Featured

21 ವರ್ಷದ ಬಳಿಕ ಉಡುಪಿಯ ವ್ಯಕ್ತಿಯನ್ನು ಸೌದಿಯಿಂದ ತವರಿಗೆ ‍ಮರಳಿಸುವಲ್ಲಿ ಯಶಸ್ವಿಯಾದ ಐಎಸ್ಎಫ್ : Vishwanews24

ಉಡುಪಿಯ ವ್ಯಕ್ತಿಯನ್ನು 21 ವರ್ಷದ ಬಳಿಕ ಸೌದಿಯಿಂದ ತವರಿಗೆ ‍ಮರಳಿಸುವಲ್ಲಿ ಯಶಸ್ವಿಯಾದ ಐಎಸ್ಎಫ್ Vishwanews24

ಉಡುಪಿ: ಕಳೆದ ಇಪ್ಪತ್ತೊಂದು ವರ್ಷಗಳಿಂದ ಸೌದಿ ಅರೇಬಿಯಾದಿಂದ ತಾಯ್ನಾಡಿಗೆ ಮರಳದೆ ಕುಟುಂಬದಿಂದ ದೂರವಾಗಿದ್ದು ಗಂಭೀರ ಕಾಯಿಲೆ ಪೀಡಿತರಾಗಿದ್ದ 68ರ ಹರೆಯದ ಉಡುಪಿ ತೋನ್ಸೆ ಮೂಲದ ವ್ಯಕ್ತಿಯನ್ನು ತವರಿಗೆ ಮರಳಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಂ (ಐಎಸ್‍ಎಫ್) ಯಶಸ್ವಿಯಾಗಿದೆ. ಸಂತ್ರಸ್ತ ವ್ಯಕ್ತಿ ಇತ್ತೀಚೆಗೆ ವಂದೇ ಭಾರತ್ ವಿಮಾನದ ಮೂಲಕ ಮಂಗಳೂರು ತಲುಪಿದ್ದಾರೆ.

ಉಡುಪಿ ತೋನ್ಸೆ ಯ ಪ್ರಭಾಕರ್, ಕಳೆದ ನಲ್ವತ್ತು ವರ್ಷಗಳಿಂದ ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದು. 2000ನೇ ಇಸವಿಯಲ್ಲಿ ಕೊನೆಯ ಬಾರಿಗೆ ತಾಯ್ನಾಡಿಗೆ ಹೋಗಿ ಬಂದಿದ್ದರು. ನಂತರ ತವರಿಗೆ ಹಿಂದಿರುಗಿರಲಿಲ್ಲ. ಇತ್ತೀಚೆಗೆ ವಾಟ್ಸಪ್‍ನಲ್ಲಿ ಪ್ರಭಾಕರ್ ರವರು ಚಿಂತಾಜನಕ ಸ್ಥಿತಿಯಲ್ಲಿರುವ ವಿಷಯ ವೈರಲ್ ಆಗಿತ್ತು ಮಾತ್ರವಲ್ಲದೆ ಊರಿನಿಂದ ಎಸ್.ಡಿ.ಪಿ.ಐ. ಪಕ್ಷ ಕೂಡಾ ಐ.ಎಸ್.ಎಫ್ ದಮ್ಮಾಂ ಘಟಕವನ್ನು ಸಂಪರ್ಕಿಸಿ ಸಹಾಯ ನೀಡಲು ಕೋರಿತ್ತು. ಹೊಟ್ಟೆ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದ ಅವರು ರಕ್ತಭೇದಿ ಮಾಡುತ್ತಿದ್ದರು ಮತ್ತು ಚಿಕಿತ್ಸೆಯಿಲ್ಲದೆ ನರಳುತ್ತಿದ್ದರು.

