ಮೇಷ ರಾಶಿ
ಆರ್ಥಿಕವಾಗಿ ಯಶಸ್ಸು ಕಂಡುಬರುತ್ತದೆ. ಸಾಮಾಜಿಕವಾಗಿ ಕಾರ್ಯಗಳು ಬಿರುಸಿನಿಂದ ನಡೆಯಲಿವೆ. ಹೆಚ್ಚಿನ ವಿಶ್ವಾಸ ಮುನ್ನಡೆಗೆ ಸಾಧಕವಾಗಲಿದೆ.
ಅದೃಷ್ಟ ಸಂಖ್ಯೆ 7
ವೃಷಭ ರಾಶಿ
ವೃತ್ತಿರಂಗದಲ್ಲಿ ನಿಮ್ಮ ಕಾರ್ಯ ವೈಖರಿಗೆ ಪ್ರಶಂಸೆ ದೊರೆಯಲಿದೆ. ಕಾರ್ಯರಂಗದಲ್ಲಿ ಬಾಕಿ ಉಳಿದಿರುವ ಕೆಲಸಗಳು ನಡೆಯಲಿವೆ. ವಿವಾಹ ಪ್ರಸ್ತಾವಗಳಿಂದ ಕಂಕಣ ಬಲ ಕೂಡಿ ಬರಲಿದೆ.
ಅದೃಷ್ಟ ಸಂಖ್ಯೆ 5
ಮಿಥುನ ರಾಶಿ
ಕಾರ್ಯರಂಗದಲ್ಲಿ ನಿಮ್ಮ ಚತುರತೆ ಕಂಡು ಬಂದರೂ, ಮನಸ್ಸಿಗೆ ಸಮಾಧಾನ ತರದೆ ನಿಷ್ಪಲವಾಗಬಹುದು. ವ್ಯಾಪಾರ ವ್ಯವಹಾರದಲ್ಲಿ ಲಾಭ ನಷ್ಟಗಳನ್ನು ಸುಧಾರಿಸಿಕೊಂಡು ಹೋಗಬಹುದಾಗಿದೆ.
ಅದೃಷ್ಟ ಸಂಖ್ಯೆ 8
ಕಟಕ ರಾಶಿ
ಕಾರ್ಯರಂಗದಲ್ಲಿ ಆಗಾಗ ಅಡೆತಡೆಗಳು ತೋರಿ ಬರಲಿದೆ. ಶ್ರೀದೇವರ ದರ್ಶನ ಭಾಗ್ಯವಿರದಿದ್ದರೂ, ಅನಿರೀಕ್ಷಿತ ರೂಪದಲ್ಲಿ ಕಾರ್ಯಸಾಧನೆಯಾಗಲಿದೆ.
ಅದೃಷ್ಟ ಸಂಖ್ಯೆ 3
ಸಿಂಹ ರಾಶಿ
ಆಗಾಗ ಧನಾಗಮನ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ. ಆರ್ಥಿಕವಾಗಿ ಬರಬೇಕಾದ ಹಣವು ಬಂದು ಸಂತುಷ್ಟರಾಗುವಿರಿ. ಇಷ್ಟ ಮಿತ್ರರ ಸಮಾಗಮದಿಂದ ಸಂತೋಷವಾಗುವುದು.
ಅದೃಷ್ಟ ಸಂಖ್ಯೆ 6
ಕನ್ಯಾ ರಾಶಿ
ನಿಮ್ಮ ಕಾರ್ಯ ಸಾಧನೆ ಸಹೋದ್ಯೋಗಿಗಳಿಗೆ ಅಷ್ಟೊಂದು ಸಮಾಧಾನವಾಗಲಾರದು. ಆಹಾರ ಪದ್ಧತಿಯಲ್ಲಿ ಬದಲಾವಣೆಯಿಂದ ಸಮಸ್ಯೆಗಳು ಎದುರಾಗಬಹುದು. ವೃತ್ತಿರಂಗದಲ್ಲಿ ತಪ್ಪು ಅಭಿಪ್ರಾಯ ಮೂಡಿ ಬರಲಿದೆ.
ಅದೃಷ್ಟ ಸಂಖ್ಯೆ 2
ತುಲಾ ರಾಶಿ
ಅನವಶ್ಯಕವಾಗಿ ಧನವ್ಯಯ ಕಂಡು ಬರಲಿದೆ. ಹೆಚ್ಚಿನ ಜಾಗ್ರತೆ ವಹಿಸಿದರೆ ಉತ್ತಮ. ಮಾತಿನಿಂದ ತಪ್ಪು ಅಭಿಪ್ರಾಯ ಕಂಡುಬರಲಿದೆ. ಸಹೋದ್ಯೊಗಿಗಳು ನಿಮಗೆ ಸಹಕಾರ ನೀಡಿದರೂ ಸಾಲವಾಗಬಹುದು.
