುಲ್ವಾಮಾದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿಯಲ್ಲಿ 42 ಯೋಧರು ಹುತಾತ್ಮರಾಗಿದ್ದು, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದಿರಿ ಪ್ರಧಾನಿ ಮೋದಿ ಬಳಿ ಮನವಿಯೋಂದನ್ನು ಮಾಡಿಕೊಂಡಿದ್ದಾರೆ.

ಟ್ವೀಟರ್ ನಲ್ಲಿ ಶಂಕರ್ ಬಿದಿರಿ, ನನಗೆ 64 ವರ್ಷ, ಉಗ್ರ ನಿಗ್ರಹಕ್ಕೆ ಸಿದ್ಧನಿದ್ದೇನೆ. ಕಾಶ್ಮೀರಕ್ಕೆ ತೆರಳಲು ಒಂದು ಅವಕಾಶ ಮಾಡಿಕೊಡಿ ಉಗ್ರರನ್ನು ಇಲ್ಲವಾಗಿಸುವೆ. ನೀವು ಅವಕಾಶ ನೀಡಿದರೆ ಈಗಲೇ ತೆರಳುತ್ತೇನೆ. ಅಲ್ಲಿಯೇ ಉಗ್ರರ ಉಪಟಳ ಅಂತ್ಯಗೊಳಿಸುತ್ತೇನೆ ಇಲ್ಲದೇ ಹೋದರೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಿನ್ನೆ ಮಧ್ಯಾಹ್ನ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭೀಕರ ಉಗ್ರರ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಈಗಾಗಲೇ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ.