ಇಂದಿನ ದಿನ ಭವಿಷ್ಯ -06-08-2020 -Vishwanews24
ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9482206681
ಮೇಷ ರಾಶಿ
ಹುಟ್ಟು ಗುಣ ಸುಟ್ಟರೂ ಹೋಗದು ಎಂಬ ಮಾತಿದೆ. ಬದಲಾವಣೆಗೆ ದಾರಿ ಮಾಡಿಕೊಂಡರೆ ಕ್ಷೇಮ. ಅನಿರೀಕ್ಷಿತ ಧನಲಾಭವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಉನ್ನತ ಹುದ್ದೆ ಪಡೆಯುವಿರಿ ಮತ್ತು ಅಧಿಕಾರಿಗಳಿಂದ ಪ್ರಶಂಸೆ ಗಳಿಸುವಿರಿ. ಕೆಲವು ಕಾರಣಗಳಿಂದ ಮನಸ್ಸಿಗೆ ಕಿರಿಕಿರಿ ಹೆಚ್ಚಾಗಬಹುದು. ಆದಾಯವು ತೃಪ್ತಿಕರವಾಗಿರುತ್ತದೆ.
ಅದೃಷ್ಟ ಸಂಖ್ಯೆ 9
ವೃಷಭ ರಾಶಿ
ಕಚೇರಿಯಲ್ಲಿ ಮೇಲಧಿಕಾರಿಗಳು ನಿಮಗೆ ಅನವಶ್ಯಕವಾಗಿ ಕಿರಿಕಿರಿ ನೀಡಿದರೂ ದಿನದ ಕೊನೆಗೆ ಮೆಚ್ಚುಗೆ ಗಳಿಸುವಿರಿ. ಆರೋಗ್ಯದ ವಿಚಾರದಲ್ಲಿ ಬೇಗನೆ ಚೇತರಿಕೆಯನ್ನು ಕಾಣಲಿದ್ದೀರಿ. ಉದ್ಯೋಗದಲ್ಲಿ ಸ್ಥಳಾಂತರವು ಪ್ರಗತಿಯೊಂದಿಗೆ ಇರುತ್ತದೆ. ಕುಟುಂಬ ಜೀವನದಲ್ಲಿ ಸರಳತೆ ಇರುತ್ತದೆ. ಈ ಸಮಯದಲ್ಲಿ ನೀವು ಖರ್ಚಿನ ಮೇಲೆ ಸ್ವಲ್ಪ ನಿಯಂತ್ರಣವನ್ನು ಇಟ್ಟುಕೊಳ್ಳಬೇಕು.ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಶ್ರದ್ಧೆಯಿಂದ ಆರಾಧಿಸಿ.
ಅದೃಷ್ಟ ಸಂಖ್ಯೆ 7
ಮಿಥುನ ರಾಶಿ
ಸಿಹಿ ಕಹಿ ಬಗೆಯ ಸಮಾಚಾರಗಳು ಲಭ್ಯವಾಗಲಿವೆ. ನಿರಾಶೆ ಹೊಂದಬೇಡಿ. ಮುಂದೆ ಶುಭವಾಗಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಕಾಟ ಹೆಚ್ಚಾಗಬಹುದು. ರೇಗಾಡದೆ ನಗುನಗುತ್ತಲೇ ಅವರನ್ನು ನಿರ್ಲಕ್ಷಿಸಿಬಿಡಿ. ವ್ಯವಹಾರದಲ್ಲಿ ಪಾಲುದಾರರ ಸಹಕಾರವು ಸಾಕಾಗುತ್ತದೆ.
