Featured

‘ಓಂ ನಮಃ ಶಿವಾಯ’ ಈ ಮಂತ್ರದ ಅರ್ಥ -Vishwanews24

‘ಓಂ ನಮಃ ಶಿವಾಯ’ ಈ ಮಂತ್ರದ ಅರ್ಥ -Vishwanews24

“ಓಂ ನಮಃ ಶಿವಾಯ” ಎನ್ನುವ ಮಂತ್ರವು ಶಿವನಿಗೆ ಶ್ರೇಷ್ಠವಾದ ಮಂತ್ರ. ಈ ಮಂತ್ರವು ಶ್ರೀ ರುದ್ರಂ ಚಮಕಂ ಎನ್ನುವ ಧಾರ್ಮಿಕ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಆರಂಭ ಎನ್ನುವ ಅರ್ಥವನ್ನು ನೀಡುವ ಈ ಮಂತ್ರವು ಯಜುರ್ವೇದದ ಮೂಲ ಎಂದು ಸಹ ಹೇಳಲಾಗುತ್ತದೆ. ಶಿವನಿಗೆ ಅರ್ಪಿತವಾದ ಈ ಪವಿತ್ರ ಮಂತ್ರವನ್ನು ಜಪಿಸುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಶಿವನ ಸ್ಮರಣೆ ಹಾಗೂ ಪೂಜೆಯು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಪುಣ್ಯ ಹಾಗೂ ಸಮೃದ್ಧಿಯನ್ನು ತಂದುಕೊಡುವುದು. ಶಿವನು ಅತ್ಯಂತ ಕಠಿಣ, ಶಕ್ತಿವಂತ, ಸರಳ ಹಾಗೂ ಅನಂತನಾದ ದೇವ ಎಂದು ಪರಿಗಣಿಸಲಾಗುವುದು. .

ಶಿವನ ನಾಮ ಹಾಗೂ “ಓಂ ನಮಃ ಶಿವಾಯ” ಎನ್ನುವ ಮಂತ್ರವನ್ನು ಪಠಿಸಿದರೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಮಾಯವಾಗುತ್ತವೆ. ವ್ಯಕ್ತಿ ಪುನಃ ಜೀವನದಲ್ಲಿ ಚೈತನ್ಯ ಶೀಲನಾಗಿ ಪರಿವರ್ತನೆಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ.

ಓಂ ನಮಃ ಶಿವಾಯ ಮಂತ್ರದ ಅರ್ಥ

ಓಂ ನಮಃ ಶಿವಾಯ ಎನ್ನುವ ಮಂತ್ರವು ಪ್ರಮುಖವಾಗಿ ಐದು ಅಕ್ಷರಗಳಿಂದ ಕೂಡಿದೆ. ನ, ಮ, ಶಿ, ವಾ, ಯ ಎನ್ನುವ ಐದು ಅಕ್ಷರಗಳು ಪ್ರಕೃತಿಯ ಐದು ಅಂಶಗಳನ್ನು ಸೂಚಿಸುತ್ತವೆ. ಈ ಐದು ಅಕ್ಷರಗಳು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶವನ್ನು ಸೂಚಿಸುತ್ತವೆ. ಈ ಐದು ಸಂಗತಿಗಳನ್ನು ಹಿಂದೂ ಧರ್ಮಗಳಲ್ಲಿ ಪಂಚ ಭೂತಗಳು ಎಂದು ಕರೆಯಲಾಗುವುದು. ಈ ಪಂಚ ಭೂತಗಳು ಸೃಷ್ಟಿ ಹಾಗೂ ಜೀವ ಸಂಕುಲಗಳ ಉಳಿವಿಗೆ ಅಗತ್ಯವಾದವು. ಈ ಅಂಶಗಳನ್ನು ಹಾಗೂ ಶಿವನ ಶಕ್ತಿಯನ್ನು ಹೊಂದಿರುವ ಮಂತ್ರವನ್ನು ಹೇಳುವುದರಿಂದ ಜೀವನಕ್ಕೆ ಅಗತ್ಯವಾದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಶುದ್ಧ ಮನಸ್ಸಿನಿಂದ ಶಿವನ ನಾಮವನ್ನು ಹಾಗೂ “ಓಂ ನಮಃ ಶಿವಾಯ” ಮಂತ್ರವನ್ನು ಜಪಿಸಿದರೆ ವ್ಯಕ್ತಿಯ ಆತ್ಮ ಶುದ್ಧಿಯಾಗುವುದು. ಇದರೊಟ್ಟಿಗೆ ವ್ಯಕ್ತಿ ಧಾರ್ಮಿಕ ಚಿಂತನೆಗಳ ಕಡೆಗೆ ಬಾಗುವನು. ಉತ್ತಮ ನಡತೆ ಹಾಗೂ ಸದ್ಗುಣಗಳಿಂದ ತನ್ನ ಜೀವನದಲ್ಲಿ ಸದ್ಗತಿಯನ್ನು ಪಡೆದುಕೊಳ್ಳುವನು. ದೈವ ಶಕ್ತಿಯ ಆರಾಧನೆ ಹಾಗೂ ಇರುವಿಕೆಯ ಬಗ್ಗೆ ನಂಬಿಕೆಯು ಹುಟ್ಟುವುದು. ಇದರೊಟ್ಟಿಗೆ ಸಮಾಜದ ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮ ವಹಿಸುವನು.

