ಅ.11 ರಿಂದ ಕನ್ನಡದಲ್ಲಿ ಪ್ರಸರಾವಾಗಲಿದೆ ತಿರುಪತಿ ಚಾನೆಲ್ – Vishwanews24
ಅ.11 ರಿಂದ ಕನ್ನಡದಲ್ಲಿ ಬರಲಿದೆ ತಿರುಪತಿ ಚಾನೆಲ್ – Vishwanews24
ತಿರುಪತಿ: ಇಲ್ಲಿಯವರೆಗೆ ತೆಲುಗಿನನಲ್ಲಿ ಮಾತ್ರ ಪ್ರಸರಾವಾಗುತ್ತಿದ್ದ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಅ.11 ರಿಂದ ಕನ್ನಡ ಮತ್ತು ಹಿಂದಿಯಲ್ಲಿ ಪ್ರಸಾರವಾಗಲಿದೆ.
ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ನಿರ್ವಹಿಸುವ ಈ ಚಾನೆಲ್ ಬ್ರಹ್ಮೋತ್ಸವದ ಗರುಡಸೇವಾ ಆಚರಣೆಯ ವೇಳೆ ಈ ಚಾನೆಲಿಗೆ ಆಂಧ್ರ ಸಿಎಂ ಜಗನ್ ಚಾಲನೆ ನೀಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟಿಟಿಡಿ ಆಹ್ವಾನ ನೀಡಿದೆ.
2008ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೇಲ್ 24 ಗಂಟೆಯ ತೆಲುಗಿನ ವಾಹಿನಿಯನ್ನು ಉದ್ಘಾಟಿಸಿದ್ದರು. ದಶಕದ ಬಳಿಕ ತಮಿಳಿನಲ್ಲೂ ಪ್ರಸಾರ ಮಾಡಿತ್ತು.
ಅ.7 ರಂದು ಆರಂಭವಾಗಲಿರುವ ತಿರುಪತಿ ಬಾಲಾಜಿ ವಾರ್ಷಿಕ ನವರಾತ್ರಿ ಬ್ರಹ್ಮೋತ್ಸವ ಭಕ್ತರ ಪಾಲ್ಗೊಳ್ಳುವಿಕೆ ಇಲ್ಲದೇ ನಡೆಯಲಿದೆ. ಕಳೆದ ವರ್ಷವೂ ಈ ಧಾರ್ಮಿಕ ಕಾರ್ಯಕ್ರಮ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ ಇರಲಿಲ್ಲ. ಈ ವರ್ಷವೂ ಕೋವಿಡ್ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಮತಿ ನೀಡುವುದಿಲ್ಲ ಎಂದು ಟಿಟಿಡಿ ಹೇಳಿದೆ.
ಉತ್ತರ ಪ್ರದೇಶ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ರಾಯಭಾರಿಯಾಗಿ ಕಂಗನಾ ರಣಾವತ್ -Vishwanews24
