ಮೇಷ ರಾಶಿ
ಇಂದು ನೀವು ಚಂಚಲ ಚಿತ್ತದಿಂದ ಮಾಡುವ ಕೆಲಸಗಳು ಹಾದಿ ತಪ್ಪುವುವು. ಪರಿಸ್ಥಿತಿಯನ್ನು ಸರಿಯಾಗಿ ಅರಿತುಕೊಂಡು ಮನ್ನಡೆಯುವುದು ಉತ್ತಮ.
ಅದೃಷ್ಟ ಸಂಖ್ಯೆ: 8
ವೃಷಭ ರಾಶಿ
ಇಂದು ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿಬರಲಿದೆ. ಈ ದಿನ ನಿಮ್ಮನ್ನು ಹುಡುಕಿಕೊಂಡು ಬಂದ ಅವಕಾಶವನ್ನು ನಿರ್ಲಕ್ಷಿಸಿದೇ ಎಲ್ಲಾ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ.
ಅದೃಷ್ಟ ಸಂಖ್ಯೆ: 3
ಮಿಥುನ ರಾಶಿ
ಯಾವುದೇ ಉದ್ಯೋಗದಲ್ಲಿರುವವರು ಅಥವಾ ಇನ್ನಿತರ ವೃತ್ತಿರಂಗದಲ್ಲಿರುವವರು ತಮ್ಮ ಮೇಲಾಧಿಕಾರಿಗಳೊಂದಿಗೆ ಜಗಳವಾಡುವ ಸಂದರ್ಭಗಳು ಹೆಚ್ಚಿವೆ. ಆದಷ್ಟು ಜಗಳವಾಗದಂತೆ ನೋಡಿಕೊಳ್ಳಿ.
ಅದೃಷ್ಟ ಸಂಖ್ಯೆ: 6
ಕಟಕ ರಾಶಿ
ಕಟಕ ಅಥವಾ ಕರ್ಕಾಟಕ ರಾಶಿಯವರು ಇಂದು ಕೆಲವೊಂದು ಮಂಗಳ ಕಾರ್ಯದಲ್ಲಿ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ನೀವು ಬಹುದಿನಗಳಿಂದ ಕಾಯುತ್ತಿದ್ದ ಗ್ರಹ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲಿದೆ.
ಅದೃಷ್ಟ ಸಂಖ್ಯೆ: 5
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ವಿದ್ಯಾರ್ಥಿಗಳಾಗಿದ್ದರೆ ನಿಮಗಿಂದು ವಿದೇಶ ಪ್ರಯಾಣದ ಯೋಗ ಕೂಡಿ ಬರಲಿದೆ. ಈ ಶುಭ ಅವಕಾಶವನ್ನು ಅಲ್ಲಗಳೆಯದೇ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಅದೃಷ್ಟ ಸಂಖ್ಯೆ: 2
ಕನ್ಯಾ ರಾಶಿ
ಸೋಮವಾರದ ಈ ದಿನ ನೀವು ಗುರುಹಿರಿಯರ ಮಾತಿಗೆ ಗೌರವವನ್ನು ನೀಡಬೇಕು. ಅವರ ಮಾತನ್ನು ಎಂದಿಗೂ ಅಲ್ಲಗಳೆಯದಿರಿ. ನೀವಿಂದು ಹಿರಿಯರ ಮಾತನ್ನು ನಿರಾಕರಿಸಿದರೆ ಮನೆಯಲ್ಲಿ ಹಿರಿಯರೊಂದಿಗೆ ಜಗಳವುಂಟಾಗಬಹುದು.
ಅದೃಷ್ಟ ಸಂಖ್ಯೆ: 4
ತುಲಾ ರಾಶಿ
ಜೀವನದಲ್ಲಿ ಮುನ್ನಡೆ ಸಾಧಿಸುವ ಮಾರ್ಗದಲ್ಲಿ ನಿಮ್ಮ ಚಟುವಟಿಕೆ ಹೆಚ್ಚಾಗಲಿದೆ. ಮನಸ್ಸಿಗೆ ಅನುಗುಣವಾಗಿ ವಿಚಾರಗಳಿಗೆ ಒಪ್ಪಿಗೆ ಸೂಚಿಸಿ. ಮನಸ್ಸಿಗೆ ಒಪ್ಪಿಗೆಯಿಲ್ಲದ, ಮನಸ್ಸಿಗೆ ಸರಿಯೆನಿಸದ ಕೆಲಸಗಳನ್ನು ಮಾಡದಿರಿ. ಉಪಕಸುಬುಗಳಿಂದ ಆದಾಯವನ್ನು ಅಥವಾ ಆರ್ಥಿಕ ಲಾಭವನ್ನು ಹೊಂದುವಿರಿ.