ಮಾಹಿತಿ ಕಲೆ ಹಾಕಿದ ಇಂಡಿಯನ್ ಸೋಶಿಯಲ್ ಫೋರಂ ದಮ್ಮಾಮ್ ಘಟಕ ವೆಲ್ಫೇರ್ ವಿಭಾಗದ ಮುಹಮ್ಮದ್ ಅಲಿ ಮೂಳೂರು ರವರ ನೇತೃತ್ವದ ಲ್ಲಿ ಒಂದು ತಂಡ ರಚಿಸಿತು. ಅದರಂತೆ ಇಬ್ರಾಹೀಂ ಕೃಷ್ಣಾಪುರ ಹಾಗೂ ಇಮ್ರಾನ್ ಕಾಟಿಪಳ್ಳ ರವರು ಜೊತೆಗೂಡಿ ದಮ್ಮಾಮ್ ನ ಸೀಕೊದಲ್ಲಿ ಪ್ರಭಾಕರ್ ರವರನ್ನು ಪತ್ತೆಮಾಡಿತ್ತು. ನೈರ್ಮಲ್ಯ ರಹಿತ ಕೊಠಡಿಯೊಂದರಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಪ್ರಭಾಕರ್ ಪತ್ತೆಯಾಗಿದ್ದರು. ನಾಲ್ಕು ವರ್ಷಗಳಿಂದ ಅವರ ಇಕಾಮಾ ನವೀಕರಣಗೊಂಡಿರಲಿಲ್ಲ. ಈ ಸಂದರ್ಭದಲ್ಲಿ ತಕ್ಷಣವೇ ಐ.ಎಸ್.ಎಫ್ ಅವರನ್ನು ಅಲ್ ಖೋಬಾರ್ ನ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿ ಪ್ರಾರ್ಥಮಿಕ ಚಿಕಿತ್ಸೆಯ ಏರ್ಪಾಡು ಮಾಡಿತ್ತು ಆದರೆ ಇಕಾಮ ಮತ್ತು ಆರೋಗ್ಯ ವಿಮೆ ಅವಧಿ ಮುಗಿದ ಕಾರಣ ಅವರನ್ನು ನಂತರ ಕಿಂಗ್ ಫಹದ್ ಯೂನಿವರ್ಸಿಟಿ ಆಸ್ಪತ್ರೆಗೆ ವರ್ಗಾಯಿಸಲು ವೆಲ್ಫೇರ್ ತಂಡ ನಿರ್ಧರಿಸಿತು. ಅಲ್ಲಿ ಸುಮಾರು ಎರಡು ವಾರದ ವರೆಗೆ ಅಚ್ಚುಕಟ್ಟಿನ ಶುಶ್ರೂಷೆ ಗಳನ್ನು ನೀಡಿದ ಆಸ್ಪತ್ರೆ ,ಅವರನ್ನು ಎಲ್ಲಾ ತರದ ಪರೀಕ್ಷೆಗೆ ಒಳಪಡಿಸಿ, ಅವರಿಗೆ ಗಂಭೀರ ಕಾಯಿಲೆ ಇರುವುದು ಅಲ್ಲಿನ ವೈದ್ಯರ ತಂಡ ಪತ್ತೆ ಹಚ್ಚಿತು. ಹೆಚ್ಚಿನ ಚಿಕಿತ್ಸೆಗಾಗಿ ತವರಿಗೆ ಮರಳಿಸುವುದು ಅನಿವಾರ್ಯವಾಗಿತ್ತು.

ಇನ್ನೊಂದು ಕಡೆ ಅವರ ಪ್ರಾಯೋಜಕ ರನ್ನು ಸಂಪರ್ಕಿಸಿದ ತಂಡ, ಅವರ ಪಾಸ್ ಪೋರ್ಟ್ ಅವಧಿ ಕೂಡಾ ಮುಗಿದಿರುವುದನ್ನು ಮನಗಂಡಿತು. ಐ.ಎಸ್. ಎಫ್. ತಕ್ಷಣವೇ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಪ್ರಭಾಕರ್ ಮಾಹಿತಿಯನ್ನು ಸ್ಥೂಲವಾಗಿ ವಿವರಿಸಿತು ಮತ್ತು ಊರಿಗೆ ತೆರಳಲು ಔಪಚಾರಿಕವಾಗಿ ಬೇಕಾದ ದಾಖಲೆ ಪತ್ರಗಳನ್ನು ಕೋರಿತ್ತು. ಅದರಂತೆ ತಕ್ಷಣ ಸ್ಪಂದಿಸಿದ ಭಾರತೀಯ ರಾಯಭಾರಿ ಕಚೇರಿ, ಔಪಚಾರಿಕವಾಗಿ ದೃಡೀಕರಣ ಪತ್ರವನ್ನು ಹಾಗೂ ಎಮರ್ಜೆನ್ಸಿ ಸರ್ಟಿಫಿಕೇಟ್ ಬಿಡುಗಡೆಗೊಳಿಸಿ ಊರಿಗೆ ಮರಳಲು ಅನುಕೂಲ ಮಾಡಿಕೊಟ್ಟಿತು. ನಿರಂತರ ಸೌದಿ ಕಾರ್ಮಿಕ ಸಚಿವಾಲಯದ ಸಂಪರ್ಕದಲ್ಲಿದ್ದ ವೆಲ್ಫೇರ್ ತಂಡ ಅವರ ಫೈನಲ್ ಎಕ್ಸಿಟ್ ಗೆ ಬೇಕಾದ ಏರ್ಪಾಟುಗಳನ್ನೂ ಕೂಡಾ ಮಾಡಿ ಮುಗಿಸಿತು.