ಅದೃಷ್ಟ ಸಂಖ್ಯೆ 5
ಕಟಕ ರಾಶಿ
ಹೊಸ ಮನೆಯನ್ನು ನಿರ್ಮಿಸುವ ವಿಚಾರದಲ್ಲಿ ಬಹಳ ಪ್ರಮುಖವಾದ ಬೆಳವಣಿಗೆಯೊಂದು ಶೀಘ್ರದಲ್ಲೇ ಸಂಭವಿಸಲಿದೆ. ಅಕ್ಕಪಕ್ಕದವರ ಜತೆಗೆ ಮಾತುಕತೆ ಇದ್ದೇ ಇರಲಿ ಆದರೆ ಯಾರನ್ನೂ ಸಂಪೂರ್ಣವಾಗಿ ನಂಬಿ ಮೂರ್ಖರಾಗದಿರಿ. ಇಂದು ನಿಮಗೆ ಶುಭ ದಿನವಾಗಿರುತ್ತದೆ,
ಅದೃಷ್ಟ ಸಂಖ್ಯೆ 1
ಸಿಂಹ ರಾಶಿ
ಪಶುಸಂಗೋಪನೆ ಮಾಡುವವರು, ರೈತವರ್ಗದವರು ಹೆಚ್ಚಿನ ಲಾಭವನ್ನು ಕಾಣುವಂತಹ ಉತ್ತಮ ಯೋಗಬಲವಿದೆ. ಆರ್ಥಿಕ ವಿಷಯಕ್ಕೆ ಸಂಬಂಧಪಟ್ಟಂತೆ ಎಚ್ಚರ ಅಗತ್ಯವಿದೆ. ಹಣವೇ ಮಾಯವಾಗಬಹುದು. ಜಾಗ್ರತೆ ಇರಲಿ. ಸ್ನೇಹಿತರ ಸಹಾಯದಿಂದ ವ್ಯವಹಾರದ ಹೊಸ ಮೂಲಗಳನ್ನು ಕಂಡುಕೊಳ್ಳುವಿರಿ.
ಅದೃಷ್ಟ ಸಂಖ್ಯೆ 4
ಕನ್ಯಾ ರಾಶಿ
ಮುಂದೆ ಕೈಗೊಳ್ಳಲಿರುವ ಕಾರ್ಯಯೋಜನೆಗಳ ಬಗೆಗೆ ಪ್ರಾರಂಭವಾದ ಮಾತುಕತೆಗಳಿಗೆ ಪ್ರೇರಣೆ ದೊರೆಯಲಿದೆ. ವ್ಯವಹಾರದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆ ಸಂಭವಿಸಬಹುದು. ಪುನಃ ಹೀಗಾಗದಂತೆ ಎಚ್ಚರ ವಹಿಸಿ. ಮುನ್ನಡೆಯಿರಿ.
ಅದೃಷ್ಟ ಸಂಖ್ಯೆ 2
ತುಲಾ ರಾಶಿ
ಮಕ್ಕಳಿಂದ ಕಷ್ಟಗಳು ಎದುರಾಗಬಹುದು. ಅವರ ಮೇಲೆ ಕೋಪಿಸಿಕೊಳ್ಳುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಕಾರ್ಯಗಳಲ್ಲಿ ವಿಜಯ. ಬಂಧುಗಳಿಂದಲೂ ಹೆಚ್ಚಿನ ಸಹಾಯ ಲಭ್ಯವಾಗಲಿದೆ. ಮಹಾಗಣಪತಿಯ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಇಚ್ಛೆಗೆ ವಿರುದ್ಧವಾಗಿ ಏನಾದರೂ ಮಾಡುವುದರಿಂದ ನಿಮ್ಮ ಮನಸ್ಸು ತೊಂದರೆಗೊಳಗಾಗಬಹುದು.
ಅದೃಷ್ಟ ಸಂಖ್ಯೆ 6
ವೃಶ್ಚಿಕ ರಾಶಿ
ಮನಸ್ಸನ್ನು ಗೊಂದಲದ ಗೂಡನ್ನಾಗಿ ಮಾಡಿಕೊಳ್ಳದೆ ಜೇನುಗೂಡಾಗಿ ಪರಿವರ್ತಿಸಿ. ಶಾಂತಿ ಸಮಾಧಾನ ಇರಲಿದೆ. ಮಾಡುತ್ತಿರುವ ಕೆಲಸಗಳು ಯಶಸ್ಸಿನತ್ತ ತಿರುಗಲು ಸಾಧ್ಯವಾಗಲಿದೆ. ಯಾವುದೇ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಮನಸ್ಸಿನಲ್ಲಿ ಸಂತೋಷದ ಭಾವನೆ ಇರುತ್ತದೆ. ನೀವು ಸ್ನೇಹಿತರು ಮತ್ತು ಕುಟುಂಬದಿಂದ ಲಾಭ ಪಡೆಯುತ್ತೀರಿ.