“ಓಂ ನಮಃ ಶಿವಾಯ” ಮಂತ್ರವನ್ನು ಜಪಿಸುವುದರಿಂದ ಸಕಾರಾತ್ಮಕ ಕಂಪನಗಳು ಹೊರಹೊಮ್ಮುತ್ತವೆ. ಇದರ ಕಂಪನಗಳು ನಮ್ಮ ಉಪಪ್ರಜ್ಞೆ ಮತ್ತು ಮನಸ್ಸನ್ನು ಜಾಗ್ರತಗೊಳಿಸುತ್ತವೆ. ಆಂತರಿಕವಾಗಿ ಇರುವ ನಮ್ಮ ಮಾನಸಿಕ ಸಮಸ್ಯೆ ಹಾಗೂ ದೈಹಿಕ ಅನಾರೋಗ್ಯಗಳನ್ನು ಗುಣಪಡಿಸುವಲ್ಲಿ ಸಾಕಷ್ಟು ಪ್ರಯತ್ನ ಮಾಡುವುದು. ಈ ಮಂತ್ರಗಳನ್ನು ನಿರಂತರವಾಗಿ ಜಪಿಸುವುದರಿಂದ ಖಿನ್ನತೆ, ನಿದ್ರಾಹೀನತೆ ಮತ್ತು ಮಾನಸಿಕ ಅಸ್ವಸ್ಥತೆಯನ್ನು ಸುಲಭವಾಗಿ ನಿವಾರಣೆಯಾಗುತ್ತವೆ. ಮಾನಸಿಕವಾಗಿ ಇರುವ ಒತ್ತಡ ಅಥವಾ ಹಿಂಜರಿಕೆಯ ಸ್ವಭಾವ ಶಮನವಾಗಿ, ಪ್ರಕ್ಷುಬ್ಧ ಮನಸ್ಸನ್ನು ಹೊಂದಬಹುದು. ಜೊತೆಗೆ ಮನಸ್ಸು ಶಾಂತವಾಗಿ ನಿರಾಳವಾದ ಸ್ಥಿತಿಯನ್ನು ಅನುಭವಿಸುವುದು.

“ಓಂ ನಮಃ ಶಿವಾಯ” ಮಂತ್ರವು ಬ್ರಹ್ಮಾಂಡವನ್ನು ಪೋಷಿಸುವ ಶಕ್ತಿಯ ಮೂಲವಾಗಿದೆ. ಇದನ್ನು ಮನುಜ ಜಪಿಸಿದರೆ ಹೊಕ್ಕಳುಗಳಲ್ಲಿ ಧನಾತ್ಮಕ ಶಕ್ತಿ ಬೆಳಗುವುದು. ಇದು ಸಕಾರಾತ್ಮಕ ಸಂವೇದನೆಯೊಂದಿಗೆ ದೇಹವನ್ನು ಜಾಗೃತಗೊಳಿಸುತ್ತದೆ. ಗಣನೀಯವಾಗಿ ಶಿವನ ಮಂತ್ರ ಜಪಿಸಿದರೆ ರಕ್ತದೊತ್ತಡ, ಮಿದುಳು ಸಮಸ್ಯೆ, ವಾತ, ಮೈ-ಕೈ ನೋವು, ಪದೇ ಪದೇ ಕಾಡುವ ಶೀತ ಜ್ವರ, ಹೃದಯ ಸಮಸ್ಯೆ, ಕೋಪದ ನಿಯಂತ್ರಣ, ಹೊಟ್ಟೆ ಸಮಸ್ಯೆ ಹೀಗೆ ಹಲವಾರು ದೈಹಿಕ ಅನಾರೋಗ್ಯಗಳನ್ನು ತಡೆಯುವುದು. ವ್ಯಕ್ತಿಯು ಉತ್ತಮ ಆರೋಗ್ಯದಿಂದ ಜೀವನ ನಡೆಸಲು ಸಹಾಯವಾಗುವುದು.

