Featured

ಸೋಮವಾರ ಅಂದರೆ  ಶಿವನನ್ನು ಪೂಜಿಸುವ ವಿಶೇಷ ದಿನ , ಈ ದಿನ ಸರಳವಾಗಿ ಶಿವ ಪೂಜೆಯನ್ನು ಮಾಡುವುದು ಹೇಗೆ..? ಹಾಗೂ ಅದರ ಪ್ರಯೋಜನ..-Vishwanews24

ಸೋಮವಾರ ಅಂದರೆ  ಶಿವನನ್ನು ಪೂಜಿಸುವ ವಿಶೇಷ ದಿನ ,

ಈ ದಿನ ಸರಳವಾಗಿ ಶಿವ ಪೂಜೆಯನ್ನು ಮಾಡುವುದು ಹೇಗೆ..? ಹಾಗೂ ಅದರ ಪ್ರಯೋಜನ..-Vishwanews24

ಸೋಮವಾರದಂದು, ಅಂದರೆ  ಶಿವನನ್ನು ಪೂಜಿಸುವ ವಿಶೇಷ ದಿನ. ಸೋಮವಾರದಂದು ಹೆಚ್ಚಿನ ಭಕ್ತರು ಉಪವಾಸವನ್ನು ಕೈಗೊಳ್ಳುತ್ತಾರೆ, ಶಿವನ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸುತ್ತಾರೆ. ಹಾಗೂ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.  ಸೋಮವಾರ ಸರಳವಾಗಿ ಶಿವ ಪೂಜೆಯನ್ನು ಮಾಡುವುದು ಹೇಗೆ..? ಸೋಮವಾರ ಶಿವ ಪೂಜೆ ಮಾಡುವುದರಿಂದಾಗುವ ಪ್ರಯೋಜನವೇನು..?

ಸೋಮವಾರ ಶಿವ ಪೂಜೆ ತಯಾರಿ:

1) ಹೆಚ್ಚಿನ ಭಕ್ತರು ಸೋಮವಾರದಂದು ಉಪವಾಸವ ವ್ರತವನ್ನು ಕೈಗೊಳ್ಳುತ್ತಾರೆ. ಆದರೆ ನೀವು ಗಮನದಲ್ಲಿಡಬೇಕಾದ ಒಂದು ವಿಷಯವೆಂದರೆ. ಒಮ್ಮೆ ಸೋಮವಾರದ ಉಪವಾಸ ವ್ರತವನ್ನು ಕೈಗೊಂಡರೆ ಈ ವ್ರತವನ್ನು 16 ಸೋಮವಾರಗಳವರೆಗೆ ಮುಂದುವರೆಸಿಬೇಕು.

2) ಉಪವಾಸವನ್ನು ಆಚರಿಸುವವರು ಪ್ರತೀ ಸೋಮವಾರ ಮುಂಜಾನೆ ಬೇಗ ಎದ್ದು, ಸ್ನಾನ ಮಾಡಬೇಕು.

3) ಸ್ನಾನದ ನಂತರ ಶುದ್ಧರಾಗಿ ದೇವರ ಕೋಣೆಯನ್ನು ಅಥವಾ ದೇವರನ್ನು ಪೂಜಿಸುವ ಸ್ಥಳವನ್ನು ಸ್ವಚ್ಛಗೊಳಿಸಬೇಕು.

4) ದೇವರ ಕೋಣೆಯನ್ನು ಶುದ್ಧಗೊಳಿಸಿದ ನಂತರ ಜಿಂಜೆಲ್ಲಿ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಿ.

5) ಚಂದನ ಮತ್ತು ವಿವಿಧ ಬಗೆಯ ಹೂವುಗಳನ್ನು ಬಳಸಿಕೊಂಡು ಶಿವ ಲಿಂಗವನ್ನು ಅಥವಾ ಶಿವನ ಫೋಟೋವನ್ನು ಅಲಂಕರಿಸಬೇಕು.

