ಆದಷ್ಟು ಬೇಗ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು : ಮಮತಾ ಬ್ಯಾನರ್ಜಿ -Vishwanews24

Featured, ರಾಷ್ಟ್ರ ನ್ಯೂಸ್

ಕೋಲ್ಕತ್ತಾ: ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭೆ ಎಲೆಕ್ಷನ್​ಗೆ ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರ್ಜರಿ ಸಿದ್ಧತೆ ನಡೆಸಿದ್ದು, ರಾಜ್ಯಾದ್ಯಂತ ಸಾರ್ವಜನಿಕರನ್ನ ಸಂಪರ್ಕಿಸಲು  ಕಳೆದ ತಿಂಗಳು ಆಯೋಜಿಸಿದ್ದ ‘ದೀದಿ ಕೆ ಬೋಲೋ’ ಕಾರ್ಯಕ್ರಮಕ್ಕೆ ಬಂಗಾಳಿಯರಿಂದ ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ ಅಂತ ಮಮತಾ ಬ್ಯಾನರ್ಜಿ ತಮ್ಮ ಫೇಸ್​ಬುಕ್​ ಅಕೌಂಟ್​ನಲ್ಲಿ ಪೋಸ್ಟ್​ ಮಾಡಿ, ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಜನರು ದೀದಿ ಕೆ ಬೋಲೋ ಕಾರ್ಯಕ್ರಮಕ್ಕೆ ಉತ್ತಮವಾಗಿ ಸ್ಪಂದಿಸಿದ್ದಕ್ಕೆ ನಾನು ನಿಮ್ಮನ್ನು ಸಂಪರ್ಕಿಸಲು ಇನ್ನೂ ಉತ್ಸುಕಳಾಗಿದ್ದೇನೆ. ಕಳೆದ 30 ದಿನಗಳಲ್ಲಿ 10 ಲಕ್ಷ ಜನರನ್ನ ಸಂಪರ್ಕಿಸಲಾಗಿದ್ದು, ಈ ವೇಳೆ ಜನರು ತಮ್ಮ ಕುಂದುಕೊರತೆಗಳನ್ನ ಹೇಳಿಕೊಂಡಿದ್ದಾರೆ. ಆದಷ್ಟು ಬೇಗ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ನಿಮ್ಮ ಅಮೂಲ್ಯವಾದ ಸಲಹೆಗಳಿಂದ ಇನ್ನಷ್ಟು ಸದೃಢ ಸರ್ಕಾರ ನೀಡಲು ಬಯಸುತ್ತೇನೆ ಅಂತ ದೀದಿ ಫೇಸ್​ಬುಕ್​ ಅಕೌಂಟ್​ನಲ್ಲಿ ಬರೆದುಕೊಂಡಿದ್ದಾರೆ.