ಉಡುಪಿ: ಅಧಿಕ ಲಾಭಾಂಶದ ಆಸೆಗೆ ಆನ್ಲೈನ್ ಲಿಂಕ್ ಬಳಸಿ ಹೂಡಿಕೆ ಮಾಡಿದ ವಿದೇಶದಲ್ಲಿ ಉದ್ಯೋಗದಲ್ಲಿರುವ ಹೆರ್ಮುಂಡೆ ನಿವಾಸಿಯೊಬ್ಬರು 12.25 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಕಾರ್ಕಳ ತಾಲೂಕಿನ ಹೆರ್ಮುಂಡೆ ವಿಷ್ಣುಮೂರ್ತಿ ದೇವಸ್ಥಾನ ಸಮೀಪದ ಬೀಜಪಾಡಿ ಮನೆಯ ಲಿಯೋ ಜೆರೋಮ್ ಮೆಂಡೋನ್ಸಾ (40) ಅವರು ಸುಮಾರು 15 ವರ್ಷಗಳಿಂದ ದುಬ್ಬಾಯಲ್ಲಿ ಕಂಪ್ಯೂಟರ್ ಎಕ್ಸಸರೀಸ್ ಸೇಲ್ಸ್ ಕೆಲಸ ಮಾಡಿಕೊಂಡಿದ್ದು, ಕಾರ್ಕಳ ಕಣಜಾರು ಕೆನರಾ ಬ್ಯಾಂಕ್ನಲ್ಲಿ ಎನ್ಆರ್ಐ ಖಾತೆ, ನಿಟ್ಟೆ ದೂಪದಕಟ್ಟೆ ಯೂನಿಯನ್ ಬ್ಯಾಂಕ್ನಲ್ಲಿ ಎಸ್ಬಿ ಖಾತೆ ಹೊಂದಿದ್ದರು.
ನ. 12ರಂದು ಲಿಯೋ ಅವರು ದುಬ್ಬಾಯಲ್ಲಿರುವಾಗ ಅವರನ್ನು ಯಾರೋ ಅಪರಿಚಿತರು ‘ಇನ್ಸ್ಟಾಫ್ಲೋ ಅರ್ನಿಂಗ್’ ಎಂಬ ಹೆಸರಿನ ಟೆಲಿಗ್ರಾಮ್ ಗ್ರೂಪಿಗೆ ಸೇರಿಸಿದ್ದು, ಅದರಲ್ಲಿ ಪ್ರಿಯಾ, ಡಿಪನ್ನಿತಾ ಖಾತೆಯಿಂದ ಚಾಟಿಂಗ್ ಆರಂಬಿಸಿ ರೆವೆನ್ಯೂ ಟಾಸ್ಕ್ನಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದರು. ಅದರಂತೆ ಲಿಯೋ ಮೊದಲು ಅವರು ತಿಳಿಸಿದ ಖಾತೆಗೆ 1,100 ರೂ. ಹೂಡಿಕೆ ಮಾಡಿದ್ದು 1,530 ರೂ. ಲಾಭ ಬಂದಿರುತ್ತದೆ. ಹಾಗೆಯೇ ಸುಮಾರು 10 12 ಬಾರಿ 1,100 ರೂಪಾಯಿಯಂತೆ ಅವರು ತಿಳಿಸಿದ ಖಾತೆಗೆ ಹೂಡಿಕೆ ಮಾಡಿದ್ದು, ಪ್ರತೀ ಬಾರಿಯೂ 1,530 ರೂ. ಲಾಭಾಂಶ ದೊರೆತಿರುತ್ತದೆ. ಅನಂತರ ನ.14ರಂದು ನಿಶ್ಚಿತಾ ಶೆಟ್ಟಿ ಎಂಬ ಖಾತೆದಾರರು ಚಾಟಿಂಗ್ ಮೂಲಕ ಲಿಯೋ ಅವರಿಗೆ ಹಲವು ಟಾಸ್ಕ್ ನೀಡಿದ್ದರು.
digitvisionuoce.cc ಎಂಬ ವೆಬ್ ವಿಳಾಸ ನೀಡಿ, ಅದರಲ್ಲಿ ಯುಸರ್ ನೇಮ್, ಐಡಿ ಹಾಕುವಂತೆ ತಿಳಿಸಿದ್ದರು, ಅದರಂತೆ ಯುಸರ್ ನೇಮ್ ಹಾಗೂ ಐಡಿ ಹಾಕಿದರು. ಆ ಬಳಿಕ ಅವರು 4,00,000 ರೂ.ಗಳನ್ನು WIPRO BTC/USDT ಷೇರ್ನಲ್ಲಿ ಹೂಡಿಕೆ ಮಾಡುವಂತೆ ತಿಳಿಸಿದ್ದು, ನ. 15 ರಂದು ಸಾಕ್ಷಿ ವೈಷ್ಣವ್ ಎಂಬ ಹೆಸರಿನ ಬ್ಯಾಂಕ್ ಖಾತೆಯನ್ನು ನೀಡಿ ಅದಕ್ಕೆ 50,000 ರೂ. ಗೂಗಲ್ ಪೇ ಮಾಡುವಂತೆ ತಿಳಿಸಿದಂತೆ ಲಿಯೋ ಅವರು 50 ಸಾವಿರ ಗೂಗಲ್ ಪೇ ಮಾಡಿದರು. ಅನಂತರ ನ. 15ರಿಂದ 17ರ ವರೆಗೆ ಹಂತ ಹಂತವಾಗಿ 12,25,000 ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, ನಿಶ್ಮಿತಾ ಶೆಟ್ಟಿ ಎಂಬ ಖಾತೆದಾರರು ಲಿಯೋ ಅವರು ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಅದರ ಲಾಭಾಂಶವನ್ನಾಗಲೀ ನೀಡದೇ ವಂಚನೆ ಮಾಡಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…