Featured

ಇಂಡಿಗೋ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಹೊಸ ‘ಲೈಟ್’ ದರದಲ್ಲಿ ಸಿಗಲಿದೆ  ಭರ್ಜರಿ ಲಾಭ -vishwanews24

ಇಂಡಿಗೋ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಹೊಸ ‘ಲೈಟ್’ ದರದಲ್ಲಿ ಸಿಗಲಿದೆ  ಭರ್ಜರಿ ಲಾಭ

ನವದೆಹಲಿ: ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ ವಿಮಾನದಲ್ಲಿ ಕಡಿಮೆ ಸಾಮಾನು ಹೊತ್ತು ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ‘ಇಂಡಿಗೋ ಲೈಟ್ (IndiGo Lite)’ ದರವನ್ನು ಪರಿಚಯಿಸಿದೆ. ಈ ಹೊಸ ದರ ವ್ಯವಸ್ಥೆ ಜುಲೈ 15, 2026ರಿಂದ ಪ್ರಯಾಣಿಸುವವರಿಗೆ ಅನ್ವಯವಾಗಲಿದ್ದು, ಬುಕ್ಕಿಂಗ್‌ ಅನ್ನು ಇಂದಿನಿಂದಲೇ ಆರಂಭಿಸಲಾಗಿದೆ.

ಪ್ರಸ್ತುತ ಭಾರತೀಯ ವಿಮಾನ ಪ್ರಯಾಣಿಕರಲ್ಲಿ ಹಲವರು ಯಾವುದೇ ಹೆಚ್ಚಿನ ವ್ಯವಸ್ಥಿತ ಲಗೇಜ್ ಇಲ್ಲದೆ, ಕೇವಲ 7 ಕೆಜಿ ಒಳಗಿನ ಸಣ್ಣ ಹ್ಯಾಂಡ್ ಬ್ಯಾಗ್ ಹಿಡಿದು ಕಚೇರಿ ಕೆಲಸಗಳಿಗಾಗಿ ಅಥವಾ ಅಲ್ಪಾವಧಿಯ ಪ್ರವಾಸಗಳಿಗಾಗಿಯೇ ಹೆಚ್ಚಾಗಿ ಪ್ರಯಾಣಿಸುತ್ತಾರೆ. ಇಂತಹ ನಿತ್ಯ ಪ್ರಯಾಣಿಕರಿಗೆ ಆರ್ಥಿಕ ಹೊರೆಯಾಗದಂತೆ ಸುಲಭ ಪ್ರವೇಶ ದರವನ್ನು ಒದಗಿಸುವುದು ಇಂಡಿಗೋದ ಈ ಹೊಸ ‘ಲೈಟ್’ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದರ ಅಡಿಯಲ್ಲಿ ಪ್ರಯಾಣಿಸುವ ಗ್ರಾಹಕರು ಸಾಮಾನ್ಯ ದರಕ್ಕಿಂತ ಗಮನಾರ್ಹ ರಿಯಾಯಿತಿ ಪಡೆಯಲಿದ್ದಾರೆ.

ಎಲ್ಲಿ ಬುಕ್ ಮಾಡಬಹುದು?

‘ಇಂಡಿಗೋ ಲೈಟ್’ ದರದಲ್ಲಿ ಟಿಕೆಟ್ ಬುಕ್ ಮಾಡಲು ಇಂಡಿಗೋದ ಅಧಿಕೃತ ವೆಬ್‌ಸೈಟ್‌, ಮೊಬೈಲ್ ಆ್ಯಪ್ ಮತ್ತು ಕಸ್ಟಮರ್ ಕೇರ್ ಮೂಲಕ ಮಾತ್ರ ಅವಕಾಶವಿದೆ. ಇದು ದೇಶೀಯ ಹಾಗೂ ಅಂತಾರಾಷ್ಟ್ರೀಯ ನಾನ್-ಸ್ಟಾಪ್ ವಿಮಾನಗಳ ಏಕಮುಖ, ರೌಂಡ್ ಟ್ರಿಪ್ ಮತ್ತು ಮಲ್ಟಿ-ಸಿಟಿ ಪ್ರಯಾಣಗಳಿಗೆ ಅನ್ವಯಿಸುತ್ತದೆ.

ಏನೆಲ್ಲ ಸೌಲಭ್ಯ ಸಿಗಲಿದೆ?
ಈ ಹೊಸ ದರದಲ್ಲಿ ಪ್ರಯಾಣಿಕರಿಗೆ ಕೆಳಗಿನ ಸೌಲಭ್ಯಗಳು ದೊರೆಯಲಿವೆ:

7 ಕೆಜಿ ತನಕ ಉಚಿತ ಕ್ಯಾಬಿನ್ ಬ್ಯಾಗ್
ಹೆಚ್ಚುವರಿ ಶುಲ್ಕವಿಲ್ಲದೆ ಸ್ವಯಂಚಾಲಿತವಾಗಿ ಸೀಟ್ ಹಂಚಿಕೆ
ಕಡಿಮೆ ಮೂಲ ಟಿಕೆಟ್ ದರ
ಅಗತ್ಯವಿದ್ದರೆ ಹೆಚ್ಚುವರಿ ಸೇವೆಗಳನ್ನು ಪ್ರತ್ಯೇಕವಾಗಿ ಖರೀದಿಸುವ ಅವಕಾಶ
ಹೆಚ್ಚುವರಿ ಸೇವೆಗಳಿಗೆ ಪ್ರತ್ಯೇಕ ಶುಲ್ಕ

ಪ್ರಯಾಣಿಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಕೆಳಗಿನ ಸೇವೆಗಳನ್ನು ಹೆಚ್ಚುವರಿ ಶುಲ್ಕ ನೀಡಿ ಸೇರಿಸಿಕೊಳ್ಳಬಹುದು.

ಚೆಕ್-ಇನ್ ಬ್ಯಾಗೇಜ್
ಇಷ್ಟದ ಸೀಟ್ ಆಯ್ಕೆ
ವಿಮಾನದಲ್ಲಿನ ಆಹಾರ
ಫಾಸ್ಟ್ ಫಾರ್ವರ್ಡ್

ಈ ಸೇವೆಗಳನ್ನು ವಿಮಾನ ಹೊರಡುವ ಒಂದು ಗಂಟೆ ಮೊದಲುವರೆಗೆ ವೆಬ್‌ಸೈಟ್ ಅಥವಾ ವಿಮಾನ ನಿಲ್ದಾಣದಲ್ಲಿಯೂ ಸೇರಿಸಬಹುದು ಎಂದು ಇಂಡಿಗೋ ತಿಳಿಸಿದೆ

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

13 minutes ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

1 hour ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

2 hours ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

2 hours ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

2 hours ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

3 hours ago