6) ಶಿವನಿಗೆ ಹೂವುಗಳನ್ನು ಅರ್ಪಿಸುವಾಗ ತಪ್ಪದೇ ‘ ಓಂ ನಮಃ ಶಿವಾಯ’ ಮಂತ್ರವನ್ನು ಪಠಿಸುತ್ತಿರಬೇಕು.

7) ಶಿವ ಪೂಜೆಯನ್ನು ಮುಕ್ತಾಯಗೊಳಿಸುವ ಮುನ್ನ, ಶಿವನಿಗೆ ನೀವು ವೀಳ್ಯದೆಲೆಯನ್ನು, ತೆಂಗಿನ ಕಾಯಿಯನ್ನು, ತಾಜಾ ಹಣ್ಣುಗಳನ್ನು ಮತ್ತು ಸಿಹಿ ಖಾದ್ಯವನ್ನು ಅರ್ಪಿಸಬೇಕು.

8) ಶಿವನಿಗೆ ಅರ್ಪಿಸುವ ಖಾದ್ಯ ಯಾವಾಗಲು ಅಸ್ಪೃಶ್ಯವಾಗಿರಬೇಕು. ಶಿವನಿಗೆ ನೀಡುವ ನೈವೇದ್ಯವನ್ನು ನೀವು ಸ್ನಾನ ಮಾಡಿದ ನಂತರವೇ ತಯಾರಿಸಬೇಕು. ಶಿವನಿಗೆ ಅದನ್ನು ಅರ್ಪಿಸದೇ ಎಂಜಲು ಮಾಡಬಾರದು.

ಪೂಜೆಗೆ ಬೇಕಾಗುವ ಸಾಮಾಗ್ರಿಗಳು ಮತ್ತು ಪೂಜೆ ಮಾಡುವ ವಿಧಾನ:

1) ಶಿವನನ್ನು ಪ್ರಾರ್ಥಿಸಲು ಶಿವಲಿಂಗ, ಹಾಲು, ಜೇನುತುಪ್ಪ, ನೀರು, ಮೊಸರು, ತುಪ್ಪ, ಸಕ್ಕರೆ, ಬಿಲ್ವ ಪತ್ರೆ, ಚಂದನ, ಹೂವುಗಳು, ವಿಭೂತಿ, ಎಣ್ಣೆ, ದೀಪ ಮತ್ತು ಧೂಪ ದ್ರವ್ಯಗಳು ಅವಶ್ಯಕವಾಗಿರುತ್ತದೆ.

2) ಶಿವ ಪ್ರಾರ್ಥನೆಯನ್ನು ಆರಂಭಿಸುವ ಮೊದಲು ನಾವು ನಮ್ಮನ್ನು ಸಂಪೂರ್ಣವಾಗಿ ಶುದ್ಧೀಕರಿಸಿಕೊಳ್ಳಬೇಕು.

3) ಶಿವನಿಗೆ ಪ್ರಾರ್ಥನೆಯನ್ನು ಸಲ್ಲಿಸುವಾಗ ಶಿವ ಬೀಜ ಮಂತ್ರವನ್ನು, ಮಹಾ ಮೃತ್ಯುಂಜಯ ಮಂತ್ರವನ್ನು ಸೇರಿಂದತೆ ಶಿವನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಬೇಕು.

4) ಶಿವ ಪೂಜೆಯಲ್ಲಿ ಮೊದಲು ದೀಪ, ಧೂಪವನ್ನು ಹಚ್ಚಬೇಕು.

5) ನಂತರ ಶಿವ ಲಿಂಗವನ್ನು ಅಥವಾ ಶಿವನ ಫೋಟೋವನ್ನು ಹೂವುಗಳಿಂದ ಅಲಂಕರಿಸಿ, ತಾಜಾ ಹಣ್ಣುಗಳನ್ನು ಅರ್ಪಿಸಿ.