ಅದೃಷ್ಟ ಸಂಖ್ಯೆ 8
ಧನುಸ್ಸು ರಾಶಿ
ಹಿತಶತ್ರುಗಳು ನಿಮಗೆ ಕಿರಿಕಿರಿ ಉಂಟುಮಾಡಲು ಸಿದ್ಧರಾಗಿದ್ದಾರೆ. ಬಾಳ ಸಂಗಾತಿ ನೀಡುವ ಸಲಹೆಯಿಂದ ಎಲ್ಲ ಕ್ಷೇಮ. ವೃತ್ತಿ ಎಂದ ಮೇಲೆ ಕಷ್ಟನಷ್ಟಗಳು ಇದ್ದೇ ಇರುತ್ತವೆ. ಅವುಗಳಿಗೆ ಅಧೀರರಾಗದೆ ಹಿಂಜರಿಯದೆ ಮುಂದಕ್ಕೆ ಸಾಗಿ. ಕುಟುಂಬದಲ್ಲಿ ವಿವಾದಗಳು ಹೆಚ್ಚಾಗಬಹುದು.
ಅದೃಷ್ಟ ಸಂಖ್ಯೆ 3
ಮಕರ ರಾಶಿ
ವಿರೋಧಿಗಳ ಜತೆಗೆ ಮಾತುಕತೆಗಳು ಬೇಡ. ಅವಿವೇಕಿಗಳಿಗೆ ಮಾತು ಅರ್ಥವಾಗದು. ನಿಮಗೇ ಜಯವಾಗಲಿದೆ. ಜೀವನದ ಎಲ್ಲ ಏರಿಳಿತಗಳೂ ವಿಧಿಯ ಸಂಕಲ್ಪದಂತೆ ಆಗುತ್ತಿರುತ್ತದೆ. ಭಕ್ತಿಯಿಂದ ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸಿ. ನೀವು ಅನುಕೂಲಕರ ಗ್ರಹಗಳ ಸ್ಥಾನಗಳ ಲಾಭವನ್ನು ಪಡೆಯಲಿದ್ದೀರಿ.
ಅದೃಷ್ಟ ಸಂಖ್ಯೆ 5
ಕುಂಭ ರಾಶಿ
ಅನೇಕ ಸ್ನೇಹಿತರು ನಿಮ್ಮ ಏಳಿಗೆಗಾಗಿ ನೆರವನ್ನು ನೀಡಲಿದ್ದಾರೆ. ಅವರನ್ನು ಪ್ರೀತಿ ಗೌರವಗಳಿಂದ ಉಪಚರಿಸಿ. ಇಷ್ಟಕ್ಕೆ ವಿರುದ್ಧದ ಕೆಲಸಗಳನ್ನೇ ಮಾಡಬೇಕಾಗಿ ಬರಬಹುದು. ಜಾಣತನದಿಂದ ಅದನ್ನು ನಿಭಾಯಿಸುವುದು ಉತ್ತಮ. ವೃತ್ತಿಯಲ್ಲಿ ಹೆಚ್ಚುವರಿ ಜವಾಬ್ದಾರಿಯಿಂದಾಗಿ ಕಾರ್ಯನಿರತತೆ ಹೆಚ್ಚಾಗುತ್ತದೆ.
ಅದೃಷ್ಟ ಸಂಖ್ಯೆ 4
ಮೀನ ರಾಶಿ
ಅಕ್ಕಪಕ್ಕದವರು ನಿಮ್ಮನ್ನು ಆತ್ಮೀಯತೆಯಿಂದ ಕಾಣುತ್ತಾರೆ. ನಿಮ್ಮ ನಾಯಕತ್ವದ ಗುಣಗಳಿಂದ ಪ್ರಶಂಸೆಯನ್ನು ಪಡೆಯಲಿದ್ದೀರಿ. ಅನ್ಯ ವ್ಯಕ್ತಿಗಳ ಜತೆ ವ್ಯವಹರಿಸುವಾಗ ಜಾಗ್ರತೆ ಇಲ್ಲದಿದ್ದರೆ ನಾನಾ ರೀತಿಯ ತೊಂದರೆಗಳು ಬರಬಹುದು.
ಅದೃಷ್ಟ ಸಂಖ್ಯೆ 9
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9482206681

