Featured

ಇನ್ನು ಮುಂದೆ ಈ ಫೋನ್ ಗಳಲ್ಲಿ ವಾಟ್ಸ್ಯಾಪ್ ಬಳಕೆ ಸಾಧ್ಯವಿಲ್ಲ !! ಆ ಫೋನುಗಳು ಯಾವುದು ? ಹಾಗಾದರೆ ಭಾರತದಲ್ಲಿ ವಾಟ್ಸ್ಆಪ್ ಬ್ಯಾನ್ ಆಗುವುದು ನಿಜನಾ..?? ಓದಿ ಈ ವರದಿ..

ಹೊಸದಿಲ್ಲಿ, : ಐಒಎಸ್-6 ಸಪೋರ್ಟ್ ಹೊಂದಿದ ಐಫೋನ್ ಗಳಿಗೆ ವಾಟ್ಸ್ಯಾಪ್ ಸೇವೆಗಳು ಇತ್ತೀಚೆಗೆ ಅಂತ್ಯಗೊಳಿಸಲಾಗಿದ್ದರೆ, ಸೆಪ್ಟೆಂಬರ್ 20ರಿಂದ ಐಒಎಸ್7 ಸಪೋರ್ಟ್ ಹೊಂದಿದ ಐಫೋನ್ ಗಳಿಗೂ ವಾಟ್ಸ್ಯಾಪ್ ಸೌಲಭ್ಯ ದೊರೆಯುವುದಿಲ್ಲ.

ಐಒಎಸ್ 7 ಸಪೋರ್ಟ್ ಹೊಂದಿದ ಐಫೋನ್ ಹೊಂದಿರುವವರು ಇನ್ನು ಮುಂದೆ ವಾಟ್ಸ್ಯಾಪ್ ಅನ್ನು ಡೌನ್‍ಲೋಡ್ ಮಾಡಲು ಸಾಧ್ಯವಿಲ್ಲ. ಆದರೆ ಈಗಾಗಲೇ ತಮ್ಮ ಐಫೋನ್ 4ಗಳಲ್ಲಿ ವಾಟ್ಸ್ಯಾಪ್ ಅಳವಡಿಸಿರುವವರಿಗೆ ಈ ಹೊಸ ನಿಯಮ ಅನ್ವಯವಾಗದು. ಹೊಸದಾಗಿ ಡೌನ್‍ಲೋಡ್ ಮಾಡುವುದು ಮಾತ್ರ ಇಂತಹ ಸಾಧನಗಳನ್ನು ಹೊಂದಿದವರಿಗೆ ಸಾಧ್ಯವಿಲ್ಲ.

ಐಫೋನ್ 4 ಈಗಲೂ ಐಒಎಸ್8 ಸಪೋರ್ಟ್ ಹೊಂದಿದ ಕಂಪೆನಿಯ ಕೊನೆಯ ಫೋನ್ ಆಗಿದೆ. ಆದರೆ ಎಲ್ಲಾ ಐಫೋನ್4 ಬಳಕೆದಾರರು ವಾಟ್ಸ್ಯಾಪ್ ಅನ್ನು 2020ರ ತನಕ ಉಪಯೋಗಿಸಬಹುದಾದರೂ ಅವರಿಗೆ ಈ ಆಯಪ್ ಅನ್ನು ಮರು ಇನ್‍ಸ್ಟಾಲ್ ಮಾಡುವುದು ಅಥವಾ ಅಪ್‍ಡೇಟ್ ಮಾಡುವುದು ಅಸಾಧ್ಯ.

ಫೆಬ್ರವರಿ 1, 2020ರ ನಂತರ ವಾಟ್ಸ್ಯಾಪ್ ಐಒಎಸ್ 7 ಮತ್ತು ಹಳೆಯ ಅವತರಣಿಕೆಗಳಲ್ಲಿ ಕಾರ್ಯನಿರ್ವಹಿಸುವುದು ನಿಲ್ಲಿಸಲಿದೆ.

ನೋಕಿಯಾ ಸಿಂಬಿಯನ್ ಎಸ್ 60, ವಿಂಡೋಸ್ ಫೋನ್ 8.0, ಬ್ಲ್ಯಾಕ್‍ಬೆರ್ರಿ ಒಎಸ್ ಮತ್ತು ಹಳೆಯ ತಂತ್ರಜ್ಞಾನಗಳ ಆಧರಿತ ಸಾಧನಗಳಲ್ಲಿ ವಾಟ್ಸ್ಯಾಪ್ ಕಾರ್ಯನಿರ್ವಹಿಸುವುದು ಈಗಾಗಲೇ ನಿಂತಿದೆ. ಅಂತೆಯೇ ಆಂಡ್ರಾಯ್ಡ್ 2.3.7 ಮತ್ತು ಹಳೆಯ ಅವತರಣಿಕೆಗಳಿಗೂ ಫೆಬ್ರವರಿ 1, 2020ರ ನಂತರ ವಾಟ್ಸ್ಯಾಪ್ ಸಪೋರ್ಟ್ ಅಂತ್ಯಗೊಳ್ಳಲಿದೆ.

Vishwa News 24

Recent Posts

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

15 hours ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

16 hours ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

16 hours ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

17 hours ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

18 hours ago

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ – vishwanews24

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…

18 hours ago