6) ಮಂತ್ರದೊಂದಿಗೆ ಶಿವನ ವಿಗ್ರಹಕ್ಕೆ ಜಲಾಭಿಷೇಕ, ಪಂಚಾಮೃತಾಭಿಷೇಕ ಮಾಡಿ.

7) ಅಂತಿಮವಾಗಿ ಕುಟುಂಬದ ಸರ್ವ ಸದಸ್ಯರಿಗೂ ಪಂಚಾಮೃತವನ್ನು ಪ್ರಸಾದವಾಗಿ ವಿತರಿಸಿ.

ಸೋಮವಾರ ಶಿವ ಪೂಜೆಯ ಪ್ರಯೋಜನ:

1) ಸೋಮವಾರದ ಶಿವ ಪೂಜೆಯಿಂದ ಶಿವನು ನಕಾರಾತ್ಮಕತೆಯನ್ನು ದೂರಾಗಿಸುತ್ತಾನೆ. ಮತ್ತು ಶನಿಯಿಂದಾಗುವ ಸಮಸ್ಯೆಗಳನ್ನು ದೂರಾಗಿಸುತ್ತಾನೆ.

2) ಉತ್ತಮ ಆರೋಗ್ಯಕ್ಕಾಗಿ ಸೋಮವಾರ ಶಿವ ಪೂಜೆಯನ್ನು ಮಾಡಬೇಕು. ಈ ಪೂಜೆಯಿಂದ ಆರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತದೆ.

3) ನಾವು ನಮ್ಮ ವೃತ್ತಿ ಜೀವನದಲ್ಲಿ ಸರಳವಾಗಿ ಮುನ್ನಡೆಯನ್ನು ಸಾಧಿಸಬಹುದು.

4) ಅವಿವಾಹಿತ ಮಹಿಳೆಯರು 16 ಸೋಮವಾರ ಉಪವಾಸವನ್ನು ಮಾಡುವುದರಿಂದ ನಿಮ್ಮ ಇಚ್ಛೆಯ ವರನನ್ನು ಪಡೆಯಬಹುದು.

5) ಎಲ್ಲಾ ಕಾರ್ಯಗಳಲ್ಲೂ ಬೆಂಬಲ ಮತ್ತು ಶಕ್ತಿಯನ್ನು ನೀಡುವನು. ಹಾಗೂ ಜಗತ್ತನ್ನು ಎದುರಿಸಲು ಧೈರ್ಯವನ್ನು ನೀಡುವನು.

6) ನಿಯಮಿತವಾಗಿ ಸೋಮವಾರ ಶಿವನನ್ನು ಪೂಜಿಸುವುದರಿಂದ ಮರಣಾ ನಂತರ ಮೋಕ್ಷವನ್ನು ಪಡೆಯಬಹುದು.

7) ವೈವಾಹಿಕ ಸಮಸ್ಯೆಗಳಿಂದ ಹೊರಬರಲು ಸೋಮವಾರದಂದು ತಪ್ಪದೇ ಶಿವ ಪೂಜೆಯನ್ನು ಮಾಡಬೇಕು.

8) ಜೀವನದಲ್ಲಿ ಶಾಂತಿಯನ್ನು ಕಂಡುಕೊಳ್ಳಲು ಸೋಮವಾರ ಶಿವನನ್ನು ಪೂಜಿಸಬೇಕು.

