ಉಡುಪಿಯಲ್ಲಿ ಹೈಸ್ಕೂಲ್ ಸ್ಟೂಡೆಂಟ್ ಧಿಡೀರ್ ನಾಪತ್ತೆ. ತಡವಾಗಿ ಬೆಳಕಿಗೆ ಬಂದ ಘಟನೆ

Featured, ಉಡುಪಿ

ಉಡುಪಿ  : ಬಾಲಕಿಯೊಬ್ಬಳು ಧಿಡೀರ್ ನಾಪತ್ತೆಯಾದ ಘಟನೆ ಉಡುಪಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಸುಶ್ಮಿತ ನಾಪತ್ತೆಯಾದ ಬಾಲಕಿ. ಮೂಲತಃ ಕೊಪ್ಪಳ ಜಿಲ್ಲೆ ಪುಷ್ಟಗಿ ತಾಲೂಕಿನ ನಿವಾಸಿಯಾದ ಈಕೆ ಉಡುಪಿ ಜಿಲ್ಲೆಯ ಕಲ್ಯಾಣಪುರದ ಟಿಎಂಎಪೈ ಶಾಲೆಯಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆಯನ್ನು ಆಕೆ ತಾಯಿ ಲಕ್ಷ್ಮಿ ಕಲ್ಯಾಣಪುರದಲ್ಲಿರುವ ಪ್ಲಾನೆಟ್ ಮಾರ್ಸ್ ಫೌಂಡೇಶನ್ ಎಂಬ ಆಶ್ರಮದಲ್ಲಿ ಸೇರಿಸಿ ಹೋಗಿದ್ದರು.

ಎಂದಿನಂತೆ ಶಾಲೆಗೆ ಹೋಗಿ ಆಶ್ರಮಕ್ಕೆ ಬರುತ್ತಿದ್ದ ಸುಶ್ಮಿತ ಎಂಬಾಕೆ ಇದೇ ಜೂನ್19ರಂದು ರಾತ್ರಿ ಊಟ ಮಾಡಿ ಮಲಗಿದ್ದವಳು ಮರುದಿನ ಬೆಳಿಗ್ಗೆ ಕಾಣೆಯಾಗಿದ್ದಾಳೆ.

ಪೋಷಕರು ಆಶ್ರಮದ ಮೇಲೆಯೇ ಶಂಕೆ ವ್ಯಕ್ತಪಡಿಸಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಆಶ್ರಮದ ಮುಖ್ಯಸ್ಥರು ಮಾತ್ರ ಆಕೆ ಯಾರಿಗೂ ತಿಳಿಯದೆ ರಾತ್ರೋ ರಾತ್ರಿ ಆಶ್ರಮ ಬಿಟ್ಟು ಹೋಗಿದ್ದಾಳೆ. ಈ ಬಗ್ಗೆ ಆಕೆ ಆಶ್ರಮದಿಂದ ಒಬ್ಬಳೇ ಹೊರಗೆ ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಲ್ಪೆ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಇಷ್ಟೇ ಅಲ್ಲದೆ ಬಾಲಕಿಯನ್ನು ಯಾರಾದರೂ ಅಪಹರಿಸಿದ್ದಾರಾ ಎಂಬ ಶಂಕೆಯೂ ಪೋಷಕರಿಂದ ವ್ಯಕ್ತವಾಗಿದೆ. ಈ ನಿಟ್ಟಿನಲ್ಲೂ ತನಿಖೆ ಮುಂದುವರೆದಿದೆ.