ಇನ್ಮುಂದೆ ಬಾರ್ ಗಳಿಗೆ ದೇವರ ಹೆಸರು ಇಡುವಂತಿಲ್ಲ : ಶೀಘ್ರವೇ ಸರ್ಕಾರದಿಂದ ಆದೇಶ ಜಾರಿ -Vishwanews24
ಬೆಂಗಳೂರು : ಇನ್ಮುಂದೆ ಬಾರ್ ಗಳಿಗೆ ದೇವರ ಹೆಸರು ಇಡುವಂತಿಲ್ಲ ಎಂಬ ಆದೇಶ ರಾಜ್ಯ ಸರ್ಕಾರದಿಂದ ಸಧ್ಯದಲ್ಲೇ ಹೊರಬೀಳಲಿದೆ. ಈ ಕುರಿತು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಾರ್ ಗಳಿಗೆ ದೇವರ ಹೆಸರು ನಿಷೇಧಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ. ಈ ಕುರಿತು ಮುಜರಾಯಿ ಇಲಾಖೆಯ ಸಲಹೆಯನ್ನು ಕೇಳಲಾಗಿದೆ. ಸಭೆಯಲ್ಲಿ ಈ ಕುರಿತಾಗಿ ಚರ್ಚಿಸಿ ಶೀಘ್ರದಲ್ಲೇ ಬಾರ್ ಗಳಿಗೆ ದೇವರ ಹೆಸರು ನಿಷೇಧಿಸಿ ಆದೇಶ ಹೊರಬೀಳುವ ಸಾಧ್ಯತೆ ಇದೆ….
ಬಾರ್ ಹಾಗೂ ರೆಸ್ಟೋರೆಂಡ್ ನಡೆಸುವ ಮಾಲೀಕರು ತಮ್ಮ ಮನೆ ದೇವರ ಹೆಸರನ್ನಿಡುತ್ತಿದ್ದರು. ಉದಾಹರಣೆಗೆ ಮಂಜುನಾಥ್ ಬಾರ್ ಅಂಡ್ ರೆಸ್ಟೋರೆಂಟ್, ವೆಂಕಟೇಶ್ವರ ವೈನ್ಸ್ ಹೀಗೆ ದೇವರ ಹೆಸರನ್ನಿಟ್ಟು ವ್ಯವಹಾರ ಮಾಡುತ್ತಿದ್ದರು. ಆದರೆ ರಾಜ್ಯ ಸರ್ಕಾರ ಇದಕ್ಕೆ ಬ್ರೇಕ್ ಹಾಕಲಿದ್ದು, ಹೊಸ ಆದೇಶ ಹೊರಡಿಸಲಿದೆ. ಹೀಗಾಗಿ ಇನ್ಮುಂದೆ ಬಾರ್ ಹಾಗೂ ರೆಸ್ಟೋರೆಂಟ್ಗಳಿಗೆ ದೇವರ ಹೆಸರನ್ನು ಬಿಟ್ಟು ಬೇರೆ ಹೆಸರು ಇಡುವುದು ಒಳಿತು ಎನ್ನಲಾಗುತ್ತಿದೆ.