 

 

Vishwa News 24

Recent Posts

ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ ; ಮನವಿಗೆ  ಸ್ಪಂದಿಸಿದ ಸಿಎಂ  – vishwanews24

ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ ; ಮನವಿಗೆ  ಸ್ಪಂದಿಸಿದ ಸಿಎಂ  ಚುನಾವಣೆ, ಪಕ್ಷ ಸಂಘಟನೆ ಕಾರಣ…

5 minutes ago

ಮನೆ ತೆರಿಗೆ ಲಕ್ಷಾಂತರ ಹಣ ದುರುಪಯೋಗ: ಶಿವಪುರ ಗ್ರಾ.ಪಂ ಸಿಬ್ಬಂದಿ ವಜಾ – vishwanews24

ಮನೆ ತೆರಿಗೆ ಲಕ್ಷಾಂತರ ಹಣ ದುರುಪಯೋಗ: ಶಿವಪುರ ಗ್ರಾಪಂ ಸಿಬ್ಬಂದಿ ವಜಾ ಉಡುಪಿ: ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯಿತಿಯಲ್ಲಿ…

17 minutes ago

ಏರ್ ಇಂಡಿಯಾ ವಿಮಾನದ ಎಲ್ಲಾ ಪೈಲಟ್‌ಗಳಿಗೆ ಮಾದಕ ದ್ರವ್ಯ ಪರೀಕ್ಷೆ ಕಡ್ಡಾಯ – vishwanews24

ಏರ್ ಇಂಡಿಯಾ ವಿಮಾನದ ಎಲ್ಲಾ ಪೈಲಟ್‌ಗಳಿಗೆ ಮಾದಕ ದ್ರವ್ಯ ಪರೀಕ್ಷೆ ಕಡ್ಡಾಯ ನವದೆಹಲಿ: ಆಕಾಶದಲ್ಲಿ ಹಾರಾಡುವಾಗಲೇ ತೀವ್ರ ಗಾಳಿಯ ಅಡಚಣೆಗೆ…

25 minutes ago

ರಾಷ್ಟ್ರೀಯ ಹೆದ್ದಾರಿಯಲ್ಲಿ 10 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಲಭ್ಯತೆ ಕಡ್ಡಾಯ: ವಿಳಂಬವಾದರೆ ₹10,000 ದಂಡ ..! vishwanews24

ರಾಷ್ಟ್ರೀಯ ಹೆದ್ದಾರಿಯಲ್ಲಿ 10 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಲಭ್ಯತೆ ಕಡ್ಡಾಯ: ವಿಳಂಬವಾದರೆ ₹10,000 ದಂಡ ..! ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ…

29 minutes ago

ಮೈಸೂರು: ಮದುವೆ ನಿಶ್ಚಯವಾಗಿದ್ದ SBI ಉದ್ಯೋಗಿಗಳಿಬ್ಬರು ಆತ್ಮಹತ್ಯೆಗೆ ಶರಣು – vishwanews24

ಮೈಸೂರು: ಮದುವೆ ನಿಶ್ಚಯವಾಗಿದ್ದ SBI ಉದ್ಯೋಗಿಗಳಿಬ್ಬರು ಆತ್ಮಹತ್ಯೆಗೆ ಶರಣು ಮೈಸೂರು: ಡಿಸೆಂಬರ್‌ನಲ್ಲಿ ಹಸೆಮಣೆ ಏರಬೇಕಿದ್ದ SBI ಉದ್ಯೋಗಿಗಳಿಬ್ಬರು ಪ್ರತ್ಯೇಕವಾಗಿ ಆತ್ಮಹತ್ಯೆಗೆ…

41 minutes ago

ಬಂಟ್ವಾಳ : ಅಡುಗೆ ಸಿಬ್ಬಂದಿಯನ್ನು ಪ್ರಾಣಾಪಾಯದಿಂದ ಕಾಪಾಡಿದ ವಿದ್ಯಾರ್ಥಿಗೆ ಸಿಎಂ ಮೆಚ್ಚುಗೆ – vishwanews24

ಬಂಟ್ವಾಳ : ಅಡುಗೆ ಸಿಬ್ಬಂದಿಯನ್ನು ಪ್ರಾಣಾಪಾಯದಿಂದ ಕಾಪಾಡಿದ ವಿದ್ಯಾರ್ಥಿಗೆ ಸಿಎಂ ಮೆಚ್ಚುಗೆ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು…

50 minutes ago