ಇನ್ಮುಂದೆ ಬಾರ್ ಗಳಿಗೆ ದೇವರ ಹೆಸರು ಇಡುವಂತಿಲ್ಲ : ಶೀಘ್ರವೇ ಸರ್ಕಾರದಿಂದ ಆದೇಶ ಜಾರಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು :   ಇನ್ಮುಂದೆ ಬಾರ್ ಗಳಿಗೆ ದೇವರ ಹೆಸರು ಇಡುವಂತಿಲ್ಲ ಎಂಬ ಆದೇಶ ರಾಜ್ಯ ಸರ್ಕಾರದಿಂದ ಸಧ್ಯದಲ್ಲೇ ಹೊರಬೀಳಲಿದೆ. ಈ ಕುರಿತು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಾರ್ ಗಳಿಗೆ ದೇವರ ಹೆಸರು ನಿಷೇಧಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ. ಈ ಕುರಿತು ಮುಜರಾಯಿ ಇಲಾಖೆಯ ಸಲಹೆಯನ್ನು ಕೇಳಲಾಗಿದೆ. ಸಭೆಯಲ್ಲಿ ಈ ಕುರಿತಾಗಿ ಚರ್ಚಿಸಿ ಶೀಘ್ರದಲ್ಲೇ ಬಾರ್ ಗಳಿಗೆ ದೇವರ ಹೆಸರು ನಿಷೇಧಿಸಿ ಆದೇಶ ಹೊರಬೀಳುವ ಸಾಧ್ಯತೆ ಇದೆ….

ಬಾರ್​ ಹಾಗೂ ರೆಸ್ಟೋರೆಂಡ್​ ನಡೆಸುವ ಮಾಲೀಕರು ತಮ್ಮ ಮನೆ ದೇವರ ಹೆಸರನ್ನಿಡುತ್ತಿದ್ದರು. ಉದಾಹರಣೆಗೆ ಮಂಜುನಾಥ್​ ಬಾರ್​ ಅಂಡ್ ರೆಸ್ಟೋರೆಂಟ್​, ವೆಂಕಟೇಶ್ವರ ವೈನ್ಸ್​ ಹೀಗೆ ದೇವರ ಹೆಸರನ್ನಿಟ್ಟು ವ್ಯವಹಾರ ಮಾಡುತ್ತಿದ್ದರು. ಆದರೆ ರಾಜ್ಯ ಸರ್ಕಾರ ಇದಕ್ಕೆ ಬ್ರೇಕ್​ ಹಾಕಲಿದ್ದು, ಹೊಸ ಆದೇಶ ಹೊರಡಿಸಲಿದೆ. ಹೀಗಾಗಿ ಇನ್ಮುಂದೆ ಬಾರ್​ ಹಾಗೂ ರೆಸ್ಟೋರೆಂಟ್​​ಗಳಿಗೆ ದೇವರ ಹೆಸರನ್ನು ಬಿಟ್ಟು ಬೇರೆ ಹೆಸರು ಇಡುವುದು ಒಳಿತು ಎನ್ನಲಾಗುತ್ತಿದೆ.