ಉಡುಪಿ : ಕರಾವಳಿ ಭಾಗದಲ್ಲಿ ಸೇನೆಗೆ ಇಚ್ಚಿಸುವವರಿಗಾಗಿ ಸೇನಾ ಆಯ್ಕೆ ಶಾಲೆ : ಕೋಟಾ ಶ್ರೀನಿವಾಸ ಪೂಜಾರಿ – Vishwnaews24
ಉಡುಪಿ : ಕರಾವಳಿ ಭಾಗದಲ್ಲಿ ಸೇನೆಗೆ ಇಚ್ಚಿಸುವವರಿಗಾಗಿ ಸೇನಾ ಆಯ್ಕೆ ಶಾಲೆ : ಕೋಟಾ ಶ್ರೀನಿವಾಸ ಪೂಜಾರಿ – Vishwnaews24
ಉಡುಪಿ : ಕರಾವಳಿ ಭಾಗದಲ್ಲಿ ಸೇನೆಗೆ ಸೇರಲು ಇಚ್ಚಿಸುವವರಿಗಾಗಿ ಉಡುಪಿ, ದ.ಕ ಹಾಗೂ ಉತ್ತರ ಕನ್ನಡದಲ್ಲಿ ಸೇನಾ ಆಯ್ಕೆ ಶಾಲೆಗಳನ್ನು ತೆಗೆಯಲಾಗುವುದು ಎಂದು ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಅವರು, ಸೇನೆಗೆ ಸೇರುವ ಆಸಕ್ತರಿಗಾಗಿ ಉಡುಪಿಯಲ್ಲಿ ಸ್ಥಾಪಿಸುವ ಸಂಸ್ಥೆಗೆ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಸಂಸ್ಥೆ, ದ.ಕ ಜಿಲ್ಲೆಯಲ್ಲಿ ರಾಣಿ ಅಬ್ಬಕ್ಕ ಸೇನಾ ಆಯ್ಕೆ ಸಂಸ್ಥೆ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂಜಾ ನಾಯ್ಕ್ ಸೇನಾ ಆಯ್ಕೆ ಸಂಸ್ಥೆ ಎಂಬ ಹೆಸರಿನಲ್ಲಿ ಮೂರು ಸೇನಾ ತರಬೇತಿ ಶಾಲೆಗಳನ್ನು ತೆರೆಯಲಾಗುವುದು ಎಂದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಜನಪರ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡಿದ ಅವರು, ಕೇಂದ್ರ ಸರಕಾರ 8 ವರ್ಷಗಳಲ್ಲಿ ಸೇವಾ ಸುಶಾಸನ, ಬಡವರ ಕಲ್ಯಾಣ ,ಸೇವಾ ಯೋಜನೆ ಅಡಿಯಲ್ಲಿ ಅನೇಕ ಜನಪರ ಕಾರ್ಯಕ್ರಮ ಗಳನ್ನು ಹಮ್ಮಿ ಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ನಿರ್ವಹಣೆ, ಅಭಿವೃದ್ಧಿ ಕಾರ್ಯಗಳು, ಸಾರ್ವಜನಿಕ ಸೇವೆಗಳು ಬಡವರಿಗಾಗಿ ರೂಪಿಸಿದ ಹತ್ತಾರು ಯೋಜನೆಗಳು ಬಿಜೆಪಿ ಕಾರ್ಯ ಕರ್ತರಿಗೆ ಹೆಮ್ಮೆ ಪಡುವಂತಹದ್ದಾಗಿದೆ ಎಂದರು.

ಕೇಂದ್ರ ಸರಕಾರ ರಾಜ್ಯದ ಅಭಿವೃದ್ಧಿಗೆ 1,29,776 ಕೋ ರೂ. ಅನುದಾನ ಮಂಜೂರು ಮಾಡಿತ್ತು. ಸುಮಾರು1.15 ಲಕ್ಷ ಕೋಟಿ ರೂ.ಗಳನ್ನು ವಿಮಾ ಯೋಜನೆ ಅಡಿಯಲ್ಲಿ ದೇಶದ ರೈತರು ಪಡೆದಿದ್ದಾರೆ. ರೈತರ ಬೆಲೆ ಸಾಗಾಣಿಕೆ ಗಾಗಿ ವಿಶೇಷ ರೈಲು ಸೇವೆ ನೀಡಲಾಗಿದೆ.
ಇದೇ ವೇಳೆ ಅವರು, ಇಂಧನ ಬೆಲೆ ಹೆಚ್ಚಾದಾಗ ಟೀಕೆ ಮಾಡುವವರು ಬೆಲೆ ಕಡಿಮೆ ಅದಾಗ ಸ್ವಾಗತ ಮಾಡುವುದಿಲ್ಲ ಎಂಬ ಆತಂಕ ವಿದೆ. ಬೆಲೆ ಏರಿಕೆ – ಇಳಿಕೆ ಸ್ವಾಭಾವಿಕ ವಾಗಿದ್ದು ಬೆಲೆಗಳನ್ನು ನಿಯಂತ್ರಣ ಮಾಡುವುದು ಸರಕಾರದ ಜವಾಬ್ದಾರಿ ಅದನ್ನು ಸರಕಾರ ಮಾಡುತ್ತದೆ ಎಂದರು. ಇದೇ ವೇಳೆ ಕಾರ್ಕಳದ ಬೋಳ ಗ್ರಾಮ ಪಂಚಾಯತ್ ನಲ್ಲಿ ನಾಥೂರಾಮ್ ಗೋಡ್ಸೆ ಹೆಸರಿನ ನಾಮ ಫಲಕ ಅಳವಡಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಇದು ಸರಕಾರದ ವೈಫಲ್ಯ ಅಲ್ಲ. ಅನಾಗರಿಕತೆ, ಹೇಡಿತನದ ಹೇಯ ಕೃತ್ಯ ಎಂದರು. ಹಾಗೂ ಇದಕ್ಕೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ ಅದನ್ನು ತೆರವುಗೊಳಿಸಲಾಗಿದೆ ಎಂದರು.
ಮಂಗಳೂರು : ಜೂ.11 ಮತ್ತು 12 ರಂದು ಪಿಲಿಕುಳದಲ್ಲಿ ಹಣ್ಣುಗಳ ಉತ್ಸವ ಹಾಗೂ ಹಲಸು ಮೇಳ – Vishwnaews24
