ಆರವತ್ತು ವರ್ಷಗಳಲ್ಲಿ ಬಗೆಹರಿಯದ ದೇಶದ ಸಮಸ್ಯೆಗಳು ಮೋದಿ ಆಡಳಿತದ ಆರು ವರ್ಷದಲ್ಲಿ ಬಗೆಹರಿದಿದೆ: ಲಾಲಾಜಿ ಮೆಂಡನ್|vishwanews24

Featured, ಉಡುಪಿ

 

ಆರವತ್ತು ವರ್ಷಗಳಲ್ಲಿ ಬಗೆಹರಿಯದ ದೇಶದ ಸಮಸ್ಯೆಗಳು ಮೋದಿ ಆಡಳಿತದ ಆರು ವರ್ಷದಲ್ಲಿ ಬಗೆಹರಿದಿದೆ: ಲಾಲಾಜಿ ಮೆಂಡನ್|vishwanews24

ಕಾಪು: ಮೋದಿ ಸರ್ಕಾರದ ಎಲ್ಲಾ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ಯಿಯವರೆಗೆ ತಲುಪಬೇಕೆಂಬ ಮತ್ತು ಎರಡು ಅವಧಿಯಲ್ಲಿ ಸಾಧಿಸಿದ ಮನೆಮನ ಮುಟ್ಟಬೇಕು,ಮೋದಿ ಅವಧಿಯಲ್ಲಿ ದೇಶದಲ್ಲಿ ಬಗೆಹರಿಯದ ಸಮಸ್ಯೆಗಳು ಈ ಎರಡು ಅವಧಿಯಲ್ಲಿ ಪೂರ್ಣವಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ತಿಳಿಸಿದರು.
ಅವರು ಕಾಪು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದರು.
ಮೋದಿಯ ಎರಡನೇ ಅವಧಿಯ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮದಲ್ಲಿ ಕಾರ್ಯಕ್ರಮ ಪ್ರಸಾರ ನಡೆಯಲಿದೆ ಎಂದರು.ಕೊರೋನಾ ರೋಗ ನಿಯಂತ್ರಣ ಮಾಡುವಲ್ಲಿ ಭಾರತ ಯಶಸ್ವಿಯಾಗುತ್ತಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಪು ಮಂಡಳ ಅಧ್ಯಕ್ಷ ಶ್ರೀಕಾಂತ್ ನಾಯಕ್,ಕಾರ್ಯದರ್ಶಿ ಗೋಪಾಲಕೃಷ್ಣ ರಾವ್,ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ,ಸದಸ್ಯೆ ಶಿಲ್ಪಾ ಜಿ ಸುವರ್ಣ, ಪಕ್ಷದ ವಕ್ತಾರ ಗುರುಪ್ರಸಾದ್ ಶೆಟ್ಟಿ ಬಾಳೆಬೈಲು ಉಪಸ್ಥಿತರಿದ್ದರು.