ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ ತನ್ನ ವೇತನದ ಅರ್ಧ ಭಾಗವನ್ನು ನೀಡಿದ ಹಿಮಾದಾಸ್ -Vishwanews24
ದೆಹಲಿ: ಅಸ್ಸಾಂನಲ್ಲಿ ಪ್ರವಾಹದಿಂದ ಲಕ್ಷಾಂತರ ಜನರು ಸಂಕಷ್ಟದಲ್ಲಿದ್ದು, ಭಾರತದ ಓಟಗಾರ್ತಿ ಹಿಮಾದಾಸ್ ಅವರು ತಮ್ಮ ವೇತನದ ಅರ್ಧದಷ್ಟು ಭಾಗವನ್ನು ಪ್ರವಾಹಪೀಡಿತರಿಗೆ ನೆರವಿಗೆ ನೀಡಿದ್ದಾರೆ.
ಕಳೆದ ಹಲವು ದಿನಗಳಿಂದ ಅಸ್ಸಾಂನಲ್ಲಿ ಭಾರಿ ಮಳೆಯಾಗಿದೆ. ನದಿಗಳ ಪ್ರವಾಹದಿಂದ ಮನೆಗಳು, ದೇವಾಲಗಳು ಹಾಗೂ ಅನೇಕ ಪ್ರಾಣಿ, ಪಕ್ಷಿಗಳು ಬಲಿಯಾಗಿವೆ.
ನನ್ನ ರಾಜ್ಯದ 33 ಜಿಲ್ಲೆಗಳಲ್ಲಿ 30 ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. ಜನರ ಪರಿಸ್ಥಿತಿ ಹೇಳಲಾರದ ಸ್ಥಿತಿ ತಲುಪಿದೆ. ನಾನು ಕೈಲಾದಷ್ಟು ಸಹಾಯ ಮಾಡಿದ್ದೇನೆ. ದಯವಿಟ್ಟು ನೀವು ಸಹಾಯ ಮಾಡಿ ಸಂತ್ರಸ್ತರಿಗೆ ನೆರವಾಗಿ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Flood situation in our state Assam is very critical, 30 out of 33 districts are currently affected. So i would like to request big corporates and individuals to kindly come forward and help our state in this difficult situation. pic.twitter.com/cbVZv7b4IP
— Hima (mon jai) (@HimaDas8) July 16, 2019
ಸದ್ಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿಮಾ ದಾಸ್ ತಮ್ಮ ವೇತನದ ಅರ್ಧ ಭಾಗವನ್ನು ನೀಡುವ ಮೂಲಕ ದೇಶದ ನಾಗರೀಕರನ್ನು ನೆರೆ ಸಂತ್ರಸ್ತರಿಗೆ ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ.
ಪ್ರವಾಹದಿಂದ ಇಲ್ಲಿಯವರೆಗೂ 17ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 47 ಲಕ್ಕ್ಕೂ ಅಧಿಕ ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ. ಇನ್ನು 4175 ಹಳ್ಳಿಗಳು ಮತ್ತು 90,000 ಕೃಷಿ ಭೂಮಿ ನೀರಿನಲ್ಲಿ ಮುಳುಗಡೆಯಾಗಿದೆ. ಅಲ್ಲದೇ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಶೇಕಡ 90 ರಷ್ಟು ಮುಳುಗಡೆಯಾಗಿದ್ದು, 10 ಲಕ್ಷಕ್ಕೂ ಅಧಿಕ ಪ್ರಾಣಿ ಸಂಕುಲ ನಶಿಸಿದೆ.