ಅದೃಷ್ಟ ಸಂಖ್ಯೆ: 9
ವೃಶ್ಚಿಕ ರಾಶಿ
ನಿಮ್ಮ ಲವಲವಿಕೆಯೇ ನಿಮಗೆ ಯಶಸ್ಸನ್ನು ಸಾಧಿಸಲು ಸಹಕಾರಿ. ವಾಣಿಜ್ಯ ಕ್ಷೇತ್ರದಲ್ಲಿ ತೃಪ್ತಿದಾಯಕ ಆರ್ಥಿಕ ಲಾಭವನ್ನು ಪಡೆದುಕೊಳ್ಳುವಿರಿ. ಆರಾಮದಾಯಕ ಅಲೆದಾಟದಿಂದ ಕಾರ್ಯಸಿದ್ಧಿ ಯೋಗವಿದೆ.
ಅದೃಷ್ಟ ಸಂಖ್ಯೆ: 1
ಧನುಸ್ಸು ರಾಶಿ
ಸರಳವಾಗಿ ಅಚ್ಚುಕಟ್ಟಿನಿಂದ ಆಯೋಜಿಸಲ್ಪಟ್ಟ ಅಥವಾ ಯಾವುದಕ್ಕೂ ಕೊರತೆಯಿಲ್ಲದ ಶುಭ ಸಮಾರಂಭಗಳಲ್ಲಿ ನೀವು ಪಾಲ್ಗೊಳ್ಳುವಿರಿ. ವೃತ್ತಿರಂಗದಲ್ಲಿ ಸ್ನೇಹಿತರ ಸಹಾಯದಿಂದ ಲಾಭದಾಯಕ ಬೆಳವಣಿಗೆಯನ್ನು ಹೊಂದುವಿರಿ.
ಅದೃಷ್ಟ ಸಂಖ್ಯೆ: 7
ಮಕರ ರಾಶಿ
ವ್ಯವಹಾರದಲ್ಲಿನ ಅಳುಕು ಮನೋಭಾವ ದೂರಾಗಿ ಉತ್ತೇಜನ ಪ್ರಾಪ್ತವಾಗಲಿದೆ. ಅಸೆ ಆಕಾಂಕ್ಷೆಗಳ ಈಡೇರಿಕೆಗೆ ಮತ್ಸದ್ಧಿಗಳ ಸಾಂಗತ್ಯದಿಂದ ಸಂತೋಷ ಸಿಗಲಿದೆ.
ಅದೃಷ್ಟ ಸಂಖ್ಯೆ: 3
ಕುಂಭ ರಾಶಿ
ಈ ದಿನ ನೀವು ಅತ್ಯಂತ ಉತ್ಸುಕ ಮನೋಭಾವವನ್ನು ಹೊಂದಿರುವಿರಿ. ಘನತೆಗೆ ಧಕ್ಕೆಯಾಗದಂತೆ ಮೇಧಾವಿಗಳೊಂದಿಗೆ ಅಥವಾ ಜ್ಞಾನಿಗಳೊಂದಿಗೆ ಚರ್ಚೆಯಲ್ಲಿ ಮುಳುಗುವಿರಿ.
ಅದೃಷ್ಟ ಸಂಖ್ಯೆ: 6
ಮೀನ ರಾಶಿ
ಯಾವುದೇ ಒಂದು ವಿಷಯ ನಿಮಗೆ ಅಗತ್ಯವೆನಿಸಿದರೆ ಮಾತ್ರ ಆ ಅಗತ್ಯತೆಗೆ ತಕ್ಕಂತೆ ಯೋಚಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಿ.
ಅದೃಷ್ಟ ಸಂಖ್ಯೆ: 8
ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…
ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…
ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…