ಶಿವನ ಜಪವನ್ನು ಜಪಿಸಲು ಕೆಲವು ಕ್ರಮವನ್ನು ಅನುಸರಿಸಬೇಕು. 

ಪ್ರತಿ ದಿನ ಮುಂಜಾನೆ ಸ್ನಾನ ಮಾಡಿ, ಪೂರ್ವ ದಿಕ್ಕಿಗೆ ಅಥವಾ ಉತ್ತರದ ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳಿ.
ಕಣ್ಣುಗಳನ್ನು ಮುಚ್ಚಿ, ಶುದ್ಧ ಮನಃಸ್ಥಿತಿಯನ್ನು ಹೊಂದಿರಿ.

ಕೈಯಲ್ಲಿ ಜಪ ಮಾಲೆಯನ್ನು ಹಿಡಿದು ಶಾಂತವಾಗಿ 108 ಬಾರಿ ಅಥವಾ 1008 ಬಾರಿ ಶಿವನ ಮಂತ್ರವನ್ನು ಜಪಿಸಿ.
ನಂತರ ಅದೇ ಸ್ಥಳದಲ್ಲಿ ಸ್ವಲ್ಪ ಸಮಯಗಳ ಕಾಲ ಪ್ರಶಾಂತವಾದ ಮನಸ್ಸಿನಿಂದ ಕುಳಿತು ಧ್ಯಾನ ಮಾಡಿ.

ಶಿವನ ಜಪವನ್ನು ಹೀಗೆ ಮಾಡುವುದರಿಂದ ಸಕಾರಾತ್ಮಕ ಶಕ್ತಿಯು ನಿಮ್ಮನ್ನು ಆಕರ್ಷಿಸುವುದು. ನಿಮ್ಮಲ್ಲಿರುವ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದು.ಜೊತೆಗೆ ಸುತ್ತಲೂ ಸದಾ ಕಾಲ ಧನಾತ್ಮಕ ಶಕ್ತಿಯ ಹರಿವು ನಿಮ್ಮನ್ನು ರಕ್ಷಿಸುತ್ತಲಿರುತ್ತವೆ

Vishwa News 24

Recent Posts

ವಿಧಾನ ಪರಿಷತ್‌ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ – vishwanews24

ವಿಧಾನ ಪರಿಷತ್‌ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್‌…

5 hours ago

15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ :  ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ – vishwanews24

15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ :  ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ…

5 hours ago

ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ – vishwanews24

ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ ಬೆಂಗಳೂರು : ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ…

6 hours ago

ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ – vishwanews24

 ಏಳೆಂಟು ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ ಬೆಂಗಳೂರು…

6 hours ago

ಉಡುಪಿ:ಮಾದಕ ದ್ರವ್ಯ ಪ್ರಕರಣ :  ಪಿಐಟಿ–ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ – vishwanews24

ಉಡುಪಿ:ಮಾದಕ ದ್ರವ್ಯ ಪ್ರಕರಣ :  ಪಿಐಟಿ ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿ ಬಂಧನ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶ ಉಡುಪಿ:…

6 hours ago

ಕುದುರೆಮುಖ ಆಫ್ ರೋಡಿಂಗ್ ಚಟುವಟಿಕೆ ವಿರುದ್ಧ ತೀವ್ರ ಆಕ್ರೋಶ – vishwanews24

ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ .. ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ…

8 hours ago