ಪ್ರಭಾಕರ್ ತವರು ತಲುಪಿದ ಬಳಿಕ ವರ ಚಿಕಿತ್ಸೆಗೆ ಸಂಬಂಧಿಸಿದ ಏರ್ಪಾಟುಗಳನ್ನು ಮಾಡುವಂತೆ ಐ.ಎಸ್.ಎಫ್ ಸಮಿತಿ ಊರಿನ ಎಸ್.ಡಿ.ಪಿ.ಐ ಪಕ್ಷವನ್ನು ಕೋರಿದ್ದು ಪಕ್ಷದ ಕಾರ್ಯಕರ್ತರು ಅವರನ್ನು ವಿಮಾನ ನಿಲ್ದಾಣದಿಂದ ಆಂಬ್ಯುಲೆನ್ಸ್ ಮೂಲಕ ಎಂ.ಐ.ಒ ಆಸ್ಪತ್ರೆಗೆ ಕರೆದೊಯ್ದಿದ್ದು, ಮುಂದಿನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.

ಇದೊಂದು ಕಠಿಣ ಹಾಗೂ ತುರ್ತು ಸೇವೆಯ ಕೆಲಸವಾಗಿದ್ದು, ನಿರಂತರವಾಗಿ ಎರಡು ವಾರಗಳ ಕಾಲ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ ವೆಲ್ಫೇರ್ ಟೀಂ ಗೆ ಐ.ಎಸ್. ಎಫ್. ಅಭಿನಂದನೆ ಸಲ್ಲಿಸಿದೆ. ಭಾರತೀಯ ರಾಯಭಾರಿ ಕಚೇರಿ ಯ ತಕ್ಷಣದ ಸ್ಪಂದನೆ ಹಾಗೂ ಟಿಕೆಟ್ ಹಾಗೂ ಇನ್ನಿತರ ಕೆಲಸಗಳಿಗೆ ಹಣಕಾಸಿನ ನೆರವು ನೀಡಿದ ಎಂಎಎಸ್‍ಎ ಸಂಘಟನೆಯ ಅಧ್ಯಕ್ಷರಾದ ಸತೀಶ್ ಬಜಾಲ್, ಐಎಸ್‍ಎಫ್ ಹಿತೈಷಿ, ಉದಾರಿ ಜಾಯ್ ಫೆನಾರ್ಂಡಿಸ್ ಹಾಗೂ ದಮ್ಮಾಮ್ ಹೆಲ್ತ್ ಕ್ಲಿನಿಕ್ ನ ವೈದ್ಯ ಡಾ.ಮುಹಮ್ಮದ್ ವಾಸೀಂ ಭಟ್ಕಳ್ ರವರನ್ನೂ ಕೂಡಾ ಐಎಸ್‍ಎಫ್ ಈ ಸಂದರ್ಭದಲ್ಲಿ ಅಭಿನಂದಿಸಿ ಮುಂದೆಯೂ ಎಲ್ಲರ ಸಹಕಾರ ಇದ್ದರೆ ಖಂಡಿತ ಎಂತಹ ಕಠಿಣ ಪರಿಸ್ಥಿತಿ ಬಂದರೂ ನಿಭಾಯಿಸಲು ಸಾಧ್ಯ ಎಂದು ಇಂಡಿಯನ್ ಸೋಷಿಯಲ್ ಫೋರಂ ತಿಳಿಸಿದೆ.

Vishwa News 24

Recent Posts

ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ – vishwanews24

ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ…

15 hours ago

ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ – vishwanews24

ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ ಹಾಸನ: ಡೆತ್ ನೋಟ್ ಬರೆದಿಟ್ಟು 21 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೋರ್ವ…

16 hours ago

ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ – vishwanews24

ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘ ಸಭೆ ೨೦೨೩-೨೦೨೪ ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ…

16 hours ago

ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ತರಕಾರಿಗಳಿಗೆ ಕೆಮಿಕಲ್‌ ಸ್ಪ್ರೇ ಬಗ್ಗೆ ಕ್ರಮ : ಖಾದರ್‌ – vishwanews24

ಆನ್‌ಲೈನ್‌ನಲ್ಲಿ ಮಾರಾಟ ಮಾಡೋ ತರಕಾರಿಗೆ ಕೆಮಿಕಲ್‌ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ.. ಪರಿಶೀಲನೆ ಮಾಡ್ತಿದ್ದೇವೆ, ಮುಂದಿನ ದಿನಗಳಲ್ಲಿ ಕ್ರಮ…

17 hours ago

ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ – vishwanews24

ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ ಕಾಸರಗೋಡು :…

18 hours ago

ಇನ್ನು ಮುಂದೆ ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ:  CM ಡಿ.ಕೆ. ಶಿ ಸ್ಪಷ್ಟನೆ – vishwanews24

ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ:  ಡಿ.ಕೆ. ಶಿ ಸ್ಪಷ್ಟನೆ…

18 hours ago