Featured

ಇನ್ನು ಮುಂದೆ ಈ ಫೋನ್ ಗಳಲ್ಲಿ ವಾಟ್ಸ್ಯಾಪ್ ಬಳಕೆ ಸಾಧ್ಯವಿಲ್ಲ !! ಆ ಫೋನುಗಳು ಯಾವುದು ? ಹಾಗಾದರೆ ಭಾರತದಲ್ಲಿ ವಾಟ್ಸ್ಆಪ್ ಬ್ಯಾನ್ ಆಗುವುದು ನಿಜನಾ..?? ಓದಿ ಈ ವರದಿ..

ಹೊಸದಿಲ್ಲಿ, : ಐಒಎಸ್-6 ಸಪೋರ್ಟ್ ಹೊಂದಿದ ಐಫೋನ್ ಗಳಿಗೆ ವಾಟ್ಸ್ಯಾಪ್ ಸೇವೆಗಳು ಇತ್ತೀಚೆಗೆ ಅಂತ್ಯಗೊಳಿಸಲಾಗಿದ್ದರೆ, ಸೆಪ್ಟೆಂಬರ್ 20ರಿಂದ ಐಒಎಸ್7 ಸಪೋರ್ಟ್ ಹೊಂದಿದ ಐಫೋನ್ ಗಳಿಗೂ ವಾಟ್ಸ್ಯಾಪ್ ಸೌಲಭ್ಯ ದೊರೆಯುವುದಿಲ್ಲ.

ಐಒಎಸ್ 7 ಸಪೋರ್ಟ್ ಹೊಂದಿದ ಐಫೋನ್ ಹೊಂದಿರುವವರು ಇನ್ನು ಮುಂದೆ ವಾಟ್ಸ್ಯಾಪ್ ಅನ್ನು ಡೌನ್‍ಲೋಡ್ ಮಾಡಲು ಸಾಧ್ಯವಿಲ್ಲ. ಆದರೆ ಈಗಾಗಲೇ ತಮ್ಮ ಐಫೋನ್ 4ಗಳಲ್ಲಿ ವಾಟ್ಸ್ಯಾಪ್ ಅಳವಡಿಸಿರುವವರಿಗೆ ಈ ಹೊಸ ನಿಯಮ ಅನ್ವಯವಾಗದು. ಹೊಸದಾಗಿ ಡೌನ್‍ಲೋಡ್ ಮಾಡುವುದು ಮಾತ್ರ ಇಂತಹ ಸಾಧನಗಳನ್ನು ಹೊಂದಿದವರಿಗೆ ಸಾಧ್ಯವಿಲ್ಲ.

ಐಫೋನ್ 4 ಈಗಲೂ ಐಒಎಸ್8 ಸಪೋರ್ಟ್ ಹೊಂದಿದ ಕಂಪೆನಿಯ ಕೊನೆಯ ಫೋನ್ ಆಗಿದೆ. ಆದರೆ ಎಲ್ಲಾ ಐಫೋನ್4 ಬಳಕೆದಾರರು ವಾಟ್ಸ್ಯಾಪ್ ಅನ್ನು 2020ರ ತನಕ ಉಪಯೋಗಿಸಬಹುದಾದರೂ ಅವರಿಗೆ ಈ ಆಯಪ್ ಅನ್ನು ಮರು ಇನ್‍ಸ್ಟಾಲ್ ಮಾಡುವುದು ಅಥವಾ ಅಪ್‍ಡೇಟ್ ಮಾಡುವುದು ಅಸಾಧ್ಯ.

ಫೆಬ್ರವರಿ 1, 2020ರ ನಂತರ ವಾಟ್ಸ್ಯಾಪ್ ಐಒಎಸ್ 7 ಮತ್ತು ಹಳೆಯ ಅವತರಣಿಕೆಗಳಲ್ಲಿ ಕಾರ್ಯನಿರ್ವಹಿಸುವುದು ನಿಲ್ಲಿಸಲಿದೆ.

ನೋಕಿಯಾ ಸಿಂಬಿಯನ್ ಎಸ್ 60, ವಿಂಡೋಸ್ ಫೋನ್ 8.0, ಬ್ಲ್ಯಾಕ್‍ಬೆರ್ರಿ ಒಎಸ್ ಮತ್ತು ಹಳೆಯ ತಂತ್ರಜ್ಞಾನಗಳ ಆಧರಿತ ಸಾಧನಗಳಲ್ಲಿ ವಾಟ್ಸ್ಯಾಪ್ ಕಾರ್ಯನಿರ್ವಹಿಸುವುದು ಈಗಾಗಲೇ ನಿಂತಿದೆ. ಅಂತೆಯೇ ಆಂಡ್ರಾಯ್ಡ್ 2.3.7 ಮತ್ತು ಹಳೆಯ ಅವತರಣಿಕೆಗಳಿಗೂ ಫೆಬ್ರವರಿ 1, 2020ರ ನಂತರ ವಾಟ್ಸ್ಯಾಪ್ ಸಪೋರ್ಟ್ ಅಂತ್ಯಗೊಳ್ಳಲಿದೆ.

Vishwa News 24

Recent Posts

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ – vishwanews24

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ…

22 minutes ago

ಉಡುಪಿ : ಜೂ.12 ರಂದು ನೇರ ಸಂದರ್ಶನ – vishwanews24

ಉಡುಪಿ : ಜೂ.12 ರಂದು ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್…

29 minutes ago

ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ತಮಿಳುನಾಡು ಸಿಎಂ ಭೇಟಿ – vishwanews24

ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ತಮಿಳುನಾಡು ಸಿಎಂ ವಿಜಯ್ ಭೇಟಿ ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜೂನ್…

35 minutes ago

ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ – vishwanews24

ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ ಉಡುಪಿ : ರಾಜ್ಯದ ಖಾಸಗಿ ಬಸ್…

57 minutes ago

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ – vishwanews24

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ ಮಳೆಗಾಲದ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ…

2 hours ago

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ – vishwanews24

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು : ಅಪ್ರಾಪ್ತ…

2 hours ago