ಅದೃಷ್ಟ ಸಂಖ್ಯೆ 9
ವೃಶ್ಚಿಕ ರಾಶಿ
ಬಹುದಿನಗಳ ಬಳಿಕ ಉತ್ತಮ ಲವಲವಿಕೆ ಕಂಡು ಬರಲಿದೆ. ಸಂಸಾರದಲ್ಲಿ ಸ್ವಲ್ಪ ಸಮಸ್ಯೆಗಳು ಪರಿಹಾರವಾಗಲಿವೆ. ಏಜೆಂಟರು ಕಮೀಷನ್ನಲ್ಲಿ ಏರುಗತಿಯನ್ನು ಕಾಣಲಿದ್ದಾರೆ. ಬೆನ್ನುನೋವಿಗೆ ಸೂಕ್ತ ಔಷಧೋಪಚಾರ ಮಾಡಿ.
ಅದೃಷ್ಟ ಸಂಖ್ಯೆ 1
ಧನುಸ್ಸು ರಾಶಿ
ಕಿರು ಸಂಚಾರ ಹೋಗಬೇಕಾಗಬಹುದು. ಅದನ್ನು ಖುಷಿಯನ್ನು ಅನುಭವಿಸಿ. ಪತ್ನಿಯ ಸುಖ ಸಂತೋಷ ನಿಮ್ಮದಾಗಲಿದೆ. ಹೊಟ್ಟೆಯ ಬಗ್ಗೆ ಸ್ವಲ್ಪ ಜಾಗ್ರತೆ ವಹಿಸಿ. ಹಿರಿಯರಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು.
ಅದೃಷ್ಟ ಸಂಖ್ಯೆ 4
ಮಕರ ರಾಶಿ
ಗೃಹ ಬದಲಾವಣೆಯಂತಹ ಸಂದರ್ಭ ಬರಬಹುದು. ಆದರೂ ಬೇಸರಿಸದಿರಿ. ಮುಂದೆ ಒಳ್ಳೆಯದಿದೆ. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಗೊಂದಲಗಳು ಕಂಡುಬರಲಿವೆ. ಅದನ್ನು ಸರಿದೂಗಿಸಲು ಕಲಿಯಿರಿ.
ಅದೃಷ್ಟ ಸಂಖ್ಯೆ 7
ಕುಂಭ ರಾಶಿ
ಇದ್ದುದರಲ್ಲೇ ಸಮಾಧಾನವನ್ನು ಅನುಭವಿಸಿ. ನಿಮಗೆ ಒಳ್ಳೆ ಕಾಲ ಕೂಡಿ ಬರುವುದು. ಪತ್ನಿಯ ಆರೋಗ್ಯದ ಬಗ್ಗೆ ಚಿಂತೆ ಬೇಡ. ವೈದ್ಯರ ಬಳಿ ಸೂಕ್ತ ತಪಾಸಣೆ ಮಾಡಿಸಿ. ಗೃಹದಲ್ಲಿ ಸ್ವಲ ಸುಖ ಶಾಂತಿ ನೆಲೆಸಲಿದೆ. .
ಅದೃಷ್ಟ ಸಂಖ್ಯೆ 5
ಮೀನ ರಾಶಿ
ಕುಟುಂಬದ ಹಿರಿಯರ ಸಹಕಾರ ನಿಮಗಿದೆ. ಆದರೆ ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಹಿರಿಯರ ಅನುಭವದ ಮಾತಿಗೆ ಕಿವಿಗೊಡಿ. ಅದರಿಂದ ನಿಮಗೆ ಒಳಿತೇ ಆಗುವುದು.
ಅದೃಷ್ಟ ಸಂಖ್ಯೆ 3
ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್…
15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ : ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ…
ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ ಬೆಂಗಳೂರು : ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ…
ಏಳೆಂಟು ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ ಬೆಂಗಳೂರು…
ಉಡುಪಿ:ಮಾದಕ ದ್ರವ್ಯ ಪ್ರಕರಣ : ಪಿಐಟಿ ಎನ್ಡಿಪಿಎಸ್ ಕಾಯ್ದೆಯಡಿ ಆರೋಪಿ ಬಂಧನ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶ ಉಡುಪಿ:…
ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ .. ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ…